ಗಸ್ತು ಪಡೆಗೆ ವರದ್ ಶಕ್ತಿ ; ಕರಾವಳಿ ಕಾವಲಿಗೆ ಸಮರ್ಪಣೆಗೊಂಡ ಹೊಸ ಹಡಗು
Team Udayavani, Feb 29, 2020, 12:55 PM IST
ಚೆನ್ನೈ: ಭಾರತದ ಕರಾವಳಿ ಕಾವಲು ಪಡೆಗಾಗಿ ಸಿದ್ಧಪಡಿಸಲಾಗಿರುವ ವರದ್ ಎಂಬ ದೈತ್ಯ ಗಸ್ತು ಹಡಗನ್ನು ಕೇಂದ್ರ ಹಡಗು ಇಲಾಖೆಯ ಸಹಾಯಕ ಸಚಿವ ಮನ್ಸುಕ್ ಎಲ್. ಮಾಂಡವಿಯ, ಶುಕ್ರವಾರ ಲೋಕಾರ್ಪಣೆಗೊಳಿಸಿದರು.
321 ಅಡಿ ಉದ್ದವಿರುವ ಈ ಹಡಗನ್ನು ‘ಲಾರ್ಸನ್ ಆ್ಯಂಡ್ ಟರ್ಬೋ (ಎಲ್ ಆ್ಯಂಡ್ ಟಿ) ಕಂಪೆನಿಯು, ಚೆನ್ನೈ ಬಳಿಯ ಕಟ್ಟು ಪಲ್ಲಿಯಲ್ಲಿರುವ ತನ್ನ ಹಡಗು ನಿರ್ಮಾಣ ಕಾರ್ಯಾಗಾರದಲ್ಲಿ ತಯಾರಿಸಿದೆ. ಈ ಹೊಸ ಹಡಗು, 28 ವರ್ಷಗಳಿಂದ ಕರಾವಳಿ ಕಾವಲು ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ವರಾದ್ ಎಂಬ ಹೆಸರನ್ನೇ ಹೊಂದಿರುವ ಮತ್ತೂಂದು ಹಳೆಯ ಹಡಗಿನ ಬದಲಿಗೆ ಸೇವೆ ಸಲ್ಲಿಸಲಿದೆ.
2015ರಲ್ಲಿ ‘ಎಲ್ ಆ್ಯಂಡ್ ಟಿ’ ಕಂಪೆನಿಯು 7 ಗಸ್ತು ಹಡಗುಗಳನ್ನು ನಿರ್ಮಿಸಿಕೊಡುವ 1,432 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿತ್ತು. ಅದರಂತೆ, ನಾಲ್ಕು ಹಡಗುಗಳನ್ನು ಈಗಾಗಲೇ ಹಸ್ತಾಂತರಿಸಲಾಗಿದ್ದು, ಈ ಶ್ರೇಣಿಯಲ್ಲಿ ಹೊಸ ವರದ್ ಐದನೇ ಹಡಗಾಗಿದೆ.
ವಿಶೇಷತೆಗಳೇನು?
– ಅತ್ಯಾಧುನಿಕ ನೇವಿಗೇಷನ್ ತಂತ್ರಜ್ಞಾನ
– ಈಗಿನ ಅಗತ್ಯಗಳಿಗೆ ತಕ್ಕಂಥ ಸೌಲಭ್ಯಗಳು
– 10 ಸಾವಿರ ಕಿ.ಮೀ.ವರೆಗೆ ನಿಲುಗಡೆ ರಹಿತ ಪ್ರಯಾಣ
– ಶೇ. 90ರಷ್ಟು ಬಿಡಿಭಾಗಗಳು ಸ್ವದೇಶದಲ್ಲೇ ನಿರ್ಮಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…