ಪರ್ರಿಕರ್ ಇನ್ನಿಲ್ಲ : ಪಣಜಿಯಲ್ಲಿ ಕೊನೆಯುಸಿರೆಳೆದ ಸಿಎಂ
Team Udayavani, Mar 18, 2019, 12:30 AM IST
ಪಣಜಿ/ನವದೆಹಲಿ: ದೀರ್ಘಕಾಲದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರೂ ಕೊನೆಯವರೆಗೂ ಕರ್ತವ್ಯ ಪರತೆಯೊಂದಿಗೆ ರಾಜಿ ಮಾಡಿಕೊಳ್ಳದೇ ಬದ್ಧತೆ ಪ್ರದರ್ಶಿಸಿದ ನಾಯಕ, ಕೇಂದ್ರದ ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್(63)ಭಾನು ವಾರ ಸಂಜೆ 6.40ಕ್ಕೆ ಇಹಲೋಕ ತ್ಯಜಿಸಿದ್ದಾರೆ.
2018ರ ಫೆಬ್ರವರಿಯಿಂದಲೇ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ಗೆ ತುತ್ತಾಗಿದ್ದ ಅವರು ಸಂಜೆ ಪಣಜಿಯ ತಮ್ಮ ನಿವಾಸದಲ್ಲಿ ಕೊನೆಯುಸಿ ರೆಳೆದಿದ್ದಾರೆ. ಕಳೆದ 2 ದಿನಗಳಿಂದ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹಿತ ಹಲವರು ಸಂತಾಪ ಸೂಚಿಸಿದ್ದಾರೆ. ಆರೆಸ್ಸೆಸ್ ಪ್ರಚಾರಕರಿಂದ ಕೇಂದ್ರ ಸಚಿವರವರೆಗೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದ, ಆಡಳಿತಾತ್ಮಕ ಕುಶಾಗ್ರಮತಿ ಹಾಗೂ ಕ್ಲೀನ್ ಇಮೇಜ್ ಕಾಪಾಡಿಕೊಂಡು ಬಂದ ಪರ್ರಿಕರ್ ಅವರು ಗೋವಾದಂಥ ಪುಟ್ಟ ರಾಜ್ಯದ ರಾಜಕೀಯದಲ್ಲಿ ಅಳಿಸಲಾಗದ ನೆನಪನ್ನು ಬಿಟ್ಟು ಹೋಗಿದ್ದಾರೆ.
ಗೋವಾ ಬಿಜೆಪಿಯ ದಿಗ್ಗಜರಾಗಿದ್ದ ಪರ್ರಿಕರ್, 2000ನೇ ಇಸವಿಯಿಂದ ಈವರೆಗೆ 4 ಬಾರಿ ಗೋವಾ ಸಿಎಂ ಹುದ್ದೆ ಅಲಂಕರಿಸಿದ್ದರು. 2014ರಲ್ಲಿ ಪ್ರಧಾನಿ ಮೋದಿ ಸಂಪುಟದಲ್ಲಿ ರಕ್ಷಣಾ ಸಚಿವರ ಹುದ್ದೆಯನ್ನು ನಿಭಾಯಿಸಿದ್ದ ಅವರು, ಇದಾದ 3 ವರ್ಷಗಳ ಬಳಿಕ ಗೋವಾ ವಿಧಾನಸಭೆ ಚುನಾವಣೆಯ ನಂತರ, ಮುಖ್ಯಮಂತ್ರಿಯಾಗಿ ಪರ್ರಿಕರ್ರನ್ನು ಆಯ್ಕೆ ಮಾಡುವುದಿದ್ರೆ ಮಾತ್ರವೇ ನಮ್ಮ ಬೆಂಬಲ ಎಂದು ಮಿತ್ರಪಕ್ಷಗಳು ಪಟ್ಟು ಹಿಡಿದ ಕಾರಣ, ಅವರು ಮತ್ತೆ ಗೋವಾಗೆ ಮರಳಿದ್ದರು. ನಂತರ ಒಂದೇ ವರ್ಷದಲ್ಲಿ, ಅವರನ್ನು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಕಾಡಲಾರಂಭಿಸಿತ್ತು.
ಮನೋಹರ ಪರ್ರಿಕರ್ ಹೋಲಿಕೆಯಿಲ್ಲದ ನಾಯಕ. ನಿಜವಾದ ದೇಶಭಕ್ತ ಹಾಗೂಅಭೂತಪೂರ್ವ ಆಡಳಿತಗಾರ. ಅವರು ಆಧುನಿಕ ಗೋವಾದ ನಿರ್ಮಾತೃ.
-ನರೇಂದ್ರ ಮೋದಿ, ಪ್ರಧಾನಿ
ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಯಿತು. ಸಾರ್ವಜನಿಕ ಜೀವನದಲ್ಲಿ ಅವರು ಬದ್ಧತೆ, ಪ್ರಾಮಾಣಿ
ಕತೆಯ ಪ್ರತಿಮೂರ್ತಿ ಯಂತಿದ್ದರು.
-ರಾಮನಾಥ್ ಕೋವಿಂದ್, ರಾಷ್ಟ್ರಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು