ಗಡಿರೇಖೆ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ

ವಿದೇಶಾಂಗ ಸಚಿವ ಜೈಶಂಕರ್‌ ಸ್ಪಷ್ಟನೆ

Team Udayavani, Feb 27, 2021, 6:20 AM IST

ಗಡಿರೇಖೆ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ

ಹೊಸದಿಲ್ಲಿ: “ಭಾರತ- ಚೀನ ನಡುವಿನ ಗಡಿರೇಖೆ ಮರು ಗುರುತು ಪ್ರಶ್ನೆ ಬಗೆಹರಿಸಲು ಇನ್ನೂ ಸಮಯ ಬೇಕಾಗಬಹುದು. ಆದರೆ ಅದಕ್ಕಿಂತ ಮೊದಲು ಗಡಿಯಲ್ಲಿನ ಶಾಂತಿ- ನೆಮ್ಮದಿಗೆ ಭಂಗ ತರುವ ಪ್ರಯತ್ನಗಳು, ಸಂಘರ್ಷಗಳನ್ನು ಪರಿಹರಿಸಲು ತುರ್ತು ಕ್ರಮಗಳನ್ನು ರೂಪಿಸಬೇಕಿದೆ’ ಎಂದು ವಿದೇಶಾಂಗ ಸಚಿವ  ಎಸ್‌. ಜೈಶಂಕರ್‌ ಪ್ರತಿಪಾದಿಸಿದರು.

ಪ್ಯಾಂಗಾಂಗ್‌ ತ್ಸೋದಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಚೀನದ ವಿದೇಶಾಂಗ ಸಚಿವ ವ್ಯಾಂಗ್‌ ಯಿ ಜತೆ 73 ನಿಮಿಷಗಳ ಕಾಲ ಜೈಶಂಕರ್‌ ದೂರವಾಣಿ ಸಂಭಾಷಣೆ ನಡೆಸಿ, ಲಡಾಖ್‌ ಎಲ್‌ಎಸಿಯ ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಿದ್ದಾರೆ. “ಭಾರತ- ಚೀನ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಯಾಗಲು ಗಡಿಯಲ್ಲಿ ಶಾಂತಿ ಮತ್ತೆ ನೆಮ್ಮದಿಗಳ ಮರುಸ್ಥಾಪನೆ ಅತ್ಯವಶ್ಯ. ಪ್ಯಾಂಗಾಂಗ್‌ನ ಬಳಿಕ ಈಗ ಮುಂದಿನ ಬಿಕ್ಕಟ್ಟಿನ ಪ್ರದೇಶಗಳತ್ತ ಉಭಯ ರಾಷ್ಟ್ರಗಳು ತುರ್ತು ಗಮನಹರಿಸಬೇಕಿದೆ’ ಎಂದು ಹೇಳಿದ್ದಾರೆ.

ಹಾಟ್‌ಲೈನ್‌ ಸಂಪರ್ಕ: ಸಮಯೋಚಿತ ವೀಕ್ಷಣೆಗಳ ವಿನಿಮಯಕ್ಕೆ ಹಾಟ್‌ಲೈನ್‌ ಸಂಪರ್ಕ ಆರಂಭಿಸಲು ಉಭಯ ರಾಷ್ಟ್ರಗಳೂ ಫೋನ್‌ ಮಾತುಕತೆಯಲ್ಲಿ ಒಪ್ಪಿಗೆ ಸೂಚಿಸಿವೆ ಎಂದು ಮೂಲಗಳು ತಿಳಿಸಿವೆ.

ಚೀನ- ಪಾಕ್‌ ನಿಲುವಿಗೆ ಬೈಡೆನ್‌ ಕಾರಣ? :

ಎಲ್‌ಎಸಿಯಲ್ಲಿ ಸೇನೆ ಹಿಂತೆಗೆದುಕೊಂಡ ಚೀನ, ಇತ್ತ ಎಲ್‌ಒಸಿಯಲ್ಲಿ ಶಾಂತಿಗೆ ಕೈಜೋಡಿಸಿದ ಪಾಕಿಸ್ಥಾನ‌… ಭಾರತ ವಿರುದ್ಧದ ಪರಮಾಣು ಎದುರಾಳಿ ರಾಷ್ಟ್ರಗಳ ನಿಲುವು ಹೀಗೆ ದಿಢೀರ್‌ ಬದಲಾಗಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಕಾರಣ ಎಂಬ ವಿಶ್ಲೇಷಣೆಯೂ ಕೇಳಿಬಂದಿದೆ. ಪ್ರಸ್ತುತ ಈ ಮೂರೂ ರಾಷ್ಟ್ರಗಳಿಗಾಗಿ ಅಮೆರಿಕ ಪ್ರತ್ಯೇಕ ರಾಜತಾಂತ್ರಿಕ ನೀತಿಗಳನ್ನು ರೂಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತ- ಚೀನ, ಭಾರತ- ಪಾಕ್‌ ನೇರ ಮಾತುಕತೆ ಮೂಲಕ ಗಡಿಬಿಕ್ಕಟ್ಟು ಬಗೆಹರಿಸಿಕೊಳ್ಳುವ ಕುರಿತು ಜೋ ಬೈಡೆನ್‌ ಸರಕಾರ ಇತ್ತೀಚೆಗಷ್ಟೇ ಪ್ರತಿಪಾದಿಸಿತ್ತು.

ಚೀನ ಮಣಿಸಿದ ಭಾರತ ಲಸಿಕೆ :

ಕೋವಿಡ್ ದಿಂದ ಕಂಗೆಟ್ಟ ಏಷ್ಯಾ- ಆಫ್ರಿಕಾದ ರಾಷ್ಟ್ರಗಳನ್ನು ಚೀನಕ್ಕೂ ಮೊದಲೇ ಭಾರತ ಕೈಹಿಡಿದಿದೆ. ಕೊರೊನಾ ಹರಡಿಸಿದ್ದಲ್ಲದೆ, ಆ ಬಡರಾಷ್ಟ್ರಗಳಿಗೆ ಸಾಲ ನೀಡಿ, ಮಾರುಕಟ್ಟೆ ಮೂಲಕ ಮತ್ತಷ್ಟು ಅವಲಂಬಿಯನ್ನಾಗಿಸುವ ಚೀನದ ಪಿತೂರಿಗೆ ಭಾರತದ “ವ್ಯಾಕ್ಸಿನ್‌’ ರಾಮಬಾಣ ಬಿಟ್ಟಿದೆ. ಚೀನಕ್ಕೂ ಮೊದಲೇ ಅದು ವ್ಯಾಪಕ ಸಾಲ ನೀಡಿದ ರಾಷ್ಟ್ರಗಳಿಗೆ ಭಾರತ ವ್ಯಾಕ್ಸಿನ್‌ ನೀಡಿ, ಔದಾರ್ಯ ಮೆರೆದಿದೆ. ಚೀನಿ ಲಸಿಕೆ ನಿರೀಕ್ಷಿಸುತ್ತಿದ್ದ ನೇಪಾಲ, ಬಾಂಗ್ಲಾದೇಶ, ಶ್ರೀಲಂಕಾಗಳಲ್ಲಿ ಭಾರತದ ಲಸಿಕೆಗಳು ತಲುಪಿ, ವಿಶ್ವಾಸ ಸಂಪಾದಿಸಿವೆ. ಆಫ್ರಿಕಾದ ಬಡರಾಷ್ಟ್ರಗಳಲ್ಲೂ ಭಾರತದ ಲಸಿಕೆ ಬಗ್ಗೆ ನಂಬಿಕೆ ಹೆಚ್ಚಿದೆ.  ಬಡರಾಷ್ಟ್ರಗಳಿಗೆ ಚೀನ 3 ಲಕ್ಷ ಡೋಸ್‌ಗಳನ್ನು ನೀಡುವುದಾಗಿ ಘೋಷಿಸಿದೆ. ಆದರೆ ಅದಕ್ಕೂ ಮುನ್ನವೇ ಭಾರತ 17 ಲಕ್ಷ ಡೋಸ್‌ಗಳನ್ನು ಬಡರಾಷ್ಟ್ರಗಳಿಗೆ ಪೂರೈಸಿದೆ. ಚೀನಿ ಲಸಿಕೆಗಳು ಇನ್ನೂ ಹೊರರಾಷ್ಟ್ರಗಳನ್ನು ತಲುಪಿಲ್ಲ. ಲಸಿಕೆ ಪ್ರಯೋಗದ ವೇಳೆ ದತ್ತಾಂಶ ನಿಗೂಢತೆ ಕಾಪಾಡಿಕೊಂಡಿರುವುದೇ ಚೀನ ಲಸಿಕೆಗಳಿಗೆ ದೊಡ್ಡ ಹಿನ್ನಡೆ ಎನ್ನಲಾಗಿದೆ.

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.