ಚೆನ್ನೈ: ಮಗಳ ಹತ್ಯೆ ಸುದ್ದಿ ಕೇಳಿ ಅಪ್ಪ ಆತ್ಮಹತ್ಯೆ!
Team Udayavani, Oct 14, 2022, 6:45 PM IST
ಚೆನ್ನೈ: ದುಷ್ಕರ್ಮಿಯೊಬ್ಬ ಚೆನ್ನೈನಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಚಲಿಸುತ್ತಿರುವ ರೈಲಿನ ಮುಂಭಾಗಕ್ಕೆ ದೂಡಿ ಆಕೆಯನ್ನು ಹತ್ಯೆಗೈದ ಬೆನ್ನಲ್ಲೇ, ಆಘಾತ ತಾಳಲಾರದೇ ಆಕೆಯ ತಂದೆ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದ ಸತ್ಯಪ್ರಿಯಾಳನ್ನು ಸತೀಶ್ ಎಂಬಾತ ಕಳೆದ 1 ವರ್ಷದಿಂದ ಚುಡಾಯಿಸುತ್ತಿದ್ದ. ಈ ಕುರಿತು 2 ಬಾರಿ ಸತ್ಯಪ್ರಿಯಾಳ ತಾಯಿ ಪೊಲೀಸರಿಗೆ ದೂರು ನೀಡಿ, ನಂತರ ಸಂಧಾನ ಏರ್ಪಟ್ಟಿತ್ತು. ಗುರುವಾರ ರೈಲು ಹಳಿಯ ಸಮೀಪದಲ್ಲೇ ಸತ್ಯಪ್ರಿಯಾಳೊಂದಿಗೆ ಸತೀಶ್ ವಾಗ್ವಾದಕ್ಕಿಳಿದಿದ್ದ. ಒಂದು ಹಂತದಲ್ಲಿ, ರೈಲು ವೇಗವಾಗಿ ಆಗಮಿಸುತ್ತಿರುವಾಗಲೇ ಆತ ಆಕೆಯನ್ನು ಹಳಿಗೆ ನೂಕಿದ್ದ. ಸತ್ಯಪ್ರಿಯಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಳು.
ಈ ವಿಷಯ ತಿಳಿದು ಆಘಾತಗೊಂಡ ಆಕೆಯ ತಂದೆ, ಶುಕ್ರವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸತೀಶ್ ನಿವೃತ್ತ ಸ್ಪೆಷಲ್ ಸಬ್ಇನ್ಸ್ಪೆಕ್ಟರ್ನ ಪುತ್ರನಾಗಿದ್ದು, ಅದೇ ಠಾಣೆಯಲ್ಲಿ ಸತ್ಯಪ್ರಿಯಾಳ ತಾಯಿ ಹೆಡ್ಕಾನ್ಸ್ಟೆಬಲ್ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು