ಗುಜರಾತ್ ಗುಂಗು ಆಯ್ತು, ಈಗ ಕೇರಳ ಓಖೀ ಸಂತ್ರಸ್ತರತ್ತ ರಾಹುಲ್
Team Udayavani, Dec 14, 2017, 3:33 PM IST
ಪೂಂತುರ, ಕೇರಳ : ಹೈ ವೋಲ್ಟೇಜ್ ಗುಜರಾತ್ ಚುನಾವಣಾ ಪ್ರಚಾರಾಭಿಯಾನದ ಗುಂಗಿನಿಂದ ಕ್ಷಿಪ್ರಗತಿಯಲ್ಲಿ ಹೊರಬಂದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಂದು ದಕ್ಷಿಣ ಕೇರಳದಲ್ಲಿ ಈಚೆಗೆ ಓಖೀ ಚಂಡಮಾರುತದ ಹೊಡೆತದಲ್ಲಿ ಜೀವ ಕಳೆದುಕೊಂಡಿದ್ದ ಮೀನುಗಾರರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿ, ಸಾಧ್ಯವಿರುವ ಎಲ್ಲ ನೆರವು ದೊರಕುವಂತೆ ಮಾಡಲು ತಾನು ಯತ್ನಿಸುವುದಾಗಿ ಭರವಸೆ ನೀಡಿದರು.
66 ಜೀವಗಳನ್ನು ಬಲಿತೆಗೆದುಕೊಂಡಿದ್ದ ಓಖೀ ಚಂಡಮಾರುತಕ್ಕೆ ನಲುಗಿದ್ದ ಕೇರಳದ ವಿವಿಧ ಪ್ರದೇಶಗಳಿಗೆ ರಾಹುಲ್ ಗಾಂಧಿ ಭೇಟಿ ನೀಡಿದರು. ಗುಜರಾತ್ ಚುನಾವಣಾ ಪ್ರಚಾರ ಕಾರ್ಯದ ನಿಮಿತ್ತ ತನಗೆ ಸಕಾಲದಲ್ಲಿ ಇಲ್ಲಿಗೆ ಬರಲಾಗಲಿಲ್ಲ ಎಂದು ರಾಹುಲ್, ಚಂಡಮಾರುತ ಸಂತ್ರಸ್ತರಿಗೆ ಹೇಳಿದರು.
“ದುರಂತ ಸಂಭವಿಸಿದ ವೇಳೆ ದೈಹಿಕವಾಗಿ ನಾನು ಇಲ್ಲಿ ಇರಲಿಲ್ಲವಾದರೂ ನನ್ನ ಮನಸ್ಸು, ಹೃದಯ ಇಲ್ಲಿಯೇ ಇತ್ತು; ಸಂತ್ರಸ್ತರಿಗಾಗಿ ಮಿಡಿಯುತ್ತಿತ್ತು. ಚಂಡಮಾರುತಕ್ಕೆ ಬಲಿಯಾದವರಿಗೆ ಗೌರವ ಅರ್ಪಿಸಲು ನಾನೀಗ ಇಲ್ಲಿಗೆ ಬಂದಿದ್ದೇನೆ’ ಎಂದು ರಾಹುಲ್ ಹೇಳಿದರು.
ಕಳೆದ ನವೆಂಬರ್ 30ರಂದು ಕೇರಳ ಮತ್ತು ನೆರೆಯ ತಮಿಳು ನಾಡು ಕರಾವಳಿಗೆ ಅಪ್ಪಳಿಸಿದ್ದ ಓಖೀ ಚಂಡಮಾರುತಕ್ಕೆ 66 ಮಂದಿ ಬಲಿಯಾಗಿದ್ದರು; ವ್ಯಾಪಕ ನಾಶ ನಷ್ಟ ಉಂಟಾಗಿತ್ತು; ಹಲವು ಬೆಸ್ತರು ನಾಪತ್ತೆಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್