ಪ್ರೇಯಸಿಗೆ ಸಮಾಧಿ ಕಟ್ಟಿದವ, ಹೆತ್ತವರನ್ನು ಸುಟ್ಟು ಬೂದಿ ಮಾಡಿದ್ದ!
Team Udayavani, Feb 5, 2017, 3:45 AM IST
ಭೋಪಾಲ್: ಫೇಸ್ಬುಕ್ನಲ್ಲಿ ಪ್ರೇಮಿಸಿ, ಲಿವ್ಇನ್ ಸಂಬಂಧದಲ್ಲಿದ್ದ ಪ್ರೇಯಸಿಯನ್ನು ಕೊಂದು ಸಮಾಧಿ ಕಟ್ಟಿದ್ದ ಉದಯನ್ ದಾಸ್ ಈಗ ಭಸ್ಮಾಸುರ ಎಂಬುದೂ ತಿಳಿದುಬಂದಿದೆ! ಆರು ವರ್ಷದ ಹಿಂದೆಯೇ ಈತ ತನ್ನ ತಂದೆ- ತಾಯಿಯನ್ನು ಕೊಂದು ರಾಯ್ಪುರದ ತನ್ನ ಮನೆಯಲ್ಲಿ ಭಸ್ಮ ಮಾಡಿದ್ದ!
ಪಶ್ಚಿಮ ಬಂಗಾಳದ ಮೂಲದ ಪ್ರೇಯಸಿ ಆಕಾಂಕ್ಷಾಳ ಕತ್ತು ಹಿಸುಕಿ, ಭೋಪಾಲ್ನ ಮೊದಲನೇ ಮಹಡಿಯ ಮನೆಯಲ್ಲಿ ಸಮಾಧಿ ಮಾಡಿದ್ದ ಉದಯನ್ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಈ ಬೆಚ್ಚಿ ಬೀಳಿಸುವ ಸಂಗತಿಗಳು ಹೊರಬಿದ್ದವು. 2010-11ರಲ್ಲಿ ಈತ ತಂದೆ-ತಾಯಿಯನ್ನು ಕೊಂದು ಮನೆಯ ಕಾಂಪೌಂಡ್ ಒಳಗೆ ಸುಟ್ಟು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
“ಮೊದಲ ವಿಚಾರಣೆಯಲ್ಲಿ ತಂದೆ ಪಿಕೆ ದಾಸ್ ಕಾರ್ಖಾನೆ ನಡೆಸುತ್ತಿದ್ದರು. 2010ರಲ್ಲಿ ರಾಯ್ಪುರ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟರು ಎಂದು ಹೇಳಿದ್ದ. ಬಳಿಕ ತನ್ನ ತಂದೆ- ತಾಯಿಯನ್ನು ಕಾಂಪೌಂಡ್ ಒಳಗೆ ಸುಟ್ಟಿದ್ದೇನೆ ಎನ್ನುತ್ತಿದ್ದಾನೆ. ಉದಯ್ ಚಾಣಾಕ್ಷನಾಗಿದ್ದು, ತನ್ನ ಇಂಗ್ಲಿಷ್ನಿಂದ ಯಾರನ್ನಾದರೂ ಓಲೈಸಿಕೊಳ್ಳುವಂಥವನು. ಈತನ ಹೇಳಿಕೆ ಆಧರಿಸಿ ರಾಯ್ಪುರಕ್ಕೆ ಪೊಲೀಸ್ ತಂಡವನ್ನು ಕಳುಹಿಸಿಕೊಡಲಾಗಿದೆ’ ಎಂದು ಭೋಪಾಲ್ನ ಗೋವಿಂದಪುರ ಸಿಎಸ್ಪಿ ವಿರೇಂದ್ರ ಮಿಶ್ರಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್