ಟ್ವೀಟರ್ ಹೇಳುವುದೇನು?; 250 ಖಾತೆಗಳನ್ನು ತಡೆಹಿಡಿದ ಟ್ವಿಟರ್
ಕಿಸಾನ್ ಏಕ್ತಾ ಮೋರ್ಚಾ, ಏಕ್ತಾ ಉರಗಹನ್ ಮತ್ತು ಆಮ್ ಆದ್ಮಿ ಪಕ್ಷದ ಕೆಲವು ಶಾಸಕರ ಖಾತೆಗಳು ಸೇರಿವೆ.
Team Udayavani, Feb 2, 2021, 12:50 PM IST
ನವದೆಹಲಿ: ಒಟ್ಟು 250 ಖಾತೆಗಳನ್ನು ಸಾಮಾಜಿಕ ತಾಣ ಟ್ವಿಟರ್ ತಡೆಹಿಡಿದಿದೆ. ಈ ಪರಿಸ್ಥಿತಿ ಎದುರಿಸಿರುವ ಖಾತೆಗಳಲ್ಲಿ ಬಹುತೇಕ ಪ್ರಸ್ತುತ ರೈತ ಹೋರಾಟದಲ್ಲಿ ಪಾಲ್ಗೊಂಡವರ ಅಥವಾ ಆ ಹೋರಾಟಕ್ಕೆ ಬೆಂಬಲ ಸೂಚಿಸಿದವರ ಖಾತೆಗಳೇ ಸೇರಿವೆ.
ಇದನ್ನೂ ಓದಿ:ವಿದ್ಯುತ್, ಇಂಟರ್ನೆಟ್ ಸ್ಥಗಿತ: ಫೆ.6ರಂದು ದೇಶಾದ್ಯಂತ ರಸ್ತೆ, ತಡೆ: ರೈತ ಸಂಘಟನೆ
ಈ ಖಾತೆಗಳ ಮೇಲೆ “ನಿಮ್ಮ ಖಾತೆಯನ್ನು ತಡೆಹಿಡಿಯಲಾಗಿದೆ’ ಎಂದು ಬರೆಯಲಾಗಿದೆ. ಅದರ ಕೆಳಗೆ, ಕಾನೂನು ರೀತ್ಯಾ ಬೇಡಿಕೆ ಹಿನ್ನೆಲೆಯಲ್ಲಿ ನಿಮ್ಮ ಖಾತೆಗಳನ್ನು ಭಾರತದಲ್ಲಿ ತಡೆಯಲಾಗಿದೆ ಎಂದು ಬರೆಯಲಾಗಿದೆ. ಮೂಲಗಳ ಪ್ರಕಾರ, ರೈತರ ಹೋರಾಟದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳುವುದೇ, ಖಾತೆಗಳನ್ನು ತಡೆಹಿಡಿದಿರುವುದರ ಹಿಂದಿನ ಉದ್ದೇಶ.
“ಮೋದಿ ಪ್ಲಾನಿಂಗ್ ಫಾರ್ಮರ್ ಜೆನೊಸೈಡ್’ ಎಂಬ ಹ್ಯಾಶ್ ಟ್ಯಾಗ್ ಇಟ್ಟುಕೊಂಡು ಟ್ವೀಟ್ ಮಾಡುತ್ತಿದ್ದ ಖಾತೆಗಳೇ ಇದರಲ್ಲಿ ಹೆಚ್ಚಿವೆ ಎನ್ನುವುದು ಗಮನಾರ್ಹ. ಈ ಖಾತೆಗಳ ಮೂಲಕ ನಕಲಿ, ಸಣ್ಣತನದ, ಪ್ರಚೋದನಾಕಾರಿ ಟ್ವೀಟ್ಗಳನ್ನು ಮಾಡಲಾಗುತ್ತಿತ್ತು ಎಂದು ಸರ್ಕಾರಿ ಮೂಲಗಳು ಹೇಳಿವೆ ಎಂದು ಎನ್ಡಿಟೀವಿ ವರದಿ ಮಾಡಿದೆ.
ತಡೆ ಹಿಡಿಯಲ್ಪಟ್ಟ ಖಾತೆಗಳಲ್ಲಿ ಕಾರಾವಾನ್ ನಿಯತಕಾಲಿಕೆ, ಸಿಪಿಎಂ ನಾಯಕ ಮೊಹಮ್ಮದ್ ಸಲೀಂ, ಕಿಸಾನ್ ಏಕ್ತಾ ಮೋರ್ಚಾ, ಏಕ್ತಾ ಉರಗಹನ್ ಮತ್ತು ಆಮ್ ಆದ್ಮಿ ಪಕ್ಷದ ಕೆಲವು ಶಾಸಕರ ಖಾತೆಗಳು ಸೇರಿವೆ.
ಟ್ವೀಟರ್ ಹೇಳುವುದೇನು?: ಸೂಕ್ತ ಮತ್ತು ಮೌಲ್ಯಯುತವಾದ ಕಾರಣಗಳನ್ನು ಅಧಿಕೃತ ಸಂಸ್ಥೆಗಳು ನೀಡಿದರೆ ಖಾತೆಗಳನ್ನು ತಡೆ ಹಿಡಿಯಲಾಗುತ್ತದೆ ಎಂದು
ಟ್ವಿಟರ್ ಹೇಳಿಕೊಂಡಿದೆ.
ಎಚ್ಚರಿಕೆ ಕೊಟ್ಟ ಕೇಂದ್ರ ಸಚಿವ: ಕೃಷಿ ಕಾಯ್ದೆಗಳ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಪ್ರತಿಪಕ್ಷಗಳಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಎಚ್ಚರಿಸಿದ್ದಾರೆ. ಯಾರು ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಮಾಡುತ್ತಾರೋ, ಅವರಿಗೆ ಈಗಿರುವ ಪ್ರತಿ ಕ್ಷ ಗಳ ಸ್ಥಿತಿಯೇ ಬರಲಿದೆ ಎಂದೂ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ