ಶಾಂತಿ ಬೇಕಿದ್ದರೆ ಪಾಕ್ ಉಗ್ರರ ರವಾನೆ ನಿಲ್ಲಿಸಬೇಕು: ಜ| ರಾವತ್
Team Udayavani, May 25, 2018, 4:11 PM IST
ಪೆಹಲ್ಗಾಂವ್ , ಜಮ್ಮು ಕಾಶ್ಮೀರ : ‘ಭಾರತ ಶಾಂತಿ ಬಯಸುತ್ತದೆ, ಆದರೆ ಪಾಕಿಸ್ಥಾನ ಜಮ್ಮು ಕಾಶ್ಮೀರಕ್ಕೆ ಉಗ್ರರನ್ನು ರವಾನಿಸುವುದನ್ನು ನಿಲ್ಲಿಸಬೇಕು’ ಎಂದು ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಖಡಕ್ ಆಗಿ ಹೇಳಿದ್ದಾರೆ.
ಪವಿತ್ರ ಉಪವಾಸದ ರಮ್ಜಾನ್ ಮಾಸದ ಪ್ರಯುಕ್ತ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಸೇನಾ ಕಾರ್ಯಾಚರಣೆ ನಿಲ್ಲಿಸಿವೆ; ಇದನ್ನು ರಮ್ಜಾನ್ ಬಳಿಕವೂ ಮುಂದುವರಿಸುವ ಆಲೋಚನೆ ಇದೆ; ಆದರೆ ಪಾಕ್ ಉಗ್ರರು ಯಾವುದೇ ದುಸ್ಸಾಹಸ ನಡೆಸಿದರೆ ನಮ್ಮ ಆಲೋಚನೆಯನ್ನು ನಾವು ಬದಲಿಸಬೇಕಾಗುತ್ತದೆ ಎಂದು ಜನರಲ್ ರಾವತ್ ಹೇಳಿದರು.
‘ಪಾಕಿಸ್ಥಾನಕ್ಕೆ ಭಾರತದೊಂದಿಗೆ ಶಾಂತಿಯಿಂದಿರಲು ಆಸಕ್ತಿ ಇದ್ದರೆ ಅದು ಎಲ್ಲಕ್ಕಿಂತ ಮೊದಲು ಜಮ್ಮು ಕಾಶ್ಮೀರಕ್ಕೆ ತನ್ನಲ್ಲಿನ ಉಗ್ರರನ್ನು ಕಳುಹಿಸುವುದನ್ನು ನಿಲ್ಲಿಸಬೇಕು’ ಎಂದು ಜನರಲ್ ರಾವತ್ ಹೇಳಿದರು.
‘ಗಡಿಯಲ್ಲಿ ಶಾಂತಿ ಏರ್ಪಡುವುದನ್ನು ಭಾರತ ಬಯಸುತ್ತದೆ; ಆದರೆ ಪಾಕಿಸ್ಥಾನ ನಿರಂತರವಾಗಿ ಕದನ ವಿರಾಮ ಉಲ್ಲಂಘನೆಗೈದು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ; ಇದರಿಂದಾಗಿ ಜೀವ ಮತ್ತು ಸೊತ್ತು ಹಾನಿ ನಿರಂತರವಾಗಿ ಸಾಗಿದೆ; ಇದು ನಿಲ್ಲದೇ ಗಡಿಯಲ್ಲಿ ಶಾಂತಿ ಏರ್ಪಡಲು ಸಾಧ್ಯವಿಲ್ಲ’ ಎಂದು ಜನರಲ್ ರಾವತ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ