ಭಿವಂಡಿ: ಸುವರ್ಣಭೂಮಿ ಬುದ್ಧ ವಿಹಾರದ 5ನೇ ವಾರ್ಷಿಕೋತ್ಸವ ಕಾರ್ಯಕ್ರಮ
Team Udayavani, Mar 7, 2017, 4:32 PM IST
ಭಿವಂಡಿ: ಭಿವಂಡಿ ನಗರದ ಬಿಜೆಪಿ ಅಧ್ಯಕ್ಷ ಹಾಗೂ ಸ್ಥಳೀಯ ನಗರಸೇವಕರಾಗಿರುವ ಸಂತೋಷ್ ಎಂ. ಶೆಟ್ಟಿ ಮತ್ತು ನಗರಸೇವಕಿ ಶಶಿಲತಾ ಸಂತೋಷ್ ಶೆಟ್ಟಿ ಇವರ ನಿರಂತರ ಪ್ರಯತ್ನದಿಂದಾಗಿ ಇಲ್ಲಿನ ಪದ್ಮಾನಗರ ವಾಟರ್ ಸಪ್ಲೆ„ ಕಾಲನಿಯಲ್ಲಿ ನಿರ್ಮಿ ಸಲಾಗಿರುವ ಸುವರ್ಣ ಭೂಮಿ ಬುದ್ಧ ವಿಹಾರ ಇದರ5ನೇ ವಾರ್ಷಿಕೋತ್ಸವ ಕಾರ್ಯಕ್ರಮ ಇತ್ತೀಚೆಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಈ ನಿಮಿತ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋ ಜಿಸಿದ್ದು, ಸಂಸದ ಕಪಿಲ್ ಪಾಟೀಲ್ ಅವರು ಬುದ್ಧ ಮೂರ್ತಿಗೆ ಪೂಜೆಗೈಯುವುದರ ಮೂಲಕ ಇವುಗಳ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಸಂಸದ ಕಪಿಲ್ ಪಾಟೀಲ್ ಅವರು, ಭಗವಾನ ಬುದ್ಧ ಬೋಧಿಸಿರುವ ತತ್ವಗಳು ಮತ್ತು ಅವರ ಶಾಂತಿ ಸಂದೇಶವನ್ನು ಭಾರತೀಯರೆಲ್ಲರು ಅನುಸರಿಸಿದರೆ ದೇಶದಲ್ಲಿ ಶಾಂತಿ ನೆಲೆಸಿ ಎಲ್ಲರು ಸುಖ-ಸಂತೋಷದಿಂದಿರುತ್ತಾರೆ ಎಂದರು.
ಇತ್ತೀಚೆಗೆ ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜಯಂತೋತ್ಸವ ನಿಮಿತ್ತ ನಗರಸೇವಕ ಸಂತೋಷ್ ಎಂ. ಶೆಟ್ಟಿ ಅವರು ಭಿವಂಡಿಯಲ್ಲಿ ಆಯೋಜಿಸಿದ್ದ 125 ತಾಸು ನಿರಂತರ ಅಂಬೇಡ್ಕರ್ ಸಾಹಿತ್ಯದ ಪಠಣ ಕಾರ್ಯಕ್ರಮ ಕುರಿತು ಸಂಸದ ಕಪಿಲ್ ಪಾಟೀಲ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ಉಲ್ಲಾಸನಗರ ತಕ್ಷಶಿಲ ಬುದ್ಧ ವಿಹಾರದ ಮಹಾಸಂಘ ನಾಯಕ ಭಂತೆ ಡಾ| ಎನ್. ಆನಂದ್ ಮಹಾಥೆರೊ ಇವರಿಂದ ಪ್ರವಚನ ಕಾರ್ಯಕ್ರಮ ನಡೆಯಿತು.
ಡ್ರೋನ್ ಫೌಂಡೇಶನ್ ಅವರ ವತಿಯಿಂದ ಆಯೋಜಿಸಲಾಗಿದ್ದ ವೈದ್ಯಕೀಯ ಶಿಬಿರ ಕಾರ್ಯಕ್ರವನ್ನು ನಗರಸೇವಕ ಸಂತೋಷ್ ಎಂ. ಶೆಟ್ಟಿ ಅವರು ಉದ್ಘಾಟಿಸಿದರು.
ಆರ್ಪಿಐ ನಗರಾಧ್ಯಕ್ಷ ಮಹೇಂದ್ರ ಗಾಯ್ಕವಾಡ್, ನಗರಸೇವಕ ಸುಮಿತ್ ಪಾಟೀಲ್, ನಗರಸೇವಕಿ ಶಶಿಲತಾ ಶೆಟ್ಟಿ, ಮಾಜಿ ನಗರಸೇವಕ ಕೆಕೆ ಕಲ್ಯಾಡಪ್, ರಾಮು ವಡಲಾಕೋಂಡಾ, ಅಂಬಾದಾಸ್ ಗಾಯ್ಕವಾಡ್, ರತನ್ ವಾವØಳ್, ಪ್ರಭಾಕರ್ ಜಾಧವ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ
Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು
Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ
Desi Swara: ಮಸ್ಕತ್- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ
Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.