ಮುಂಬಯಿ: 15 ವರ್ಷಗಳಲ್ಲಿ ಕಡಿಮೆ ಶಬ್ದ ಮಾಲಿನ್ಯ
Team Udayavani, Nov 18, 2020, 12:18 AM IST
ಸಾಂದರ್ಭಿಕ ಚಿತ್ರ
ಮುಂಬಯಿ: ಸಡಗರ ಮತ್ತು ಸಾಂಪ್ರದಾಯಿಕ ಹಬ್ಬವಾದ ದೀಪಾವಳಿಯ ಈ ವರ್ಷದ ಆಚರಣೆ ವೇಳೆ ಪಟಾಕಿ ಸಿಡಿಸಬಾರದು ಎಂಬ ಸರಕಾರದ ಕರೆಗೆ ಮುಂಬಯಿಗರ ರಿಂದ ಸರಕಾತ್ಮಕ ಪ್ರತಿಕ್ರಿಯೆ ದೊರೆತಿದೆ. ಆದ್ದರಿಂದ ಕಳೆದ 15 ವರ್ಷಗಳಲ್ಲಿ ಅತಿ ಕಡಿಮೆ ಶಬ್ದ ಮಾಲಿನ್ಯ ಶನಿವಾರ ಲಕ್ಷ್ಮೀ ಪೂಜೆಯಂದು ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ಈ ವರ್ಷದ ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ವಾಯುಮಾಲಿನ್ಯವನ್ನು ತಡೆಯಲು ಎಂಎಂಸಿ ಸಾರ್ವ ಜನಿಕ ಸ್ಥಳಗಳಲ್ಲಿ ಪಟಾಕಿ ಬಳಸುವುದನ್ನು ನಿಷೇಧಿಸಿತ್ತು. ಇದರ ಪರಿಣಾಮವಾಗಿ ಪಟಾಕಿ ಸಿಡಿಸುವುದರಿಂದ ಉಂಟಾಗುವ ಶಬ್ದ ಮಾಲಿನ್ಯವು ಈ ವರ್ಷ ಅತ್ಯಂತ ಕಡಿಮೆ ಎಂದು ದಾಖಲಾಗಿದೆ ಎಂದು ಆವಾಜ್ ಪ್ರತಿಷ್ಠಾನ ಎಂಬ ಎನ್ಜಿಒ ಈ ವರದಿಯನ್ನು ಸಿದ್ಧಪಡಿಸಿದೆ. ಆವಾಜ್ ಫೌಂಡೇಶನ್ನ ಸುಮೈರಾ ಅಬ್ದುಲ್ಲಿ ಅವರ ಪ್ರಕಾರ, ಈ ವರ್ಷ ದೀಪಾವಳಿಯಲ್ಲಿ ಮುಂಬಯಿ ಮಹಾನಗರ ಪಾಲಿಕೆಯು ಪಟಾಕಿಯ ಮೇಲೆ ನಿರ್ಬಂಧ ಹಾಕಿದ್ದರಿಂದ ಎಲ್ಲಕ್ಕಿಂತ ಕಡಿಮೆ ಶಬ್ದ ಮಾಲಿನ್ಯ ನೋಂದಾಯಿಸಲಾಯಿತು. ಅದೇ ಸಮಯದಲ್ಲಿ, ಶಬ್ದ ಮಾಲಿನ್ಯದ ಬಗ್ಗೆ ನಾಗರಿಕರಲ್ಲಿ ಜಾಗೃತಿ ಹೆಚ್ಚುತ್ತಿದೆ. ಮುಂಬಯಿ ಈ ಹಿಂದೆ 2019 ರಲ್ಲಿ 112.3 ಡೆಸಿಲ್, 2018 ರಲ್ಲಿ 114.1 ಡೆಸಿಬಲ್ ಮತ್ತು 2017ರಲ್ಲಿ 117.8 ಡೆಸಿಬಲ್ ದಾಖಲಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು