“ನಾಗ’ದಿಂದ ಮಣಿಪುರಕ್ಕೆ ಕಾಡ್ಗಿಚ್ಚು
Team Udayavani, Jan 2, 2021, 12:54 AM IST
ಇಂಫಾಲ್: ನಾಗಲ್ಯಾಂಡ್ನ ದಟ್ಟಾರಣ್ಯ ಪ್ರದೇಶ ಝುಕೋವು ಕಾಡಿನಲ್ಲಿ ಉದ್ಭವಿಸಿರುವ ಕಾಡ್ಗಿಚ್ಚು ಈಗ ಮಣಿಪುರ ಪ್ರವೇಶಿಸಿದೆ. ಈ ನಡುವೆ ಗೃಹ ಸಚಿವ ಅಮಿತ್ ಶಾ, ಕಾಡ್ಗಿಚ್ಚು ನಂದಿಸಲು ಮಣಿಪುರ ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಬುಧವಾರದಿಂದಲೇ ನಾಗಲ್ಯಾಂಡ್ನ ಝುಕೋವು ವಲಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಗುರುವಾರ ರಾತ್ರಿಯಿಂದ ಇದು ಮಣಿಪುರ ಅರಣ್ಯಕ್ಕೆ ಖೋ ಕೊಟ್ಟಿದ್ದು, ರಾಜ್ಯ ಸರ್ಕಾರ ಎನ್ಡಿಆರ್ಎಫ್ ಕಳುಹಿಸಿಕೊಡುವಂತೆ ಕೇಂದ್ರ ಸರ್ಕಾರವನ್ನು ಕೋರಿತ್ತು.
ಶಾ ಭರವಸೆ: “ಝುಕೋವು ಕಣಿವೆಯಲ್ಲಿನ ಕಾಡ್ಗಿಚ್ಚಿನ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರ ಜತೆ ಚರ್ಚಿಸಿದ್ದೇನೆ. ವಿಪತ್ತು ನಿರ್ವಹಿಸಲು ಎನ್ಡಿಆರ್ಎಫ್ ಸೇರಿದಂತೆ ಎಲ್ಲ ರೀತಿಯ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ಮಣಿಪುರ ಸಿಎಂ ಬೈರೆನ್ ಸಿಂಗ್ ಟ್ವೀಟಿಸಿದ್ದಾರೆ. ಶುಕ್ರವಾರ ಸಿಎಂ ಕಾಡ್ಗಿಚ್ಚಿನ ಪ್ರದೇಶಗಳ ಮೇಲೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ