ಸೂಪರ್‌ಮೂನ್‌ ಸಂಭ್ರಮ; ಚಂಡಮಾರುತದ ಭಯ


Team Udayavani, May 26, 2021, 6:55 AM IST

ಸೂಪರ್‌ಮೂನ್‌ ಸಂಭ್ರಮ; ಚಂಡಮಾರುತದ ಭಯ

ಮೇ 26ರಂದು ಹುಣ್ಣಿಮೆ. ಅದೇ ದಿನ ಚಂದ್ರ ಭೂಮಿಗೆ ಸಮೀಪ ಬರುವುದರಿಂದ ಸೂಪರ್‌ ಮೂನ್‌. ಈ ಬಾರಿ ಪೂರ್ಣಿಮೆ, ಸೂಪರ್‌ ಮೂನ್‌, ಚಂಡಮಾರುತದ ಆಗಮನ ಹೀಗೆ ತ್ರಿವೇಣಿ ಸಂಗಮವಾಗಿದೆ.

ಚಂದ್ರನ ಪಥ ದೀರ್ಘ‌ ವೃತ್ತಾಕಾರ. ಇದು ಒಮ್ಮೊಮ್ಮೆ ಭೂಮಿಗೆ ಹತ್ತಿರವೂ ಒಮ್ಮೊಮ್ಮೆ ದೂರವೂ ಇರುತ್ತದೆ. ಸಮೀಪವಿರುವ ದೂರವನ್ನು ಪೆರಿಜಿ ಎಂದೂ ದೂರದ ದೂರವನ್ನು ಅಪೊಜಿ ಎಂದೂ ಕರೆಯುತ್ತಾರೆ.

ಬುಧವಾರ ದೇಶದ ಪೂರ್ವ ಕರಾ ವಳಿಗೆ “ಯಾಸ್‌’ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಷ್ಟೂ ಅಲ್ಲದೆ ಈ ದಿನ ಭಾರತದ ಹೆಚ್ಚಿನ ಭಾಗಗಳಿಗೆ ಗೋಚರವಾಗದೆ ಇರುವ ಚಂದ್ರಗ್ರಹಣವೂ ಸಂಭವಿಸಲಿದೆ.

ಇವುಗಳೆಲ್ಲದರ ಪರಿಣಾಮವಾಗಿ ನಮ್ಮ ಪಶ್ಚಿಮ ಕರಾವಳಿಯಲ್ಲಿ ಸಮುದ್ರದ ತೆರೆ (ಭರತ- ಇಳಿತ)ಗಳ ಅಬ್ಬರ ಜೋರಿರಬಹುದು.
ಪ್ರತೀ ಹುಣ್ಣಿಮೆ ಹಾಗೂ ಅಮಾ ವಾಸ್ಯೆಗಳಲ್ಲಿ ಸೂರ್ಯ, ಚಂದ್ರ, ಭೂಮಿ ಇವುಗಳು ಸರಿಸುಮಾರು ನೇರ ವಿರುವುದರಿಂದ ಸಮುದ್ರದ ನೀರಿನ ಮೇಲೆ ಮಾಮೂಲಿಗಿಂತ ಹೆಚ್ಚಿನ ಬಲವುಂಟಾಗಿ ಭರತ-ಇಳಿತಗಳು ಜೋರಾಗಿರುತ್ತವೆ. ಪ್ರತೀ ಹುಣ್ಣಿಮೆ ಯಲ್ಲೂ ಅಮಾವಾಸ್ಯೆ ದಿನದಂದೂ ಗುರುತ್ವಾಕರ್ಷಣ ಬಲ ಹೆಚ್ಚಿಗೆ ಇರುತ್ತದೆ. ಸೂರ್ಯ, ಚಂದ್ರರಿಬ್ಬರ ಬಲವಿದ್ದರೂ ಚಂದ್ರನ ಬಲ ಸಮುದ್ರದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಮೂರೂ ಸರಳ ರೇಖೆಯಲ್ಲಿರುವುದರಿಂದ ಗುರುತ್ವಾಕರ್ಷಣೆ ಬಲದಿಂದ ಸಮುದ್ರ ಉಬ್ಬಿದಂತಾಗುತ್ತದೆ. ಸುಮಾರು ಎರಡು ಅಡಿ ನೀರಿನ ಮಟ್ಟ ಹೆಚ್ಚಿರುತ್ತದೆ. ತಿಂಗಳ ಉಳಿದ 28 ದಿನಗಳಲ್ಲಿ ಸಹಜವಾಗಿರುತ್ತದೆ.

ಮೇ 26ರ ಹುಣ್ಣಿಮೆ ಮಾಮೂಲಿ ಹುಣ್ಣಿಮೆ ಗಳಿಗಿಂತ ತುಸು ಮೇಲು. ಗ್ರಹಣದ ಹುಣ್ಣಿಮೆ ದಿನ (ಸೂರ್ಯ, ಚಂದ್ರ, ಭೂಮಿ ನೇರ ಇರುವುದರಿಂದ) ಈ ಭರತ -ಇಳಿತಗಳ ವ್ಯತ್ಯಾಸ ಸ್ವಲ್ಪ ಹೆಚ್ಚೇ ಇರಲಿದೆ.

ಎಲ್ಲೆಲ್ಲಿ ಗೋಚರ?
ಈ ಅಪರೂಪದ ಖಗೋಳ ವಿಸ್ಮಯ ವನ್ನು ಕಣ್ತುಂಬಿಕೊಳ್ಳುವ ಭಾಗ್ಯ ಈಶಾನ್ಯ ಭಾರತೀಯರಿಗೆ ಮಾತ್ರವೇ ಲಭಿಸಲಿದೆ. ಈ ಭಾಗದಲ್ಲಿ ಅಪರಾಹ್ನ 3.14ಕ್ಕೆ ಆರಂಭಗೊಳ್ಳಲಿರುವ ಗ್ರಹಣ ಸಂಜೆ 6.23ಕ್ಕೆ ಅಂತ್ಯಗೊಳ್ಳಲಿದೆ. ಏಷ್ಯಾದ ಪೂರ್ವ ಕರಾವಳಿ, ಪೆಸಿಫಿಕ್‌ ಸಾಗರದ ಮಧ್ಯ ಭಾಗ, ಆಸ್ಟ್ರೇಲಿಯ, ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಗೋಚರವಾಗಲಿದೆ.

ಎಚ್ಚರಿಕೆ ಅಗತ್ಯ
ಇವುಗಳೆಲ್ಲದರ ಜತೆಗೆ ಆ ಕಡೆ ಪೂರ್ವ ಕರಾವಳಿಯಲ್ಲಿ ಪ್ರಬಲ ಚಂಡ ಮಾರುತವೂ ಈ ದಿನ ಅಬ್ಬರಿಸುವುದರಿಂದ ಪಶ್ಚಿಮ ತೀರದಲ್ಲಿ ಕಡಲು, ಹೆಚ್ಚಿನ ಅಲೆಗಳಿಂದ ಭರತ- ಇಳಿತಗಳ ವ್ಯತ್ಯಾಸ ಹೆಚ್ಚಿರಬಹುದು. ಇದು ಈ ದಿನವೇ ಇರಬಹುದು ಅಥವಾ ಆಸುಪಾಸಿನ ದಿನಗಳಲ್ಲೂ ಸಂಭವಿಸಬಹುದು. ಪಶ್ಚಿಮ ಸಮುದ್ರ ತೀರದಲ್ಲೂ ಎಚ್ಚರಿಕೆ ಅಗತ್ಯ.

ರೆಡ್‌ ಬ್ಲಿಡ್‌ ಮೂನ್‌
ಈ ಸೂಪರ್‌ ಮೂನ್‌ ಭೂಮಿಗೆ ಅತೀ ಸಮೀಪದ ಸೂಪರ್‌ ಮೂನ್‌. ಈ ದಿನ ಚಂದ್ರ, ಭೂಮಿಗೆ ಸುಮಾರು 3,57,462 ಕಿ.ಮೀ. ಅಂತರದಲ್ಲಿ ಬರಲಿದೆ. (ಸರಾಸರಿ ದೂರ 3,84,000 ಕಿ.ಮೀ.). ಈ ವರ್ಷ ಮಾ. 28, ಎ.27ರಂದು ಎರಡು ಸೂಪರ್‌ ಮೂನ್‌ ಆಗಿದೆ. ಜೂ. 24ರಂದು ಇನ್ನೊಂದು ಸೂಪರ್‌ ಮೂನ್‌ ಆಗಲಿದೆ. ಆದರೆ ಈ ಸೂಪರ್‌ ಮೂನ್‌ ಹೆಚ್ಚು ದೊಡ್ಡದಾಗಿ ಕಾಣುತ್ತದೆ. ಸೂಪರ್‌ ಮೂನ್‌ ದಿನಗಳಲ್ಲಿ 24 ಅಂಶ ಹೆಚ್ಚು ಪ್ರಭೆಯಿಂದಲೂ, 14 ಅಂಶ ದೊಡ್ಡದಾಗಿಯೂ ಚಂದ್ರ ಗೋಚರಿಸುತ್ತದೆ. ಅಷ್ಟು ಮಾತ್ರವಲ್ಲದೆ ಈ ಬಾರಿಯ ಗ್ರಹಣದ ಸಂದರ್ಭ ಚಂದ್ರ ಕೆಂಪು ಬಣ್ಣದಲ್ಲಿ ಕಂಗೊಳಿಸಲಿದ್ದಾನೆ. ಹೀಗಾಗಿ ಈ ಚಂದ್ರನನ್ನು ರೆಡ್‌ ಬ್ಲಿಡ್‌ ಮೂನ್‌ ಎಂದು ಕರೆಯಲಾಗುತ್ತದೆ. ಸೂಪರ್‌ ಮೂನ್‌ ಹುಣ್ಣಿಮೆಯ ಚಂದ್ರ ನೋಡಲು ಬಲು ಚೆಂದ.

– ಡಾ| ಎ. ಪಿ. ಭಟ್‌, ಉಡುಪಿ

ಟಾಪ್ ನ್ಯೂಸ್

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Malpe Beach: ಲೈಫ್‌ಗಾರ್ಡ್‌ ಮೇಲೆ ಹಲ್ಲೆ

Malpe Beach: ಲೈಫ್‌ಗಾರ್ಡ್‌ ಮೇಲೆ ಹಲ್ಲೆ

Malpe ಷೇರು ಮಾರುಕಟ್ಟೆ ಹೂಡಿಕೆ: ವಂಚನೆ

Malpe ಷೇರು ಮಾರುಕಟ್ಟೆ ಹೂಡಿಕೆ: ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.