ಚಿನ್ನದ ನಾಣ್ಯ: ಮಾಲೀಕನಿಗೆ ಒಪ್ಪಿಸಿದ ಕೂಲಿಯಾಳು!
ತಮಿಳುನಾಡಿನ ಶಾಂತಕುಲಂ ನಗರದಲ್ಲಿ ನಡೆದ ಘಟನೆ
Team Udayavani, Oct 20, 2021, 6:44 AM IST
ಚೆನ್ನೈ: ಕಷ್ಟಪಟ್ಟು ದುಡಿದ ಹಣದಲ್ಲಿ ಖರೀದಿಸಿದ್ದ ಚಿನ್ನದ ನಾಣ್ಯ ಕಸದ ಗಾಡಿಯಲ್ಲಿ ಕಸವಾಗಿ ಹೋಗಿದ್ದು, ಅದೃಷ್ಟವಶಾತ್ ಮಾಲೀಕನಿಗೆ ಮತ್ತೆ ಸಿಕ್ಕಿರುವ ಘಟನೆ ತಮಿಳುನಾಡಿನ ಶಾಂತಕುಲಂ ನಗರದಲ್ಲಿ ನಡೆದಿದೆ.
ಕೊರಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಗಣೇಶ್ ರಮಣ್ ಹೆಸರಿನ ವ್ಯಕ್ತಿ ಇತ್ತೀಚೆಗೆ 100 ಗ್ರಾಂ ಚಿನ್ನದ ನಾಣ್ಯವನ್ನು ಖರೀದಿಸಿ, ಗುಲಾಬಿ ಬಣ್ಣದ ಪೇಪರ್ನಲ್ಲಿ ಅದನ್ನು ಸುತ್ತಿ, ತಮ್ಮ ಹಾಸಿಗೆಯ ಕೆಳಗಿಟ್ಟಿದ್ದರು. ಅದನ್ನರಿಯದ ಅವರ ಹೆಂಡತಿ, ಕೋಣೆಯನ್ನು ಸ್ವಚ್ಛ ಮಾಡುವಾಗ ಅದನ್ನೂ ಕಸದೊಂದಿಗೆ ಸೇರಿಸಿ ಕಸದ ಗಾಡಿಗೆ ಹಾಕಿದ್ದಾರೆ.
ಕಸ ವಿಲೇವಾರಿ ಕೆಲಸ ಮಾಡುವ ಮೇರಿ ಹೆಸರಿನ ಮಹಿಳೆಗೆ ಅದು ಸಿಕ್ಕಿದ್ದು, ಅದನ್ನು ತಕ್ಷಣ ತನ್ನ ಮೇಲಿನ ಅಧಿಕಾರಿಗೆ ಹಸ್ತಾಂತರಿಸಿದ್ದಾಳೆ. ಇತ್ತ ನಾಣ್ಯ ಕಸದೊಂದಿಗೆ ಹೋಗಿದ್ದಾಗಿ ಗಣೇಶ್ ಕೂಡ ಶಾಂತಕುಲಂ ನಗರದ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ನಾಣ್ಯ ಪತ್ತೆ ಹಚ್ಚಿದ ಪೊಲೀಸರು, ಮೇರಿ ಕೈನಿಂದಲೇ ಅದನ್ನು ಗಣೇಶ್ಗೆ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ:100ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ