1,000 ಕೋಟಿ ಲ್ಯಾಂಡ್ ಡೀಲ್: ಲಾಲುಗೆ ಸಂಕಷ್ಟ, ವ್ಯಾಪಕ ಐಟಿ ದಾಳಿ
Team Udayavani, May 16, 2017, 11:22 AM IST
ಹೊಸದಿಲ್ಲಿ : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ಭಾರೀ ಇರಿಸು ಮುರಿಸು ಉಂಟುಮಾಡುವ ರೀತಿಯಲ್ಲಿ ಅವರ ಮಹಾ ಘಟಬಂಧನದ ಪ್ರಧಾನ ಮಿತ್ರ ಪಕ್ಷವಾಗಿರುವ ಆರ್ಜೆಡಿ ಇದರ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಸಂಬಂಧಿಸಿದ ಹಲವಾರು ಕಂಪೆನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಸುಮಾರು 1,000 ಕೋಟಿ ರೂ. ಗಳ ಬೇನಾಮಿ ಆಸ್ತಿಪಾಸ್ತಿ ವಹಿವಾಟನ್ನು ಲಾಲು ಅವರ ಕಂಪೆನಿಗಳು ನಡೆಸಿವೆ ಎನ್ನಲಾಗಿದೆ.
ದಿಲ್ಲಿ, ಗುರುಗ್ರಾಮ ಸೇರಿದಂತೆ ಸುಮಾರು 21 ತಾಣಗಳಲ್ಲಿರುವ, ಲಾಲು ಪ್ರಸಾದ್ ಯಾದವ್ಗೆ ಸಂಬಂಧಿಸಿರುವ ಕಂಪೆನಿಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿದೆ.
ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಅವರ ಪುತ್ರಿ – ಸಂಸದೆ ಮೀಸಾ ಭಾರತಿ ಮತ್ತು ಬಿಹಾರ ಸರಕಾರದಲ್ಲಿ ಸಚಿವರಾಗಿರುವ ಲಾಲು ಅವರ ಇಬ್ಬರು ಪುತ್ರರು ಸುಮಾರು 1,000 ಕೋಟಿ ರೂ.ಗಳ ಅಕ್ರಮ ಬೇನಾಮಿ ಭೂವ್ಯವಹಾರ ನಡೆಸಿರುವುದಾಗಿ ಬಿಜೆಪಿ ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಐಟಿ ದಾಳಿಗಳು ನಡೆದಿವೆ.
ಲಾಲು ಅವರ ಕಟುಂಬ ಸದಸ್ಯರು ಆರಂಭಿಸಿರುವ ಹಲವಾರು ಕಂಪೆನಿಗಳ ಮಾಲಕರ ವಿಳಾಸವನ್ನು ಲಾಲು ಅವರ ಅಧಿಕೃತ ನಿವಾಸವಿರುವ ವಿಳಾಸದಲ್ಲಿ ಕಾಣಿಸಲಾಗಿದೆ ಎಂದು ಕಳೆದ ವಾರವಷ್ಟೇ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಆಪಾದಿಸಿದ್ದರು.
ಕೇವಲ ಬೇನಾಮಿ ಭೂವ್ಯವಹಾರಗಳನ್ನು ಮಾಡುವ ಸಲುವಾಗಿ ಲಾಲು ಅವರ ಕುಟುಂಬ ಸದಸ್ಯರು ಹುಟ್ಟುಹಾಕಿರುವ ಈ ಕಂಪೆನಿಗಳಲ್ಲಿ ಯಾವುದೇ ನೌಕರರಲ್ಲಿ; ಯಾವುದೇ ಔದ್ಯಮಿಕ ಚಟುವಟಿಕೆಗಳು ನಡೆದಿಲ್ಲ ಮತ್ತು ಯಾವುದೇ ಮೊತ್ತದ ವಹಿವಾಟು ನಡೆದಿಲ್ಲ ಎಂಬುದು ಈಗ ಬಹಿರಂಗವಾಗಿದೆ.
ಈ ಬಗೆಯ ಬೇನಾಮಿ ಆಸ್ತಿಪಾಸ್ತಿ ಹಗರಣದಲ್ಲಿ ಪಟ್ಟಾನದಲ್ಲಿ ಮೈದಳೆಯುತ್ತಿರುವ 7.5 ಲಕ್ಷ ಚದರಡಿ ಸ್ಥಳಾವಕಾಶದ ಬಿಹಾರದ ಅತ್ಯಂತ ದೊಡ್ಡ ಶಾಪಿಂಗ್ ಮಾಲ್ ಕೂಡ ಸೇರಿದೆ.
ಹಿರಿಯ ಬಿಜೆಪಿ ನಾಯಕರಾದ ರವಿ ಶಂಕರ್ ಪ್ರಸಾದ್, ಗಿರಿರಾಜ್ ಸಿಂಗ್, ರಾಜೀವ್ ಪ್ರತಾಪ್ ರೂಡಿ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಲಾಲು ಕುಟುಂಬದ ಅಕ್ರಮ ಬೇನಾಮಿ ಭೂವ್ಯವಹಾರಗಳ ಬಗ್ಗೆ ಹಾಗೂ ಆ ಬಗೆಗಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೌನದ ಬಗ್ಗೆ ಪದೇ ಪದೇ ವಾಕ್ದಾಳಿ ನಡೆಸುತ್ತಲೇ ಬಂದಿದ್ದಾರೆ.
ಲಾಲು ಮತ್ತು ಆತನ ಕುಟುಂಬದವರ ಮೇಲೆ ಇನ್ನಾದರೂ ಕಾನೂನು ಕ್ರಮತೆಗೆದುಕೊಳ್ಳುವಿರೋ ಇಲ್ಲವೋ ಎಂದು ಪ್ರಸಾದ್ ಅವರು ನಿತೀಶ್ಗೆ ಈಚೆಗೆ ನೇರ ಚ್ಯಾಲೆಂಜ್ ಹಾಕಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?