ಶಬರಿಮಲೆ: ಮಂಡಲ ಪೂಜೆ ಸಂಪನ್ನ: ಅಯ್ಯಪ್ಪನ ದರ್ಶನ ಪಡೆದ ಸಾವಿರಾರು ಭಕ್ತರು
Team Udayavani, Dec 28, 2022, 7:35 AM IST
ಪತ್ತನಂತಿಟ್ಟ: ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಮಧ್ಯಾಹ್ನ ಪವಿತ್ರ ಮಂಡಲ ಪೂಜೆ ನೆರವೇರಿತು.
ಈ ಮೂಲಕ 41 ದಿನಗಳ ಮೊದಲ ಹಂತದ ವಾರ್ಷಿಕ ಶಬರಿಮಲೆ ಯಾತ್ರೆಗೆ ತೆರೆಬಿದ್ದಿದೆ.
ಸೋಮವಾರ ಸಂಜೆ ಸನ್ನಿಧಾನಂಗೆ ತರಲಾಗಿದ್ದ ಪವಿತ್ರ ಸ್ವರ್ಣ ವಸ್ತ್ರವನ್ನು ಅಯ್ಯಪ್ಪಸ್ವಾಮಿಗೆ ತೊಡಿಸಿದ ಬಳಿಕ ಪ್ರಧಾನ ಅರ್ಚಕರಾದ ಕಂಡರಾರು ರಾಜೀವರು ಅವರು ಮಂಡಲ ಪೂಜೆಯ ವಿಧಾನಗಳನ್ನು ಪೂರ್ಣಗೊಳಿಸಿದರು.
ವಿಶೇಷ ಕಲಭಾಭಿ ಷೇಕಂ ಮತ್ತು ಕಲಶಾಭಿಷೇಕಂ ನಡೆಯು ವಾಗ, ಸರತಿಯಲ್ಲಿ ನಿಂತಿದ್ದ ಮಾಲಾಧಾರಿಗಳು “ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಸ್ತುತಿಸುತ್ತಾ, ಅಯ್ಯಪ್ಪನ ದರ್ಶನ ಪಡೆದರು.
ಮಂಡಲ ಪೂಜೆ ಮುಗಿದ ಕೂಡಲೇ ದೇಗುಲದ ಬಾಗಿಲು ಮುಚ್ಚಲಾಯಿತು. ಸಂಜೆ ಮತ್ತೆ ಬಾಗಿಲು ತೆರೆದು, ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು. ಬಳಿಕ ರಾತ್ರಿ ಮತ್ತೆ ಬಾಗಿಲು ಮುಚ್ಚಲಾಯಿತು. 3 ದಿನಗಳ ಬಳಿಕ ಅಂದರೆ ಡಿ.30ರ ಸಂಜೆ 5 ಗಂಟೆಗೆ ದೇಗುಲ ತೆರೆಯಲಿದ್ದು, ಅಲ್ಲಿಂದ ಯಾತ್ರೆಯ 2ನೇ ಹಂತಕ್ಕೆ ಚಾಲನೆ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ