SBI ಸಲ್ಲಿಸಿದ ಚುನಾವಣ ಬಾಂಡ್ಗಳ ಡೇಟಾ ಬಹಿರಂಗ ಮಾಡಿದ ಆಯೋಗ: ಏನಿದೆ?
Team Udayavani, Mar 14, 2024, 8:34 PM IST
ಹೊಸದಿಲ್ಲಿ: ಭಾರತೀಯ ಚುನಾವಣ ಆಯೋಗವು (ಇಸಿಐ) ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹಂಚಿಕೊಂಡಿರುವ ಚುನಾವಣ ಬಾಂಡ್ಗಳ ವಿವರಗಳನ್ನು ಗುರುವಾರ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಗಮನಾರ್ಹವಾಗಿ, ಉನ್ನತ ನ್ಯಾಯಾಲಯದ ಗಡುವಿನ ಒಂದು ದಿನದ ಮೊದಲು ಡೇಟಾವನ್ನು ಪ್ರಕಟಿಸಲಾಗಿದೆ.
ಮಾರ್ಚ್ 15 ರಂದು ಸಂಜೆ 5 ಗಂಟೆಯೊಳಗೆ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಎಸ್ಬಿಐನಿಂದ ಸ್ವೀಕರಿಸಿದ ವಿವರಗಳನ್ನು ಪ್ರಕಟಿಸಲು ಚುನಾವಣ ಸಮಿತಿಗೆ ಸೂಚಿಸಲಾಗಿತ್ತು.
ಚುನಾವಣ ಸಮಿತಿಯು ಹಂಚಿಕೊಂಡಿರುವ ಡೇಟಾ 2019 ರ ಎಪ್ರಿಲ್ 12 ರಿಂದ ಈಗ ರದ್ದಾಗಿರುವ 1,000 ರಿಂದ 1 ಕೋಟಿ ರೂ ಮೌಲ್ಯದ ಮುಖಬೆಲೆಯ ಚುನಾವಣ ಬಾಂಡ್ಗಳ ಖರೀದಿಯನ್ನು ಬಹಿರಂಗಪಡಿಸಿದೆ. ಮಾಹಿತಿಯು ಕಂಪನಿಗಳು ಮತ್ತು ವ್ಯಕ್ತಿಗಳು ಮಾಡಿದ ಖರೀದಿಗಳನ್ನು ಸಹ ತೋರಿಸಿದೆ.
ಎಸ್ಬಿಐ ಈಗ ರದ್ದಾದ ಚುನಾವಣ ಬಾಂಡ್ಗಳನ್ನು ಖರೀದಿಸಿದ ಘಟಕಗಳು ಮತ್ತು ಮಂಗಳವಾರ ಸಂಜೆ ಅವುಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ಚುನಾವಣ ಸಂಸ್ಥೆಗೆ ಸಲ್ಲಿಸಿತ್ತು.
ಏನಿದೆ?
ವಿವರಗಳ ಮೊದಲ ಭಾಗದಲ್ಲಿ ಚುನಾವಣ ಬಾಂಡ್ಗಳನ್ನು ಖರೀದಿಸಿದ ಘಟಕಗಳನ್ನು ವಿವರಿಸುವ 337 ಪುಟಗಳನ್ನು ಒಳಗೊಂಡಿದೆ. 426 ಪುಟಗಳನ್ನು ಹೊಂದಿರುವ ಎರಡನೇ ಭಾಗವು ರಾಜಕೀಯ ಪಕ್ಷಗಳ ವಿವರಗಳನ್ನು ಒದಗಿಸಿದೆ.
ಚುನಾವಣ ಬಾಂಡ್ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಗ್ರಾಸಿಮ್ ಇಂಡಸ್ಟ್ರೀಸ್, ಮೇಘಾ ಇಂಜಿನಿಯರಿಂಗ್, ಟೊರೆಂಟ್ ಪವರ್, ಭಾರ್ತಿ ಏರ್ಟೆಲ್, ಡಿಎಲ್ಎಫ್ ಕಮರ್ಷಿಯಲ್ ಡೆವಲಪರ್ಸ್ ಮತ್ತು ವೇದಾಂತ ಲಿ.
ಚುನಾವಣ ಬಾಂಡ್ಗಳ ಖರೀದಿದಾರರಲ್ಲಿ ಅಪೊಲೊ ಟೈರ್ಸ್, ಲಕ್ಷ್ಮಿ ಮಿತ್ತಲ್, ಎಡೆಲ್ವೀಸ್, ಪಿವಿಆರ್, ಕೆವೆಂಟರ್, ಸುಲಾ ವೈನ್, ವೆಲ್ಸ್ಪನ್, ಸನ್ ಫಾರ್ಮಾ ಸೇರಿವೆ.
ಚುನಾವಣ ಬಾಂಡ್ಗಳ ಮೂಲಕ ಹಣವನ್ನು ಸ್ವೀಕರಿಸಿರುವ ಪಕ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಬಿಆರ್ಎಸ್, ಶಿವಸೇನೆ, ಟಿಡಿಪಿ, ವೈಎಸ್ಆರ್ ಕಾಂಗ್ರೆಸ್, ಡಿಎಂಕೆ, ಜೆಡಿಎಸ್, ಎನ್ಸಿಪಿ, ತೃಣಮೂಲ ಕಾಂಗ್ರೆಸ್, ಜೆಡಿಯು, ಆರ್ಜೆಡಿ, ಎಎಪಿ, ಎಸ್ಪಿ ಸೇರಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ