ಸೇನೆ ಬಲಪಡಿಸಲು ಅಗ್ನಿವೀರ ಯೋಜನೆ: ಅಗ್ನಿವೀರರ ಜತೆ ಸಂವಾದದಲ್ಲಿ ಪ್ರಧಾನಿ
Team Udayavani, Jan 17, 2023, 12:38 AM IST
ಹೊಸದಿಲ್ಲಿ: ಭವಿಷ್ಯದ ಯುದ್ಧ ಸನ್ನದ್ಧ ಸ್ಥಿತಿಗೆ ಅನುಗುಣವಾಗಿ ದೇಶದ ಸಶಸ್ತ್ರ ಪಡೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಅಗ್ನಿವೀರ ಯೋ ಜನೆ ಜಾರಿಗೊಳಿಸಲಾಗಿದೆ. ಇದು ದೊಡ್ಡ ಮಟ್ಟದ ಪರಿವರ್ತನೆ ತರಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಗ್ನಿವೀರರ ಮೊದಲ ತಂಡದೊಂದಿಗೆ ಸೋಮವಾರ ನಡೆದ ಸಂವಾದದಲ್ಲಿ ಪ್ರಧಾನಿಯವರು ಈ ಮಾತುಗಳನ್ನಾಡಿದ್ದಾರೆ.
ಈ ಬಗ್ಗೆ ಕೇಂದ್ರ ಸರಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಧಾನಿಯವರು ಮೊದಲ ಹಂತದ ಅಗ್ನಿವೀರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಸರಕಾರದ ಹೊಸ ಯೋಜನೆಯಿಂದಾಗಿ ಮಹಿಳೆಯರೂ ಹೆಚ್ಚಿನ ರೀತಿಯಲ್ಲಿ ಸಶಕ್ತರಾಗಲಿದ್ದಾರೆ. ಸೇನಾ ಪಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮುದಾಯದವರೇ ಇರಲಿರುವುದರಿಂದ ಸೇನೆಗೆ ಯುವಚೈತನ್ಯ ಸಿಗಲಿದೆ ಮತ್ತು ತಾಂತ್ರಿಕವಾಗಿಯೂ ಸೇನೆಯ ಉನ್ನತೀಕರಣ ಸಾಧ್ಯವಾಗಲಿದೆ ಎಂದರು.
ಮುಂದಿನ ದಿನಗಳಲ್ಲಿ ಸೈಬರ್ ಯುದ್ಧದಂಥ ಸಂಪರ್ಕ ರಹಿತ ಯುದ್ಧಗಳೇ ನಡೆಯಲಿವೆ. ಯುದ್ಧ ಎನ್ನುವ ಭಾಷ್ಯವೇ ಬದಲಾವಣೆ ಯಾಗಲಿದೆ. ಇಂಥ ಸಂದರ್ಭಗಳಲ್ಲಿ ಸೇನೆಗೆ ನೇಮಕಗೊಳ್ಳುವವರು ತಾಂತ್ರಿಕವಾಗಿ ಹೆಚ್ಚು ಪರಿಣತರಾಗಿರಬೇಕು. ನವ ಭಾರತದಲ್ಲಿ ಸಶಸ್ತ್ರಪಡೆಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ ಮತ್ತು ಸ್ವಾವಲಂಬಿಯಾಗಿ ಮಾಡಲಾಗುತ್ತಿದೆ ಎಂದೂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ