ರಾಜಸ್ಥಾನ,ಮಧ್ಯಪ್ರದೇಶದಲ್ಲಿ ಕೈ, ಬಿಜೆಪಿಗೆ ಜಯ
ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟ ; ಆಂಧ್ರದಲ್ಲಿ ವೈಎಸ್ಆರ್ ಕಾಂಗ್ರೆಸ್ ಸ್ವೀಪ್
Team Udayavani, Jun 20, 2020, 6:47 AM IST
ಪಿಪಿಇ ಕಿಟ್ ಧರಿಸಿ ಭೋಪಾಲದಲ್ಲಿ ಮತ ಹಾಕಲು ಬಂದ ಕೈ ಶಾಸಕ ಕುನಾಲ್ ಚೌಧರಿ
ಹೊಸದಿಲ್ಲಿ: ರೆಸಾರ್ಟ್ ರಾಜಕೀಯ, ರಾಜೀನಾಮೆಗಳು, ಪಕ್ಷಾಂತರ ಮತ್ತು ಲಂಚದ ಆರೋಪಗಳ ನಡುವೆಯೇ ಶುಕ್ರವಾರ 8 ರಾಜ್ಯಗಳ 19 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ.
ಗುಜರಾತ್ನಲ್ಲಿ ಮತ ಎಣಿಕೆ ವೇಳೆ ಗೊಂದಲ ಉಂಟಾದ ಕಾರಣ, ಮತ ಎಣಿಕೆಯನ್ನು ವಿಳಂಬ ಮಾಡಲಾಗಿದೆ.
ಇನ್ನುಳಿದ 7 ರಾಜ್ಯಗಳ 15 ಸ್ಥಾನಗಳ ಪೈಕಿ ಬಿಜೆಪಿ 5, ಕಾಂಗ್ರೆಸ್ 3, ವೈಎಸ್ಸಾರ್ ಕಾಂಗ್ರೆಸ್ 4 ಸ್ಥಾನಗಳನ್ನು ಬಾಚಿಕೊಂಡಿವೆ.
ಮಿಜೋರಾಂ ಮತ್ತು ಮೇಘಾಲಯದಲ್ಲಿ ಪ್ರಾದೇಶಿಕ ಪಕ್ಷಗಳು ಗೆಲುವು ಸಾಧಿಸಿವೆ. ಜಾರ್ಖಂಡ್ನಲ್ಲಿ ಒಂದು ಸ್ಥಾನವನ್ನು ಆಡಳಿತಾರೂಢ ಜೆಎಂಎಂ ಪಡೆದುಕೊಂಡಿದೆ.
ರಾಜಸ್ಥಾನದಲ್ಲಿ ಕೈಗೆ 2, ಬಿಜೆಪಿಗೆ 1: ರಾಜಸ್ಥಾನದಲ್ಲಿ 3 ಸೀಟುಗಳ ಪೈಕಿ ಎರಡು ಕಾಂಗ್ರೆಸ್ ಹಾಗೂ ಒಂದು ಬಿಜೆಪಿ ಪಾಲಾಗಿದೆ. ಕಾಂಗ್ರೆಸ್ನಿಂದ ಕೆ.ಸಿ.ವೇಣುಗೋಪಾಲ್ ಮತ್ತು ನೀರಜ್ ಡಾಂಗಿ, ಬಿಜೆಪಿಯಿಂದ ರಾಜೇಂದ್ರ ಗೆಹ್ಲೊಟ್ ಯಾವುದೇ ಅಡ್ಡ ಮತದಾನವಿಲ್ಲದೇ ರಾಜ್ಯಸಭೆಗೆ ಪ್ರವೇಶ ಪಡೆದಿದ್ದಾರೆ. ಈ ಮೂಲಕ ರಾಜ್ಯಸಭೆಗೆ ಈವರೆಗೆ ರಾಜಸ್ಥಾನದಿಂದ ಮೂವರು ಆಯ್ಕೆಯಾದಂತಾಗಿದ್ದು, ಬಿಜೆಪಿಯ ಸಂಖ್ಯಾಬಲ 7ಕ್ಕೇರಿದೆ.
ಸಿಂದಿಯಾ, ದಿಗ್ವಿಜಯ್ ಮೇಲ್ಮನೆಗೆ: ಮಧ್ಯಪ್ರದೇಶದಲ್ಲಿ ನಿರೀಕ್ಷೆಯಂತೆ ಬಿಜೆಪಿಯಿಂದ ಜ್ಯೋತಿರಾದಿತ್ಯ ಸಿಂದಿಯಾ, ಸುಮೇರ್ ಸಿಂಗ್ ಸೋಲಂಕಿ, ಕಾಂಗ್ರೆಸ್ನಿಂದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಮೇಲ್ಮನೆಗೆ ಎಂಟ್ರಿ ಪಡೆದಿದ್ದಾರೆ. ಕಾಂಗ್ರೆಸ್ನ ಮತ್ತೊಬ್ಬ ಅಭ್ಯರ್ಥಿ, ದಲಿತ ನಾಯಕ ಫೂಲ್ ಸಿಂಗ್ ಬರಿಯಾ ಸೋಲುಂಡಿದ್ದಾರೆ.
ಇದೇ ವೇಳೆ, ಸಮಾಜವಾದಿ ಪಕ್ಷದ ಶಾಸಕ ರಾಜೇಶ್ ಶುಕ್ಲಾ ಅವರು ಬಿಜೆಪಿ ಪರ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇದೇ ವೇಳೆ, ಬಿಜೆಪಿಯ ಇಬ್ಬರು ಶಾಸಕರು ಅಡ್ಡಮತದಾನ ಮಾಡಿರುವ ಆರೋಪ ಎದುರಿಸಿದ್ದಾರೆ.
ಆಂಧ್ರದಲ್ಲಿ ಕ್ಲೀನ್ಸ್ವೀಪ್: ನಿರೀಕ್ಷೆಯಂತೆಯೇ ಎಲ್ಲ ನಾಲ್ಕು ಸ್ಥಾನಗಳನ್ನೂ ಆಡಳಿತಾರೂಢ ವೈಎಸ್ಸಾರ್ ಕಾಂಗ್ರೆಸ್ ಬಾಚಿಕೊಂಡಿದೆ.
ಉಳಿದೆಡೆ ಏನಾಯ್ತು?: ಜಾರ್ಖಂಡ್ನ 2 ರಾಜ್ಯಸಭಾ ಸ್ಥಾನಗಳಲ್ಲಿ ಒಂದನ್ನು ಬಿಜೆಪಿಯ ದೀಪಕ್ ಪ್ರಕಾಶ್, ಮತ್ತೊಂದನ್ನು ಆಡಳಿತಾರೂಢ ಜೆಎಂಎಂ ಸ್ಥಾಪಕ, ಮಾಜಿ ಸಿಎಂ ಶಿಬು ಸೊರೇನ್ ತಮ್ಮದಾಗಿಸಿಕೊಂಡಿದ್ದಾರೆ. ಮೇಘಾಲಯದಲ್ಲಿ ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ, ಮಣಿಪುರದಲ್ಲಿ ಬಿಜೆಪಿ ಗೆದ್ದಿದೆ. ಜೋರಾಂನಲ್ಲಿ ಪ್ರಾದೇಶಿಕ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ