Kerala: ಇಲ್ಲಿ ಸಾಕಷ್ಟು ನೀರಿದೆ, ನಮ್ಮ ರಾಜ್ಯಕ್ಕೆ ಬನ್ನಿ: ಕೇರಳ ಆಹ್ವಾನ
Team Udayavani, Mar 28, 2024, 6:30 AM IST
ತಿರುವನಂತಪುರ: ಕರ್ನಾಟಕದ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗ ಳೂರಿನಲ್ಲಿ ನೀರಿನ ಸಮಸ್ಯೆ ಎದುರಾ ಗುತ್ತಿ ದ್ದಂತೆಯೇ ನೆರ ರಾಜ್ಯವಾದ ಕೇರಳ ಬೆಂಗಳೂರಿನ ಐಟಿ ಸಂಸ್ಥೆಗಳತ್ತ ಕಣ್ಣು ಹಾಯಿಸಿದೆ. ನಮ್ಮ ರಾಜ್ಯದಲ್ಲಿ ನೀರಿನ ಜತೆಗೆ ಎಲ್ಲ ರೀತಿಯ ಸೌಲಭ್ಯಗಳನ್ನೂ ಒದಗಿಸಿಕೊಡುತ್ತೇವೆ, ಇಲ್ಲಿಯೇ ನಿಮ್ಮ ಕಂಪೆನಿಗಳನ್ನು ತೆರೆಯಿರಿ ಎಂದು ದೊಡ್ಡ ದೊಡ್ಡ ಐಟಿ ಸಂಸ್ಥೆಗಳಿಗೆ ಆಹ್ವಾನ ನೀಡಿದೆ.
ಈ ಕುರಿತಂತೆ ಕೇರಳದ ಕೈಗಾರಿಕೆ ಮತ್ತು ಕಾನೂನು ಸಚಿವರಾದ ಪಿ. ರಾಜೀವ್ ಅವರೇ ಖುದ್ದು ಮಾಹಿತಿ ನೀಡಿದ್ದು, “ಬೆಂಗಳೂರಿನಲ್ಲಿ ವಿಪರೀತ ವಾಗಿ ನೀರಿಗೆ ಸಮಸ್ಯೆಯಾಗಿರುವ ವರದಿ ಗಳನ್ನು ನಾವು ಓದಿದ್ದೇವೆ. ಈ ಹಿನ್ನೆಲೆಯಲ್ಲಿ ಐಟಿ ಸಂಸ್ಥೆಗಳಿಗೆ ಪತ್ರ ಬರೆದು ಎಲ್ಲ ಸೌಲಭ್ಯಗಳ ಜತೆಗೆ ನೀರನ್ನೂ ಒದಗಿಸುವುದಾಗಿ ಹೇಳಿದ್ದೇವೆ. ನಮ್ಮ ರಾಜ್ಯದಲ್ಲಿ 44 ನದಿಗಳಿವೆ ಹಾಗಾಗಿ ನೀರಿನ ಸಮಸ್ಯೆಯೂ ಇಲ್ಲ’ ಎಂದಿದ್ದಾರೆ.
ಅಲ್ಲದೇ ಬೆಂಗಳೂರಿನಂತೆಯೇ ನಮ್ಮ ಇಡೀ ರಾಜ್ಯವನ್ನು ಐಟಿ ಕೇಂದ್ರವನ್ನಾಗಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಇದಕ್ಕಾಗಿ ಅಗತ್ಯ ವಾದಂಥ ವ್ಯವಸ್ಥೆಗಳು, ಸೌಲಭ್ಯಗಳೂ ನಮ್ಮಲ್ಲಿ ಇವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ