ಮಾಣಿಕ್ ಬಿಟ್ಟು, ಹೀರಾ ಆಯ್ಕೆ ಮಾಡಿ
Team Udayavani, Feb 9, 2018, 9:15 AM IST
ಸೋನಾಮುರ: ಮಾಣಿಕ್ ಸರ್ಕಾರ್ ನೇತೃತ್ವದ ಎಡಪಕ್ಷದ ಸರ್ಕಾರವನ್ನು ಕಿತ್ತೆಸೆದು, “ಹೀರಾ’ಗಾಗಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಇದೇ 18ರಂದು ವಿಧಾನಸಭೆ ಚುನಾವಣೆ ಎದುರಿಸಲಿರುವ ತ್ರಿಪುರಾದಲ್ಲಿ ಗುರುವಾರ 2 ರ್ಯಾಲಿಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
“ಜನ ತಮ್ಮ ಹಣೆಬರಹವನ್ನು ಬದಲಿಸಿಕೊಳ್ಳಲು “ಮಾಣಿಕ್ಯ’ ಅಥವಾ ಅಮೂಲ್ಯ ಹರಳನ್ನು ಧರಿಸುತ್ತಾರೆ. ಆದರೆ, ಈ ಮಾಣಿಕ್ಯ(ಮಾಣಿಕ್ ಸರ್ಕಾರ್) ನಿಮ್ಮ ಬದುಕಲ್ಲಿ ಸಮೃದ್ಧಿ ತರಲಿಲ್ಲ. ಹಾಗಾಗಿ, ನೀವೆಲ್ಲರೂ ಈ ಮಾಣಿಕ್ ಸರ್ಕಾರವನ್ನು ಕಿತ್ತೆಸೆದು, “ಹೀರಾ'(ಹೈವೇ, ಇ-ವೇ, ರೋಡ್ವೇ ಮತ್ತು ಏರ್ವೆà)ವನ್ನು ಆಯ್ಕೆ ಮಾಡಿ. ಬಿಜೆಪಿ ಸರ್ಕಾರವು ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತದೆ,’ ಎಂದಿದ್ದಾರೆ ಮೋದಿ. ಅಲ್ಲದೆ, ಕಮ್ಯೂನಿಸ್ಟರು ಇಲ್ಲಿನ ಜನರನ್ನು ಜೀತದಾಳುಗಳಂತೆ ನಡೆಸಿಕೊಂಡಿದೆ. ರೇಷನ್ ಕಾರ್ಡ್ಗೂ ಜನ ಪಕ್ಷದ ಕಚೇರಿಯನ್ನು ಸಂಪರ್ಕಿಸಬೇಕು. ಯಾರದ್ದಾದರೂ ಕೊಲೆ ನಡೆದರೆ, ಸಿಪಿಎಂ ಅನುಮತಿ ಪಡೆದ ಬಳಿಕವೇ ಪೊಲೀಸರು ಕೇಸು ದಾಖಲಿಸಿಕೊಳ್ಳುವುದು. ಇಂಥ ಸರ್ಕಾರ ನಿಮಗೆ ಬೇಕೇ ಎಂದೂ ಮೋದಿ ಪ್ರಶ್ನಿಸಿದ್ದಾರೆ.
ಫೆ.18ರಂದು 60 ಸದಸ್ಯಬಲದ ತ್ರಿಪುರಾದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಮಾ.3ರಂದು ಫಲಿತಾಂಶ ಪ್ರಕಟವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ