ಹಂತಕನಿಗೆ ಪ್ರಾಣಭೀತಿಯಂತೆ; ಕೂಲಿಕಾರ್ಮಿಕನ ಕೊಂದವನ ಅಳಲು
Team Udayavani, Feb 20, 2018, 3:30 PM IST
ಜೈಪುರ: ಕಳೆದ ವರ್ಷ ಡಿಸೆಂಬರ್ 6ರಂದು ರಾಜಸ್ಥಾನದಲ್ಲಿ “ಲವ್ ಜಿಹಾದ್’ ಆರೋಪದಡಿ, ಮೊಹಮ್ಮದ್ ಅಫ್ರಜುಲ್ ಎಂಬ ಕೂಲಿಕಾರ್ಮಿಕನೊಬ್ಬನನ್ನು ಕೊಂದು ಜೈಲುಪಾಲಾಗಿರುವ ಶಂಭುಲಾಲ್ ರೆಗರ್, ಭಾನುವಾರ ಜೈಲಿನಿಂದಲೇ ತಾನೇ ಚಿತ್ರಿಸಿರುವ ಸೆಲ್ಫಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.
ಇದರಲ್ಲಿ ಮಾತನಾಡಿರುವ ಆತ, ಅಫ್ರಜುಲ್ ನನ್ನು ಕೊಂದಿದ್ದಕ್ಕೆ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದಿದ್ದಾನೆ. ಆದರೆ, ಜೈಲಿನಲ್ಲಿ ತನಗೆ ಇತ್ತೀಚೆಗೆ ಪರಿಚಿತನಾಗಿರುವ ವ್ಯಕ್ತಿಯೊಬ್ಬ ತನ್ನ ಹತ್ಯೆಗೆ ಸಂಚು ಹೂಡಿರ ಬಹು ದೆಂಬ ಗುಮಾನಿ ಯನ್ನೂ ವ್ಯಕ್ತಪಡಿಸಿದ್ದಾನೆ.
ತನ್ನ ಇತ್ತೀಚೆಗಿನ ವಿಡಿಯೋದಲ್ಲಿ, ನನಗೆ ಈ ಜೈಲಿನಲ್ಲಿ ಬಿಗಿಭದ್ರತೆಯಿರುವ ಕೊಠಡಿ ನೀಡಿದ್ದಾರೆ. ಇಂಥ ಬಿಗಿಭದ್ರತೆಯ ನಡುವೆ ಯೂ, ಇದೇ ಜೈಲಿನಲ್ಲಿರುವ ಪಶ್ಚಿಮ ಬಂಗಾಳ ಮೂಲದ ವಾಸುದೇವ ಬ್ರಾಹ್ಮಣ್ ಎಂಬ ಕೈದಿ, ನನ್ನ ಬಳಿ ಬಂದು ಅನವಶ್ಯಕ ಸಲುಗೆ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ.
ಇತ್ತೀಚೆಗೆ, ಶೌಚಕ್ಕೆ ತೆರಳಿದ್ದ ವೇಳೆ ಆತ ಇಸ್ಲಾಂ ಧರ್ಮೀಯ ಎಂಬುದು ನನ್ನ ಗಮನಕ್ಕೆ ಬಂದಿದೆ. ಎಂಥ ಬಿಗಿಭದ್ರತೆಯ ನಡುವೆ ಇರುವ ಕೈದಿಗಳನ್ನೂ ಹೋಗಿ ಮಾತನಾಡಿಸುವ ಛಾತಿ ಜಿಹಾದಿಗಳ ಶಕ್ತಿಯನ್ನು ತೋರಿಸುತ್ತದೆ. ಹಾಗಾಗಿ, ಆತನ ಸಲುಗೆಯ ಬಗ್ಗೆ ನಂಬಿಕೆ
ಬರುತ್ತಿಲ್ಲ” ಎಂದಿದ್ದಾನೆ.
ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಜೈಲಿನ ಅಧಿಕಾರಿಗಳು, “ವಾಸುದೇವ ಪಶ್ಚಿಮ ಬಂಗಾಳದ ಬ್ರಾಹ್ಮಣನೇ ಹೊರತು ಮುಸ್ಲಿಮನಲ್ಲ. ಆತ ಮಾದಕ ದ್ರವ್ಯ ಕೇಸಿನಲ್ಲಿ ಜೈಲು ಸೇರಿದ್ದಾನೆ. ಶಂಭುಲಾಲ್ನ ಆರೋಪದಲ್ಲಿ ಹುರುಳಿಲ್ಲ’ ಎಂದಿದ್ದಾರೆ. ಜತೆಗೆ, ಅವನ ಕೈಗೆ ಮೊಬೈಲ್ ಫೋನ್ ಹೇಗೆ ಸಿಕ್ಕಿತು ಎಂಬ ಬಗ್ಗೆ ತನಿಖೆ ನಡೆಸುವುದಾಗಿಯೂ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ