ಭಾರತವನ್ನು ಪಪ್ಪು ಮುಕ್ತ ಮಾಡುವೆ: ಉಚ್ಚಾಟಿತ ಮೀರತ್ ಕೈ ನಾಯಕನ ಪಣ
Team Udayavani, Jun 29, 2017, 11:20 AM IST
ಹೊಸದಿಲ್ಲಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತನ್ನ ವಾಟ್ಸಾಪ್ ಸಂದೇಶದಲಿಲ ಪಪ್ಪು ಎಂದು ಸಂಬೋಧಿಸಿ ಅದನ್ನು ಸ್ಥಳೀಯ ನಾಯಕರಿಗೆ ಕಳುಹಿಸಿದ್ದ ಕಾರಣಕ್ಕೆ ಪಕ್ಷದ ಎಲ್ಲ ಹುದ್ದೆಗಳಿಂದ ವಜಾಗೊಂಡಿದ್ದ ಮೀರತ್ನ ಸ್ಥಳೀಯ ಕಾಂಗ್ರೆಸ್ ನಾಯಕ ವಿನಯ್ ಪ್ರಧಾನ್ ಇದೀಗ “ಭಾರತವನ್ನು ಪಪ್ಪು ಮುಕ್ತ ಮಾಡುವೆ’ ಎಂಬ ಪಣತೊಟ್ಟಿರುವುದಾಗಿ ವರದಿಯಾಗಿದೆ.
“ನಾನು ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಕರೆದದ್ದು ಅವರನ್ನು ಅವಹೇಳನ ಮಾಡುವ ಉದ್ದೇಶದಿಂದಲ್ಲ; ಬದಲು ಎಲ್ಲರಿಗೂ ಆತ್ಮೀಯತೆಯಿಂದ ಕಾಂಗ್ರೆಸ್ ನಾಯಕನ ಸಾಧನೆಗಳನ್ನು ತಿಳಿಸುವ ಸಲುವಾಗಿ’ ಎಂದು ವಿನಯ್ ಪ್ರಧಾನ್ ಪಕ್ಷದ ಉನ್ನತರಿಗೆ ಮನವರಿಕೆ ಮಾಡಿದ್ದ ಹೊರತಾಗಿಯೂ ಪಕ್ಷದ ಎಲ್ಲ ಹುದ್ದೆಗಳಿಂದ ಉಚ್ಚಾಟನೆಗೊಂಡಿದ್ದರು.
ರಾಹುಲ್ ಗಾಂಧಿಯನ್ನು ಅತ್ಯಂತ ನಿಕಟ ಕೌಟುಂಬಿಕ ವರ್ತುಲದಲ್ಲಿ ಪಪ್ಪು ಎಂದು ಆತ್ಮೀಯತೆಯಿಂದ ಕರೆಯುವುದಿದೆ.
ಇದೀಗ ಇದಕ್ಕೆ ಪ್ರತೀಕಾರವಾಗಿ “ಭಾರತವನ್ನು ನಾನು ಪಪ್ಪು ಮುಕ್ತ ಮಾಡಿಯೇ ಸಿದ್ಧ’ ಎಂದು ವಿನಯ್ ಪ್ರಧಾನ್ ಪಣ ತೊಟ್ಟಿದ್ದಾರೆ. ನಿನ್ನೆ ಬುಧವಾರ ಪ್ರಧಾನ್ ಕಾಂಗ್ರೆಸ್ ಪಕ್ಷದಲ್ಲಿನ ತನ್ನ ಸದಸ್ಯತ್ವಕ್ಕೆ ತನ್ನ ರಾಜೀನಾಮೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RTO: ಇನ್ನು ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ಗಾಗಿ ಆರ್ಟಿಒ ಕಚೇರಿಗೆ ಹೋಗ್ಬೇಕಿಲ್ಲ!
Lucknow; ಶಕ್ತಿಯನ್ನು ಮಹಾಶಕ್ತಿ ಆಗಿ ಪರಿವರ್ತಿಸುವೆ: ಮೋದಿ
Election; ದ್ವೇಷ ಕಾರುವ ಪಿಎಂ ಮೋದಿ ರಾಜಕೀಯ ತ್ಯಜಿಸಲಿ: ಖರ್ಗೆ
GalaxEye; ರಾತ್ರಿಯಲ್ಲೂ ಭೂಮಿ ಚಿತ್ರ ಕ್ಲಿಕ್ಕಿಸುವ ಟೆಕ್ನಾಲಜಿ ಪರೀಕ್ಷೆ
Loksabha; ಬಿಜೆಪಿಗೆ 300 ಕ್ಷೇತ್ರಗಳಲ್ಲಿ ಜಯ ನಿಶ್ಚಿತ: ಪ್ರಶಾಂತ್ ಕಿಶೋರ್ ಭವಿಷ್ಯ