ಸರ್ಜಿಕಲ್ ಸ್ಟ್ರೈಕ್ ಗೆ ಹೊಸ ಶಕ್ತಿ;ನಭಕ್ಕೆ ಚಿಮ್ಮಿದ ಕಾರ್ಟೊಸ್ಯಾಟ್ 2
Team Udayavani, Jun 23, 2017, 10:31 AM IST
ಶ್ರೀಹರಿಕೋಟಾ:ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಇತಿಹಾಸ ಬರೆದಿದ್ದು, ಭಾರತೀಯ ಸೇನೆಯ ಕಣ್ಗಾವಲಿಗೆ ಆನೆ ಬಲ ತುಂಬಲಿರುವ ಕಾರ್ಟೋಸ್ಯಾಟ್ 2 ಎಸ್ ಸೇರಿದಂತೆ 31 ನ್ಯಾನೋ ಉಪಗ್ರಹಗಳನ್ನು ಪಿಎಸ್ ಎಲ್ ವಿ ಸಿ38 ಯಶಸ್ವಿಯಾಗಿ ನಭೋಮಂಡಲಕ್ಕೆ ಹೊತ್ತೊಯ್ದಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಬೆಳಗ್ಗೆ 9.29ಕ್ಕೆ ಕಾರ್ಟೋಸ್ಯಾಟ್ 2 ಎಸ್ ಸೇರಿದಂತೆ 31 ಉಪಗ್ರಹಗಳನ್ನು ಯಶಸ್ವಿಯಾಗಿ ಪಿಎಸ್ ಎಲ್ ವಿ ಸಿ 38 ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಈ ಮೂಲಕ ಇತಿಹಾಸ ಮತ್ತೊಂದು ಮೈಲಿಗಲ್ಲು ನೆಟ್ಟಂತಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ತಪ್ಪಿಸಲು ಕೇಂದ್ರ ಸರ್ಕಾರ ಕಳೆದ ವರ್ಷ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ದಾಟಿ ಸರ್ಜಿಕಲ್ ದಾಳಿ ನಡೆಸಿತ್ತು. ಈ ಮೂಲಕ ಉಗ್ರರ ತರಬೇತಿ ಕೇಂದ್ರಗಳನ್ನು ಧ್ವಂಸ ಮಾಡಿ 38 ಮಂದಿ ಯನ್ನು ಕೊಂದಿತ್ತು ನಮ್ಮ ಸೇನೆ. ಅದಕ್ಕೆ ನೆರವಾದದ್ದು ಇಸ್ರೋದ ಕಾರ್ಟೋಸ್ಯಾಟ್ ಉಪಗ್ರಹ. ಮುಂದಿನ
ದಿನಗಳಲ್ಲಿ ಇಂಥ ದಾಳಿಗಳನ್ನು ಕರಾರುವಾಕ್ಕಾಗಿ ನಡೆಸುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ
ಕೇಂದ್ರ (ಇಸ್ರೋ)ದ ಕಾರ್ಟೋಸ್ಯಾಟ್ ಸರಣಿಯ 3ನೇ ಉಪಗ್ರಹವನ್ನು ಶುಕ್ರವಾರ ಆಂಧ್ರಪ್ರದೇಶದ
ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಗುತ್ತದೆ.
ಈ ಮೂಲಕ ಗಗನದಿಂದಲೇ ವೈರಿಗಳ ಬಗ್ಗೆ ನಿಖರ ನಿಗಾಕ್ಕೆ ವೈಜ್ಞಾನಿಕ ನೆರವೂ ಇನ್ನು ಭರಪೂರ ಸಿಗಲಿದೆ. ಅಂದ ಹಾಗೆ ಕಾರ್ಟೋಸ್ಯಾಟ್ ಸರಣಿಯ 3 ನೇ ಉಪಗ್ರಹದ ಹೆಗ್ಗಳಿಕೆಯೇನೆಂದರೆ ಸಣ್ಣ ಚುಕ್ಕಿಯಂತಿರುವ ವಸ್ತು
ಮತ್ತು ಅದಕ್ಕಿಂತ ಸಣ್ಣದಾಗಿರುವ ವಸ್ತು(0.6ಗಿ0.6ಮೀ) ವನ್ನು ನಿಖರವಾಗಿ ಕಂಡುಹಿಡಿಯುತ್ತದೆ.
ಕಾರ್ಟೋಸ್ಯಾಟ್ 2 ಎಸ್ ಹಾಗೂ 30 ನ್ಯಾನೋ ಉಪಗ್ರಹಗಳು ಇದರಲ್ಲಿ 14 ವಿವಿಧ ದೇಶಗಳ 29 ನ್ಯಾನೋ ಉಪಗ್ರಹಗಳು ಸೇರಿವೆ. ಆಸ್ಟ್ರಿಯ, ಬೆಲ್ಜಿಯಂ, ಚಿಲಿ, ಜೆಕ್ ರಿಪಬ್ಲಿಕ್, ಫಿನ್ ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಲಟಾವಿಯ, ಸ್ಲೋವಾಕಿಯಾ, ಬ್ರಿಟನ್ ಹಾಗೂ ಅಮೆರಿಕದ ನ್ಯಾನೋ ಉಪಗ್ರಹಗಳು ಸೇರಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…