ಸೊಹ್ರಾಬ್ ಎನ್ಕೌಂಟರ್ ಎಲ್ಲ ಆರೋಪಿಗಳ ಖುಲಾಸೆ
Team Udayavani, Dec 22, 2018, 11:05 AM IST
ಮುಂಬಯಿ: 2005ರಲ್ಲಿ ನಡೆದಿದ್ದ ಗುಜರಾತ್ ಗ್ಯಾಂಗ್ಸ್ಟರ್ ಸೊಹ್ರಾಬುದ್ದೀನ್ ಶೇಖ್ ಹಾಗೂ ಸಹಚರ ತುಳಸಿ ಪ್ರಜಾಪತಿಯ ಎನ್ಕೌಂಟರ್ ಹಾಗೂ ಸೊಹ್ರಾಬುದ್ದೀನ್ ಪತ್ನಿ ಕೌಸರ್ ಬೀ ಹತ್ಯೆ ಪ್ರಕರಣದ ಎಲ್ಲ 22 ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಖುಲಾಸೆ ಗೊಳಿಸಿದೆ. ಬಿಡುಗಡೆ ಗೊಂಡವರಲ್ಲಿ 21 ಮಂದಿ ರಾಜಸ್ಥಾನ, ಗುಜರಾತ್ಗೆ ಸೇರಿದ ಕಿರಿಯ ಪೊಲೀಸ್ ಅಧಿಕಾರಿಗಳಾಗಿದ್ದರೆ, ಮತ್ತೂಬ್ಬ ಕೌಸರ್ ಹತ್ಯೆ ನಡೆದಿದೆಯೆಂದು ಹೇಳಲಾಗಿರುವ ಗುಜರಾತ್ನ ಫಾರ್ಮ್ಹೌಸ್ನ ಮಾಲೀಕ.
2005ರ ನ. 22-23ರಂದು ಹೈದರಾಬಾದ್ನಿಂದ ಮಹಾರಾಷ್ಟ್ರದ ಸಾಂಗ್ಲಿಗೆ ಬಸ್ನಲ್ಲಿ ತೆರಳುತ್ತಿದ್ದ ಸೊಹ್ರಾಬುದ್ದೀನ್ ಹಾಗೂ ಆತನ ಪತ್ನಿಯನ್ನು ಮಾರ್ಗ ಮಧ್ಯೆಯೇ ವಶಕ್ಕೆ ಪಡೆದಿದ್ದ ಪೊಲೀಸರ ತಂಡವೊಂದು ಸೊಹ್ರಾಬುದ್ದೀನ್ನನ್ನು ನಕಲಿ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿತ್ತು ಎಂಬ ಆರೋಪ ಹೊರಿಸಲಾಗಿತ್ತು. ಅದಾಗಿ ಮೂರು ದಿನಗಳ ನಂತರ, ಕೌಸರ್ ಬೀ ಅವರು ಗುಜರಾತ್ನ ಫಾರ್ಮ್ಹೌಸ್ನಲ್ಲಿ ಹತ್ಯೆ ಯಾಗಿದ್ದರು. 2006ರ ಡಿ. 27ರಂದು ಸೊಹ್ರಾಬುದ್ದೀನ್ನ ಸಹಚರ ಪ್ರಜಾಪತಿಯನ್ನು ಗುಜರಾತ್-ರಾಜಸ್ಥಾನ ಗಡಿಭಾಗದಲ್ಲಿ ನಕಲಿ ಎನ್ಕೌಂಟರ್ನಲ್ಲಿ ಕೊಲ್ಲಲಾಗಿತ್ತು ಎಂಬ ಆರೋಪಗಳೂ ಕೇಳಿ ಬಂದಿದ್ದವು.
ಕ್ಷಮಿಸಿ…: ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಎಸ್.ಜೆ. ಶರ್ಮಾ, ನ್ಯಾಯಾಲಯದ ಮುಂದೆ ಹೇಳಿಕೆ ನೀಡಿರುವ 210 ಸಾಕ್ಷಿಗಳು ಸಮಾಧಾನಕರ ಸಾಕ್ಷ್ಯ ನೀಡಿಲ್ಲ. ಸರಕಾರಿ ವಕೀಲರು ಸಹ ಪೂರಕ ದಾಖಲೆಗಳನ್ನು ಸಲ್ಲಿಸಿಲ್ಲ. ಸಾಕ್ಷಿಗಳು ಬಾಯಿ ಬಿಡಲಿದ್ದರೆ ಅದು ಸರಕಾರಿ ವಕೀಲರ ತಪ್ಪಲ್ಲ. ಹಾಗಾಗಿ, ಈ ವಿಚಾರದಲ್ಲಿ ಸೊಹ್ರಾಬುದ್ದೀನ್, ಪ್ರಜಾ ಪತಿ ಕುಟುಂಬದ ಕ್ಷಮೆ ಕೋರುತ್ತಾ ಆರೋಪಿ ಗಳನ್ನು ಬಿಡುಗಡೆ ಮಾಡ ಲಾಗುತ್ತಿದೆ ಎಂದರು.
ಕಾಂಗ್ರೆಸ್ನ ಅಸಲಿತನ ಬಯಲು: ಬಿಜೆಪಿ
ಸಿಬಿಐ ನ್ಯಾಯಾಲಯದ ತೀರ್ಪನ್ನು ಬಿಜೆಪಿ ಸ್ವಾಗತಿಸಿದೆ. ಗಾಂಧಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಸೊಹ್ರಾಬುದ್ದೀನ್ ಎನ್ಕೌಂಟರ್ ನಕಲಿಯಲ್ಲ ಎಂದು ನಮ್ಮ ಪಕ್ಷ ಮೊದಲಿನಿಂದಲೂ ಹೇಳುತ್ತಾ ಬಂದಿತ್ತು. ಆದರೆ, ಇದನ್ನು ಕಾಂಗ್ರೆಸ್ ರಾಜಕೀಯಗೊಳಿಸಿತ್ತು. ಸಿಬಿಐನ ಇಂದಿನ ತೀರ್ಪು ಕಾಂಗ್ರೆಸ್ನ ಅಸಲಿತನವನ್ನು ಬಯಲುಗೊಳಿಸಿದೆ ಎಂದಿದ್ದಾರೆ. ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮಾತನಾಡಿ, 2007ರ ಗುಜರಾತ್ ಚುನಾವಣೆ ವೇಳೆ ಈ ಪ್ರಕರಣ ಉಲ್ಲೇಖೀಸಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮೋದಿಯವರನ್ನು ಸಾವಿನ ದಲ್ಲಾಳಿ ಎಂದು ಬಣ್ಣಿಸಿ ಮತ ಸೆಳೆಯಲು ಯತ್ನಿಸಿದ್ದರು. ಈಗ ನ್ಯಾಯಾಲಯದ ತೀರ್ಪಿನಿಂದಾಗಿ ಇದು ರಾಜಕೀಯ ಪ್ರೇರಿತ ಪ್ರಕರಣ ಎಂಬುದು ಸಾಬೀತಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ