ಕೋವಿಡ್ ಲಾಕ್ ಡೌನ್ ಎಫೆಕ್ಟ್ : ಈಗ ಪರಿಶುದ್ಧಳಾಗುತ್ತಿದ್ದಾಳೆ ಗಂಗಾ ಮಾತೆ!
Team Udayavani, Apr 4, 2020, 7:29 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಲಾಕ್ಡೌನ್ನಿಂದಾಗಿ 130 ಕೋಟಿ ಜನರು, ಗೃಹಬಂಧನದಲ್ಲಿದ್ದಾರೆ! ಇದರ ಪರಿಣಾಮ, ದಶಕಗಳಿಂದ ಮಲಿನವಾಗಿದ್ದ ಗಂಗಾ ನದಿ, ಈಗ ತಾನೇತಾನಾಗಿ ಶುದ್ಧವಾಗುತ್ತಾ ಸಾಗಿದೆ!
ಈಗ ಗಂಗಾ ನದಿಯ ನೀರು, ಸ್ನಾನ ಮಾಡಲು, ಪ್ರಾಣಿಗಳು ಅಥವಾ ಮೀನು ಸಾಕಾಣಿಕೆಗೆ ಬಳಸುವಂತಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ದತ್ತಾಂಶಗಳು ಹೇಳಿವೆ. ಗಂಗಾ ನದಿ ಮಾತ್ರವಲ್ಲದೆ, ಗಂಗಾ ನದಿಯ ಉಪನದಿಗಳಾದ ಹಿಂಡಾನ್ ಮತ್ತು ಯಮುನಾ ನದಿಗಳಲ್ಲೂ ಮಾಲಿನ್ಯ ಪ್ರಮಾಣ ಗಣನೀಯವಾಗಿ ತಗ್ಗಿದೆ ಎಂದು ಮಂಡಳಿ ತಿಳಿಸಿದೆ.
ಈವರೆಗೆ, ಮನುಷ್ಯರಿಂದ, ಕೈಗಾರಿಕೆಗಳಿಂದ ನದಿಗೆ ಸೇರುತ್ತಿದ್ದ ತ್ಯಾಜ್ಯದಿಂದಾಗಿ ಈ ನದಿಯ ನೀರು ಸ್ನಾನ ಮಾಡದಷ್ಟು ಕಲುಷಿತವಾಗಿತ್ತು. ಬಂಗಾಳ ಕೊಲ್ಲಿಯನ್ನು ಸೇರುವವರೂ ಇದು ನಿರಂತರವಾಗಿ ಕಲುಷಿತಗೊಳ್ಳುತ್ತಾ ಸಾಗಿತ್ತು . ಆದರೀಗ, ಲಾಕ್ ಡೌನ್ನ ಪರಿಣಾಮವಾಗಿ, ನದಿಗೆ ಸೇರುತ್ತಿದ್ದ ತ್ಯಾಜ್ಯ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ನದಿ ನೀರು ಉಪಯೋಗ ಯೋಗ್ಯವಾಗಿ ಬದಲಾಗಿದೆ.
ಕೇಂದ್ರ ಪರಿಸರ ಖಾತೆ ಸಚಿವ ಮನೋಜ್ ಮಿಶ್ರಾ ಅವರು, ‘ನದಿಯಲ್ಲಿ ಈಗಿರುವ ನೀರಿನ ಗುಣಮಟ್ಟವನ್ನು ಪರಿಶೀಲಿಸಿ, ಈವರೆಗೆ ಆಗಿದ್ದ ಮಾಲಿನ್ಯದ ಪ್ರಮಾಣವನ್ನು ಲೆಕ್ಕ ಹಾಕಲು ಇದೇ ಸರಿಯಾದ ಸಮಯ. ಈ ಕುರಿತಂತೆ ಸಿಪಿಸಿಬಿ ಕಾರ್ಯೋನ್ಮುಖವಾಗಬೇಕು” ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್