- Tuesday 10 Dec 2019
ರಾಜ್ಯದ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಪ್ಯಾನ್ ಇಲ್ಲ
Team Udayavani, Feb 14, 2019, 12:30 AM IST
ಹೊಸದಿಲ್ಲಿ: ಕರ್ನಾಟಕವೂ ಸಹಿತ 12 ರಾಜ್ಯಗಳಲ್ಲಿ ಕಂಪೆನಿಗಳಲ್ಲಿರುವ ಶೇ.95ರಷ್ಟು ಸಂಸ್ಥೆಗಳು ತೆರಿಗೆ ವ್ಯಾಪ್ತಿಯಿಂದ ಹೊರತಾಗಿಯೇ ಇವೆ. ಅದನ್ನು ತಿಳಿದುಕೊಳ್ಳಲು ಇಲಾಖೆ ಬಳಿ ಯಾವುದೇ ವ್ಯವಸ್ಥೆ ಇಲ್ಲ ಎಂದು ಮಹಾಲೇಖಪಾಲ (ಸಿಎಜಿ)ರ ವರದಿ ತಿಳಿಸಿದೆ. ಕರ್ನಾಟಕದಲ್ಲಿ ಒಟ್ಟು, 3,048 ಸಂಸ್ಥೆಗಳು ಉದ್ದಿಮೆಯಲ್ಲಿ ತೊಡಗಿಸಿಕೊಂಡಿವೆ. ಈ ಪೈಕಿ 1,853ಗಳಿಗೆ ಪ್ಯಾನ್ ಸಂಖ್ಯೆ (ಶೇ. 60) ಹೊಂದಿಲ್ಲ. ಕೇರಳದಲ್ಲಿ 1,787 ಸಂಸ್ಥೆಗಳು ಉದ್ದಿಮೆಯಲ್ಲಿ ತೊಡಗಿದ್ದು, 1,161 ಸಂಸ್ಥೆಗಳು ಪ್ಯಾನ್ (ಶೇ.65.8) ಹೊಂದಿಲ್ಲ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಒಟ್ಟು 7 ರಾಜ್ಯಗಳಲ್ಲಿರುವ ಈ ಕ್ಷೇತ್ರದ ಸಂಸ್ಥೆಗಳು ಶೇ.100ರಷ್ಟು ಪ್ಯಾನ್ ನಂಬರ್ ಹೊಂದಿಯೇ ಇಲ್ಲ.
ಜತೆಗೆ ದೇಶದ ರಿಯಲ್ಎಸ್ಟೇಟ್ ವಲಯದಲ್ಲಿ ಕಾರ್ಯ ವೆಸಗುತ್ತಿರುವ ಕಂಪೆನಿಗಳ ಪೈಕಿ ಎಷ್ಟಕ್ಕೆ ಪ್ಯಾನ್ ಕಾರ್ಡ್ಗಳಿವೆ ಮತ್ತು ಅವುಗಳ ಪೈಕಿ ಎಷ್ಟು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುತ್ತವೆ ಎಂದು ಕೇಳಿದೆ. “ಪರಿಶೀಲನೆ ಮಾಡಿದ 78,647 ಅಸೆಸ್ಮೆಂಟ್ಗಳ ಪೈಕಿ 17,155 ದಾಖಲೆಗಳು 1,02,106 ಕೋಟಿ ರೂ.ಆದಾಯ ತೋರಿಸಿವೆ’ ಎಂದಿದೆ ವರದಿ. ಈ ಬಗ್ಗೆ ರಿಜಿಸ್ಟ್ರಾರ್ ಆಫ್ ಕಂಪೆನೀಸ್ ಗೆ ಕೂಡ ಮಾಹಿತಿ ಇಲ್ಲ.
ಈ ವಿಭಾಗದಿಂದ ಇನ್ನಷ್ಟು
-
ಗುಡಿವಾಡ: ಈರುಳ್ಳಿ ದರ ಗಗನಕ್ಕೇರಿರುವುದು ಬಳಕೆದಾರರ ಕಣ್ಣೀರಿಗೆ ಕಾರಣವಾಗಿದೆ. ಆದರೆ ಈರುಳ್ಳಿ ಕೊಳ್ಳಲು ಮಾರುಕಟ್ಟೆಗೆ ಹೋದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ...
-
ಹೊಸದಿಲ್ಲಿ: ಭಾರಿ ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಇಂದು ಈಶಾನ್ಯ ಭಾರತದ ರಾಜ್ಯಗಳಲ್ಲಿ ಬಂದ್ ಆಚರಿಸಲಾಗುತ್ತಿದೆ. ಈಶಾನ್ಯ...
-
ಹೊಸದಿಲ್ಲಿ: ಜನರ ಬ್ಯಾಂಕ್ ಖಾತೆಯಿಂದ ಕಳ್ಳದಾರಿಯಲ್ಲಿ ಹಣ ಕದಿಯುತ್ತಿದ್ದ ರೋಮಾನಿಯಾದ ಪ್ರಜೆಯೋರ್ವನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರೋಮಾನಿಯಾ...
-
ಹೊಸದಿಲ್ಲಿ: ಐವತ್ತು ಮೈಕ್ರಾನ್ಗಳಿಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್ ಬ್ಯಾಗ್ ಬಳಕೆಯಲ್ಲಿ ಬರದಂತೆ ನೋಡಿಕೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ...
-
ಹೊಸದಿಲ್ಲಿ: ಅಯೋಧ್ಯೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮಸೀದಿ ನಿರ್ಮಾಣಕ್ಕೆಂದು ಐದು ಎಕರೆ ಜಮೀನು ನೀಡಬೇಕಾದ ಅಗತ್ಯ ಇಲ್ಲ ಎಂದು ಪ್ರತಿಪಾದಿಸಿ ಹಿಂದೂ ಮಹಾಸಭಾ...
ಹೊಸ ಸೇರ್ಪಡೆ
-
ದಾವಣಗೆರೆ: ಅಂಗವಿಕಲರು ಉತ್ತಮ ಸಾಧನೆಯ ಮೂಲಕ ಯಾರಿಗೇನು ಕಡಿಮೆ ಇಲ್ಲ ಎಂಬುದನ್ನು ತೋರಿಸಬೇಕು ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್...
-
ಬೆಂಗಳೂರು: ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಭಾರಿ ಚರ್ಚೆಯ ನಂತರ ಮಧ್ಯರಾತ್ರಿ...
-
ದಾವಣಗೆರೆ: ರೈತರ ಕುಂದುಕೊರತೆ ಚರ್ಚಿಸಲು ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದ್ದಾರೆ. ಸೋಮವಾರ...
-
ಬೆಂಗಳೂರು: 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಯಾಕೆ ಹಿನ್ನಡೆ ಆಗಿದೆಯೆಂದು ಸಂಪೂರ್ಣವಾಗಿ ಎಲ್ಲರೊಂದಿಗೆ ಹೇಳುತ್ತೇನೆ ಎಂದು ಕಾಂಗ್ರೆಸ್ ನಾಯಕ...
-
ನ್ಯೂಯಾರ್ಕ್: ಅಮೆರಿಕದ ಮಾಜಿ ಬೇಸ್ ಬಾಲ್ ಆಟಗಾರ, ಜಗತ್ತಿನಾದ್ಯಂತ “ಐಸ್ ಬಕೆಟ್ ಚಾಲೆಂಜ್” ಮೂಲಕ ದೇಣಿಗೆ ಸಂಗ್ರಹಿಸಲು ಸ್ಫೂರ್ತಿಯಾಗಿದ್ದ ಪೀಟ್ ಫ್ರೇಟ್ಸ್(34ವರ್ಷ)...