ಕೋವಿಡ್ ವಿರುದ್ಧ ಮಹಾಸಮರ : ಮುಂಬಯಿ ಸರಕಾರಿ ಆಸ್ಪತ್ರೆಗಳಿಗೆ ತಾಜ್ ನಿಂದ ಉಚಿತ ಆಹಾರ ಪೂರೈಕೆ
Team Udayavani, Mar 27, 2020, 8:48 PM IST
ಮುಂಬಯಿ: ಕೋವಿಡ್ 19 ಮಹಾಮಾರಿಯ ವಿರುದ್ಧ ಮುಂಬಯಿ ಸಮರ ಸಾರಿದೆ. ಈ ಮಹಾಮಾರಿಗೆ ವಾಣಿಜ್ಯ ನಗರಿಯಲ್ಲಿ ಇದುವರೆಗೆ ಐವರು ಬಲಿಯಾಗಿದ್ದಾರೆ. ನಗರದ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ಸೋಂಕುಪೀಡಿತರು ಐಸೊಲೇಷನ್ ನಲ್ಲಿದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಬೃಹನ್ಮುಂಬಯಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ 19 ಸೋಂಕಿತ ರೋಗಿಗಳಿಗೆ ಮತ್ತು ಅವರನ್ನು ಆರೈಕರ ಮಾಡುತ್ತಿರುವ ವೈದ್ಯರು, ನರ್ಸ್ ಗಳು ಮತ್ತು ಇತರೇ ಸಿಬ್ಬಂದಿಗಳಿಗೆ ಇಂಡಿಯನ್ ಹೊಟೇಲ್ಸ್ ಕಂಪೆನಿ ಲಿಮಿಟೆಡ್ ಆಡಳಿತಕ್ಕೊಳಪಡುವ ತಾಜ್ ಹೊಟೇಲ್ ನಿಂದ ಉಚಿತ ಆಹಾರ ಪೂರೈಕೆಸಲಾಗುತ್ತಿದೆ.
Taj group of hotels are sending free food for the doctors in government hospitals in Mumbai. What a fine humanitarian act!@TataCompanies always stand above the rest in the time of crisis ???? pic.twitter.com/bOddbxoXwj
— Harsh Goenka (@hvgoenka) March 27, 2020
ಈ ವಿಷಯವನ್ನು ಬೃಹನ್ಮುಂಬಯಿ ಆಡಳಿತ ವರ್ಗವೂ ಖಚಿತ ಪಡಿಸಿದ್ದು ತನ್ನ ವ್ಯಾಪ್ತಿಯಲ್ಲಿ ಬರುವ ಸರಕಾರಿ ಆಸ್ಪತ್ರೆಗಳಿಗೆ ಉಚಿತ ಊಟವನ್ನು ಪೂರೈಸುವ ನಿಟ್ಟಿನಲ್ಲಿ ತಾಜ್ ಹೊಟೇಲ್ ಸಮೂಹದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.
ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುತ್ತಿರುವ ಊಟದಲ್ಲಿ ಅನ್ನ, ದಾಲ್, ಪಲ್ಯ, ಬನ್, ಮಂಚ್ ನಟ್ಸ್ ಮತ್ತು ಸಣ್ಣ ಪ್ಯಾಕೆಟ್ ಅಮುಲ್ ಬೆಣ್ಣೆ ಇರಿಸಲಾಗಿದೆ.
ಸಂಕಷ್ಟದ ಸಮಯದಲ್ಲಿ ಆರೋಗ್ಯ ಪಾಲಕರು ಮತ್ತು ರೋಗಿಗಳ ಅಗತ್ಯತೆಗೆ ಸ್ಪಂದಿಸುತ್ತಿರುವ ತಾಜ್ ಹೊಟೇಲ್ ನ ಈ ಉತ್ತಮ ಕೆಲಸವನ್ನು ವಿರಾಟ್ ಕೊಹ್ಲ ಸಹಿತ ಹಲವರು ಪ್ರಶಂಸಿದ್ದಾರೆ.
ಸಂಕಷ್ಟದ ಸಂದರ್ಭದಲ್ಲಿ ಟಾಟಾ ಸಂಸ್ಥೆಗಳು ಎಲ್ಲರಿಗಿಂತ ಮೇಲ್ಪಂಕ್ತಿಯಲ್ಲಿರುತ್ತದೆ ಎಂದು ಉದ್ಯಮಿ ಹರ್ಷ ಗೊಯಂಕಾ ಅವರು ತಮ್ಮ ಟ್ವೀಟ್ ನಲ್ಲಿ ಪ್ರಶಂಸಿದ್ದಾರೆ.
#QuickRecap (4/4)
✅BMC collaborated with Taj Caterers, who are providing complimentary food to those admitted at @mybmc Hospitals, bringing smiles & saving administrative time.
✅Disinfection being done actively in areas around hospitals, markets, etc.#NaToCorona pic.twitter.com/oc09fUyqJZ
— माझी Mumbai, आपली BMC (@mybmc) March 26, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ