ಕೇರಳ ಸರಕಾರಕ್ಕೆ ಹೈಕೋರ್ಟ್ ತರಾಟೆ
Team Udayavani, Nov 29, 2018, 7:17 AM IST
ಕೊಚ್ಚಿ: ಸುಪ್ರೀಂ ಕೋರ್ಟ್ ತೀರ್ಪುಗಳ ಅನುಷ್ಠಾನ ವಿಚಾರದಲ್ಲಿ ಕೇರಳ ಸರಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಕೇರಳ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೇರಳದ ಪಿರೋವಂ ಚರ್ಚ್ನಲ್ಲಿನ ಗುಂಪುಗಾರಿಕೆ ಯಿಂದಾಗಿ ಚರ್ಚ್ಗೆ ಪ್ರವೇಶ ಪಡೆಯುವ ಅವಕಾಶದಿಂದ ವಂಚಿತವಾಗಿರುವ ಮಲಂಕರಾ ಸಿರಿಯನ್ ಚರ್ಚ್ಗೆ ಸೇರಿದ ಸಂಪ್ರದಾಯಸ್ಥ ಕ್ರೈಸ್ತರ ಗುಂಪೊಂದಕ್ಕೆ ಸುಪ್ರೀಂ ಕೋರ್ಟ್ ಚರ್ಚ್ ಪ್ರವೇಶಕ್ಕೆ ಅನುಮತಿ ನೀಡಿದೆ. ಜತೆಗೆ, ಚರ್ಚ್ಗೆ ಬಿಗಿಭದ್ರತೆ ನೀಡಬೇಕೆಂದೂ ಸೂಚಿಸಿದೆ. ಆದರೆ, ಈವರೆಗೆ ಚರ್ಚ್ಗೆ ಬಿಗಿಭದ್ರತೆ ನೀಡಿಲ್ಲ ಹಾಗೂ ತಮಗೆ ಚರ್ಚ್ ಪ್ರವೇಶ ಸಾಧ್ಯವಾಗಿಲ್ಲವೆಂದು ಮಲಂಕರಾ ಚರ್ಚ್ ಸಮು ದಾಯ ಪುನಃ ನ್ಯಾಯಾಲಯದ ಮೊರೆ ಹೋಗಿದೆ.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಶಬರಿಮಲೆಯಲ್ಲಿ ಅಷ್ಟೊಂದು ಪೊಲೀಸ್ ಭದ್ರತೆ ಕಲ್ಪಿಸಿರು ವಾಗ, ಚರ್ಚ್ ವಿಚಾರದಲ್ಲಿ ತೀರ್ಪಿನ ಪಾಲನೆ ಏಕಾಗುತ್ತಿಲ್ಲ ಎಂದು ಪ್ರಶ್ನಿಸಿತು. ಏತನ್ಮಧ್ಯೆ, ಶಬರಿಮಲೆಯಲ್ಲಿ ಪೊಲೀಸರ ಕಟ್ಟುನಿಟ್ಟಿನ ವರ್ತನೆ ವಿರೋಧಿಸಿ ಹಾಗೂ ನಿಷೇಧಾಜ್ಞೆ ವಾಪಸ್ಗೆ ಆಗ್ರಹಿಸಿ ಕೇರಳದ ವಿಧಾನಸಭೆಯಲ್ಲಿ ವಿಪಕ್ಷ ನಾಯಕರು ಬುಧವಾರ ಧರಣಿ ನಡೆಸಿದರು. ಆದರೆ, ಸಿಎಂ ಪಿಣರಾಯಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಬಳಿ ಅಣುಬಾಂಬ್ ಇದೆ ಅವರಿಗೆ ಗೌರವ ಕೊಡಿ… ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ
Controversy: ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತದಾನ; ವಿವಾದಿತ ವಿಡಿಯೋ ವೈರಲ್
Sandeshkhali ಪ್ರಕರಣಕ್ಕೆ ದಿಢೀರ್ ತಿರುವು : ಇಬ್ಬರು ಸಂತ್ರಸ್ತೆಯರಿಂದ ದೂರು ವಾಪಸ್!
BJP ನಾಯಕಿ ವಿವಾದ: ಒವೈಸಿಗೆ 15 ನಿಮಿಷ ಬೇಕು,ನಮಗಾದ್ರೆ 15 ಸೆಕೆಂಡ್
Hindu ಸಂಖ್ಯೆ ಕುಸಿತ: ಕೈ-ಕಮಲ ವಾಕ್ಸಮರ!
MUST WATCH
ಹೊಸ ಸೇರ್ಪಡೆ
Hubli; ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ
Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ
Dandeli: ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ.. ಮಕ್ಕಳು ಸೇರಿ 8 ಮಂದಿಗೆ ಗಾಯ
Kalaburagi; ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ
Raichur; ಶ್ರೀ ಬಸವೇಶ್ವರ ಜಯಂತಿ ಆಚರಣೆ