158ನೇ ರಾಯನ್ ಮಿನಿಥಾನ್ ಸ್ಪರ್ಧೆಗೆ ಚಾಲನೆ
Team Udayavani, Oct 23, 2018, 3:17 PM IST
ಮುಂಬಯಿ:ರಾಯನ್ ಇಂಟರ್ನ್ಯಾಷನಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ನ ವಾರ್ಷಿಕ 158ನೇರಾಯನ್ ಮಿನಿಥಾನ್ ಅ. 21 ರಂದು ನಡೆಯಿತು. ಸಂಸ್ಥೆಯ ಬೊರಿವಲಿ ಪಶ್ಚಿಮದಲ್ಲಿನ ಸೈಂಟ್ ಲಾರೆನ್ಸ್ ಶಾಲಾ ಸಭಾಂಗಣದಲ್ಲಿ ಬೆಳಗ್ಗೆ ರಾಯನ್ ಇಂಟರ್ನ್ಯಾಷನಲ್ ಸಮೂಹ ಸಂಸ್ಥೆಯ ಸಿಇಒ ರಾಯನ್ ಎ. ಪಿಂಟೋ ಮತ್ತು ಗಣ್ಯರು ಹಸಿರು ನಿಶಾನೆ ತೋರಿಸಿ “ರಾಯನ್ ಮಿನಿಥಾನ್-2018ಕ್ಕೆ ಚಾಲನೆ ನೀಡಿ ಶುಭಹಾರೈಸಿದರು.
ಮೂರು ವಿಭಾಗಗಳಲ್ಲಿ ನಡೆದ ಮಿನಿಥಾನ್ ಸ್ಪರ್ಧೆಯಲ್ಲಿ ರಾಷ್ಟ್ರ ದಾದ್ಯಂತದ ಸುಮಾರು 41 ಶಾಲೆಗಳ ಸುಮಾರು 11,706 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೊರಿವಲಿ ಪ್ರದೇಶದ ಸುಮಾರು 4 ಕಿ.ಮೀ ಮಾರ್ಗದಲ್ಲಿ ಸ್ಥಾನೀಯ ಕ್ರೀಡಾ ಭಿಮಾನಿಗಳ ಪ್ರೋತ್ಸಾಹದ ನಡುವೆ ಪಾಲಕರು ಮತ್ತು ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು ಮಿನಿಥಾನ್ಗೆ ಮೆರುಗು ನೀಡಿದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಅಗ ಸ್ಟಿನ್ ಎಫ್. ಪಿಂಟೋ ಅವರ ಸಮರ್ಥ ನಾಯಕತ್ವದಲ್ಲಿ 1998ರಲ್ಲಿಆರಂಭಗೊಂಡು ರಾಷ್ಟ್ರದ ವಿವಿಧ ಮಹಾನಗರಗಳಲ್ಲಿ ವಾರ್ಷಿಕವಾಗಿ ಮಿನಿಥಾನ್ ಓಟ ಆಯೋಜಿಸಲಾಗುತ್ತದೆ. ರಾಷ್ಟ್ರೀಯ ಹಾಗೂ ಅಂತಾ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಿಗಾಗಿ ಯುವ ವಿದ್ಯಾರ್ಥಿಗಳನ್ನು ಸನ್ನದ್ಧ ಗೊಳಿಸುವುದಕ್ಕಾಗಿ ಮತ್ತು ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಅಭಿವೃದ್ಧಿಗೊಳಿಸಲು ಇಂತಹ ಓಟವನ್ನು ನಡೆಸಲಾಗುತ್ತದೆ. ಆ ಮೂಲಕ ರಾಷ್ಟ್ರದ ಭವಿಷ್ಯತ್ತಿನ ಭವ್ಯ ಪ್ರಜೆಗಳಾದ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳಿಗೆ ಅವಕಾಶ, ಪ್ರತಿಭಾನ್ವೇ ಷಣೆ ನಡೆಸಲು ಇಂತಹ ಮಿನಿಥಾನ್ಗಳು ಪೂರಕವಾಗಿವೆ. ವಾರ್ಷಿಕವಾಗಿ ಆಯೋಜಿಸುವ ವಿವಿಧೆಡೆಯ ಮಿನಿಥಾನ್ನಲ್ಲಿ ಸುಮಾರು 1,00,000 ವಿದ್ಯಾರ್ಥಿಗಳು ಭಾಗ ವಹಿಸುತ್ತಿದ್ದಾರೆ ಎಂದು ನುಡಿದು, ಸ್ಪರ್ಧೆಯಲ್ಲಿ ವಿಜೇತ ಎಲ್ಲಾ ವಿದ್ಯಾರ್ಥಿಗಳಿಗೆ ಸಮೂಹ ಸಂಸ್ಥೆಯ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಶುಭಹಾರೈಸಿದರು.
ವಿಜೇತ ಸ್ಪರ್ಧಿಗಳಿಗೆ ಪ್ರಶಸ್ತಿ, ನಗದು, ಸ್ಮರಣಿಕೆ, ಪ್ರಮಾಣ ಪತ್ರವನ್ನಿತ್ತು ಅತಿಥಿ-ಗಣ್ಯರು ಮತ್ತು ಕ್ರೀಡಾ ಸಂಘಟಕರು ಗೌರವಿಸಿದರು. ಸ್ಪರ್ಧೆಯಲ್ಲಿ ಅಂಡರ್-12, ಅಂಡರ್-14 ಅಂಡರ್-16 ಬಾಲಕ ಮತ್ತು ಬಾಲಕಿಯರ ಸ್ಪರ್ಧೆಯಲ್ಲಿ ಸೈಂಟ್ ಅಲೋಶಿಯಸ್ ಹೈಸ್ಕೂಲ್ ನಲಸೋಪರ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಸೈಂಟ್ ಕ್ಸೇವಿಯರ್ ಅಂಧೇರಿ ಪ್ರಥಮ ಸ್ಥಾನ ಗಳಿಸಿದರೆ, ಸೈಂಟ್ ಕ್ಸೇವಿಯರ್ ಹೈಸ್ಕೂಲ್ ಗೋರೆಗಾಂವ್ ಹಾಗೂ ಸೈಂಟ್ ಜೋಸೆಫ್ ಹೈಸ್ಕೂಲ್ ಪನ್ವೇಲ್ ದ್ವಿತೀಯ ಸ್ಥಾನ ಗಳಿಸಿತು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ