ಚೀನಾ ಚಿಪ್‌ ಮೂಲಕ ಪೆಟ್ರೋಲ್‌-ಡೀಸೆಲ್‌ ಕಳ್ಳತನ ಚಾಲ! ಓರ್ವ ಸೆರೆ


Team Udayavani, Jul 13, 2017, 10:55 AM IST

6.jpg

 ಮುಂಬಯಿ: ಎಲೆಕ್ಟ್ರಾನಿಕ್‌ ಚಿಪ್‌ ಮೂಲಕ ಪೆಟ್ರೋಲ್‌ ಪಂಪ್‌ನಿಂದ ಪೆಟ್ರೋಲ್‌-ಡೀಸೆಲ್‌ ಕಳ್ಳತನ ಮಾಡುವ ರ್ಯಾಕೆಟ್‌ನ  ಮಾಸ್ಟರ್‌ಮೈಂಡ್ ಪ್ರಶಾಂತ್‌ ನುಲ್ಕರ್‌ನನ್ನು  ಥಾಣೆ ಅಪರಾಧ ಶಾಖೆಯ ಪೊಲೀಸರು ಕರ್ನಾಟಕದ ಹುಬ್ಬಳ್ಳಿಯಲ್ಲಿ ಬಂಧಿಸಿ ಮುಂಬಯಿಗೆ ಕರೆ ತಂದಿದ್ದಾರೆ.

 ಪ್ರಶಾಂತ್‌ ದೇಶದಾದ್ಯಂತ  ಪೆಟ್ರೋಲ್‌ ಕಳ್ಳತನ  ಮಾಡುವ ಚಿಪ್‌ಗ್ಳನ್ನು  ಪೂರೈಕೆ ಮಾಡುತ್ತಿದ್ದ. ಈತ ಪೆಟ್ರೋಲ್‌ ತುಂಬಿಸುವ ಯಂತ್ರ ತಯಾರಿಕಾ ಕೆಂಪೆನಿಯ ಮಾಜಿ ನೌಕರನಾಗಿದ್ದ.  ಚಿಪ್‌ ಮೂಲಕ ಪೆಟ್ರೋಲ್‌ ಕದಿಯುವ ಆರೋಪದ ಮೇಲೆ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ  ಥಾಣೆ ಯೊಂದರಲ್ಲೇ 98 ಪೆಟ್ರೋಲ್‌ ಪಂಪ್‌ ಗಳಿಗೆ ಮೊಹರು ಹಾಕಲಾಗಿತ್ತು. 

ಸಹಚರ ವಿವೇಕ್‌ ಶೇಟೆ ಜೊತೆಗೆ ಸೇರಿಕೊಂಡು ಇಡೀ ದೇಶಕ್ಕೆ ಚಿಪ್‌ ಪೂರೈಕೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿವೇಕ್‌ನನ್ನು ಮೇ ತಿಂಗಳಲ್ಲಿ ಉತ್ತರ ಪ್ರದೇಶದಿಂದ ಬಂಧಿಸಲಾಗಿತ್ತು. ವಾಹನಗಳಿಗೆ ಪೆಟ್ರೋಲ್‌ ತುಂಬಿಸುವ ಡಿಸ್ಪೆಂಸಿಗ್‌ ಯೂನಿಟ್‌ಗಳ ನೋಜಲ್‌ನಲ್ಲಿ ಚಿಪ್‌ ಫಿಟ್‌ ಮಾಡಲಾಗುತ್ತಿತ್ತು. ಅನಂತರ ಅವುಗಳನ್ನು ರಿಮೋಟ್‌ ಮೂಲಕ ನಿಯಂತ್ರಿಸಲಾಗುತ್ತಿತ್ತು. 

ಈ ಚಿಪ್‌ ಮೂಲಕ ಪ್ರತಿ ಲೀಟರ್‌ನಿಂದ 20 ಮಿ.ಲೀ.  ಪೆಟ್ರೋಲ್‌/ಡಿಸೇಲ್‌ ಕಳವುಮಾಡಲಾಗುತ್ತಿತ್ತು. ಆದರೆ, ಗ್ರಾಹಕರು ಅದರಪೂರ್ತಿ ಪಾವತಿ ಮಾಡುತ್ತಿದ್ದರು.  ಪೆಟ್ರೋಲ್‌ಪಂಪ್‌ನ ಸಿಬಂದಿ ರಿಮೋಟ್‌ನಲ್ಲಿರುವ ಬಟನ್‌ ಒತ್ತುತ್ತಿದ್ದಂತೆಯೇ ಪೆಟ್ರೋಲ್‌ ಬೀಳುವುದು ನಿಲ್ಲುತ್ತಿತ್ತು. ಆದರೆ,  ಮೀಟರ್‌ ರೀಡಿಂಗ್‌ ಮೇಲೆ ಅದು ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಹಾಗಾಗಿ, ಗ್ರಾಹಕರಿಗೆ ತಾವು ಮೋಸ ಹೋಗಿದ್ದೇವೆ ಎಂದು ಗೊತ್ತಾಗುತ್ತಿರಲಿಲ್ಲ.

ನುಲ್ಕರ್‌ ಚೀನಾದಿಂದ ಈ ಚಿಪ್‌ಗ್ಳನ್ನು ತರಿಸುತ್ತಿದ್ದ. ವಿಶೇಷ ಸಾಫ್ಟ್‌ವೇರ್‌ವೊಂದನ್ನು ಬಳಸಿ ಅದರಲ್ಲಿ ಬದಲಾವಣೆ ಮಾಡುತ್ತಿದ್ದ ಎಂದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ.

ನುಲ್ಕರ್‌ ಮತ್ತು ಶೇಟೆಯ ಹೊರತಾಗಿ ಥಾಣೆ ಪೊಲೀಸರು ಈಗಾಗಲೇ ಪೆಟ್ರೋಲ್‌ ಪಂಪ್‌ಗ್ಳಿಗೆ ಚಿಪ್‌ಗ್ಳನ್ನು ಫಿಟ್‌ ಮಾಡುತ್ತಿದ್ದ 6 ಮಂದಿ ಫಿಟ್ಟರ್‌ಗಳನ್ನೂ ಬಂಧಿಸಿದ್ದಾರೆ.

ನುಲ್ಕರ್‌ ಚೀನಾದಿಂದ ಈ ಚಿಪ್‌ಗ್ಳನ್ನು ತರಿಸುತ್ತಿದ್ದ. ವಿಶೇಷ ಸಾಫ್ಟ್‌ವೇರ್‌ವೊಂದನ್ನು ಬಳಸಿ ಅದರಲ್ಲಿ ಬದಲಾವಣೆ ಮಾಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಟಾಪ್ ನ್ಯೂಸ್

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

NEET Exam ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ “ನೀಟ್‌’ ಪರೀಕ್ಷೆ

NEET Exam ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ “ನೀಟ್‌’ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

1-wwewewqe

Temple; ಎಪ್ರಿಲ್‌ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.