ಪಿತ್ರೋಡ ಜೀ, ನಿಮಗೆ ನಾಚಿಕೆಯಾಗಬೇಕು, ನೀವು ದೇಶದ ಕ್ಷಮೆಯಾಚಿಸಬೇಕು: ರಾಹುಲ್
Team Udayavani, May 13, 2019, 7:15 PM IST
ಖನ್ನಾ , ಪಂಜಾಬ್ : 1984ರ ಸಿಕ್ಖ್ ವಿರೋಧಿ ನರಮೇಧಕ್ಕೆ ಸಂಬಂಧಿಸಿ ‘ಹುವಾ ತೋ ಹುವಾ – ಆದದ್ದು ಆಗಿ ಹೋಯಿತು, ಏನೀಗ ?’ ಎಂದು ಕಾಂಗ್ರೆಸ್ ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡ ನೀಡಿದ್ದ ವಿವಾದಾತ್ಮಕ ಹೇಳಿಕೆ ಈಗ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರಿಗೆ ಪಂಜಾಬ್ ನಲ್ಲಿ ತಿರುಗುಬಾಣವಾಗಿದೆ.
ಪಂಜಾಬ್ ನ ಮೊದಲ ಚುನಾವಣಾ ರಾಲಿಯಲ್ಲಿಂದು ಮಾತನಾಡಿದ ರಾಹುಲ್ ಗಾಂಧಿ, “ಹುವಾ ತೋ ಹೇಳಿಕೆ ನೀಡಿದ್ದ ಪಿತ್ರೋಡ ಗೆ ನಾಚಿಕೆಯಾಗಬೇಕು; ಅವರು ಈ ಹೇಳಿಕೆಗಾಗಿ ದೇಶದ ಕ್ಷಮೆಯಾಚಿಸಬೇಕು’ ಎಂದು ಬಹಿರಂಗವಾಗಿ ಹೇಳುವ ಮೂಲಕ ಪಕ್ಷಕ್ಕೆ ಈಗಾಗಲೇ ಆಗಿರುವ ಭಾರೀ ಹಾನಿಯನ್ನು ಕಡಿಮೆಗೊಳಿಸುವ ಪ್ರಯತ್ನ ಮಾಡಿದರು.
ರಾಹುಲ್ ಗಾಂಧಿ ಅವರು ಈ ಮೊದಲೇ ಪಿತ್ರೋಡ ಅವರ ಹುವಾ ತೋ ಹುವಾ ಹೇಳಿಕೆಗೆ ತನ್ನ ಸಹಮತ ಇಲ್ಲ ಎಂದಿದ್ದರಲ್ಲದೆ ಅವರ ಹೇಳಿಕೆಯಿಂದ ದೂರ ಸರಿದಿದ್ದರು.
‘1984ರ ಸಿಕ್ಖ್ ವಿರೋಧಿ ಹಿಂಸೆ ಬಗ್ಗೆ ಸ್ಯಾಮ್ ಪಿತ್ರೋಡ ನೀಡಿದ್ದ ಹೇಳಿಕೆ ಸಂಪೂರ್ಣವಾಗಿ ತಪ್ಪು; ಅದಕ್ಕಾಗಿ ಅವರು (ಪಿತ್ರೋಡ) ದೇಶದ ಕ್ಷಮೆಯಾಚಿಸಬೇಕು; ನಾನಿದನ್ನು ಸಾರ್ವಜನಿಕವಾಗಿ ಹೇಳುತ್ತಿದ್ದೇನೆ; ಅವರಿಗೆ ಫೋನ್ ಮೂಲಕ ಈಗಾಗಲೇ ನಾನಿದನ್ನು ಹೇಳಿದ್ದೇನೆ. ಪಿತ್ರೋಡ ಜೀ, ನೀವು ಹೇಳಿರುವುದು ಸಂಪೂರ್ಣ ತಪ್ಪು; ಆ ಬಗ್ಗೆ ನಿಮಗೆ ನಾಚಿಕೆಯಾಗಬೇಕು; ಅದಕ್ಕಾಗಿ ನೀವು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು’ ಎಂದು ರಾಹುಲ್ ಗಾಂಧಿ ಇಂದಿಲ್ಲಿ ಮಾಡಿದ ಚುನಾವಣಾ ಪ್ರಚಾರ ಭಾಷಣದ ಕೊನೆಯಲ್ಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ