ಬೆಳಕಿನ ಹಬ್ಬವು ಜ್ಞಾನದ ಸಂಕೇತ: ಈಶಪ್ರಿಯತೀರ್ಥ ಶ್ರೀ


Team Udayavani, Oct 28, 2019, 4:00 PM IST

mumbai-tdy-1

ಮುಂಬಯಿ, ಅ. 27: ದೀಪಾವಳಿ ಅನ್ನುವುದು ದೀಪಗಳ ಸಮೂಹ. ಸಾಲು ಸಾಲು ದೀಪಗಳ ಸರದಿಗಳಾಗಿಸಿ ದೀಪಗಳ ಮೂಲಕ ದೇವರನ್ನು ಕಾಣುವ ಹಬ್ಬವಾಗಿದೆ.

ಇಂತಹ ಬೆಳಗುವ ಹಬ್ಬವನ್ನು ನಾವು ದಿನನಿತ್ಯ ಆಚರಿಸುವ ಅಗತ್ಯವಿದೆ. ಪೂರ್ವಜರು ದೀಪವನ್ನು ಜ್ಞಾನಕ್ಕೆ ಹೋಲಿಸಿದ್ದಾರೆ. ಏಕೆಂದರೆ ಬೆಳಕು ಕಷ್ಟಮುಕ್ತಗೊಳಿಸಿ ದಾರಿ ತೋರಿಸುವ ಸಾಧನವಾಗಿದ್ದು, ಹೇಗೆ ದೀಪದ ಬೆಳಕಿಲ್ಲದೆ ಪ್ರಾಣಿ ಸಂಕುಲಕ್ಕೆ ಏನೂ ಕಾಣದೋ ಅಂತೆಯೇ ಬದುಕು ಕೂಡಾ ದೀಪವಿನಃ ಕತ್ತಲಾಗಿರುತ್ತದೆ ಎಂದು ಉಡುಪಿ ಶ್ರೀ ಅದಮಾರು ಮಠದ ಕಿರಿಯ ಪಟ್ಟಾಧೀಶರಾದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಉಡುಪಿ ಶ್ರೀ ಕೃಷ್ಣ ಮಠದ 32ನೇ ಆವೃತ್ತಿಯ ಉಡುಪಿ ಪರ್ಯಾಯ ಪಟ್ಟಾಧೀಶ ದೀಕ್ಷೆ ಸ್ವೀಕಾರ ಪೂರ್ವ ಪರ್ಯಾಯ ಸಂಚಾರ ನಿಮಿತ್ತ ಅಂಧೇರಿ ಪಶ್ಚಿಮದ ಎಸ್‌. ವಿ. ರೋಡ್‌ನ‌ ಇರ್ಲಾದ ಅದಮಾರು ಮಠದಲ್ಲಿ ವಾಸ್ತವ್ಯವಿರುವ ಶ್ರೀಗಳು ಅ. 27ರಂದು ಮಠದಲ್ಲಿನ ಶ್ರೀದೇವರಿಗೆ ಮತ್ತು ಭೂದೇವಿಗೆ ಎಣ್ಣೆ ಶಾಸ್ತ್ರದೂಂದಿಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಕೃತಿ ಸೃಷ್ಟಿಯ ಹಿನ್ನಲೆಯಲ್ಲಿ ದೀಪವು ಜ್ಞಾನದ ಸಂಕೇತವಾಗಿದ್ದು ಅಜ್ಞಾನ ದೂರಗೊಳಿಸುವ ಶಕ್ತಿಯಾಗಿದೆ. ಈ ಹಬ್ಬವು ಜ್ಞಾನದ ಬೆಳಕಲ್ಲಿ ಬೆಳಕಿನ ಅನುಸಂಧಾನ ಮಾಡುವ ಸಂಭ್ರಮವಾಗಬೇಕು. ಹೊರಗಿಡುವದೀಪಗಳು ಬರೇ ಬಾಹ್ಯ ಆಚರಣೆಗಳಾಗಿದ್ದು, ಮನುಷ್ಯನ ಅಂತರಾತ್ಮದ ಆಚರಣೆಯು ಸಾತ್ಕರದ ದೀಪಾವಳಿಯಾಗಬೇಕು. ಅಂದರೆ ದೇವರನ್ನು ತಿಳಿದು ಬಾಳುವ ಬುದುಕೇ ದೀಪಾವಳಿ ಆಗಬೇಕು. ಹಿಂದೂ ಧರ್ಮದ ಜಾಗತಿಕ ಸಂದೇಶ ಸಂಭ್ರಮವೇ ದೀಪಾವಳಿ.

ದೀಪಾವಳಿಯು ಕೇವಲ ಬೆಳಕಿನ ಹಬ್ಬವಲ್ಲದೆ, ಪರಸ್ಪರ ಒಬ್ಬರಿಗೊಬ್ಬರು ಪ್ರೀತಿ, ವಾತ್ಸಲ್ಯ, ಗೌರವದೊಂದಿಗೆ ಬದುಕುವಂತಾಗಬೇಕು. ಸಾಂಪ್ರದಾಯಿಕ ಆಚರಣೆಗಳಿಂದ ನಮ್ಮ ನಾಡಿನ ಆಚಾರ, ವಿಚಾರಗಳು ಉಳಿಯಲು ಸಾಧ್ಯವಿದೆ. ಮುಖ್ಯವಾಗಿ ದೀಪಾವಳಿಯ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ತಿಳಿಯಪಡಿಸುವ ಜವಾಬ್ದಾರಿ ಹಿರಿಯರ ಮೇಲಿದೆ. ಅಜ್ಞಾನದ ತಿಮಿರನ್ನು ಕಳಚಿ, ಸುಜ್ಞಾನದ ಬೆಳಕನ್ನು ಹರಿಸುವಮೂಲಕ ಬಾಳನ್ನು ಬೆಳಗಿಸೋಣ. ಪರಸ್ಪರ ಸೋದರತ್ವದ ಮೂಲಕ ಬದುಕ ಸಾಗಿಸೋಣ ಎಂದು ನುಡಿದ ಶ್ರೀಗಳು, ರುಕ್ಮಿಣಿ ಸತ್ಯಭಾಮಸಹಿತ ಹಳೆ ಸಂಪ್ರದಾಯಿಕ ಅರ್ಚನೆಗೈದು ತೈಲದೀಪದ ನಡುವೆ ಶ್ರೀ ಕೃಷ್ಣ ದೇವರಿಗೆ ಪೂಜೆ ನೆರವೇರಿಸಿ ಶುಭಹಾರೈಸಿದರು.

ಧಾರ್ಮಿಕ ಕಾರ್ಯಕ್ರಮವಾಗಿ ಶ್ರೀಗಳಿಂದ ಅಲಂಕಾರ ಪೂಜೆ, ಸಹಸ್ರನಾಮಾರ್ಚನೆ, ತೀರ್ಥಪೂಜೆ, ಧೂಪಪೂಜೆ ಮತ್ತು ಮಹಾಪೂಜೆ ನಡೆಯಿತು. ಆನಂತರ ಆರತಿಗೈದು ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಿಸಿ ನೆರೆದ ನೆರೆದ ಸದ್ಭಕ್ತರಿಗೆ, ಮಂತ್ರಾಕ್ಷತೆ ನೀಡಿ ಅನುಗ್ರಹಿಸಿ ದೀಪಾವಳಿ ಸಂದೇಶವನ್ನಿತ್ತರು. ಕಾರ್ಯಕ್ರಮದಲ್ಲಿ ಪುರೋಹಿತರಾದ ವಾಸುದೇವ ಉಡುಪ, ಜನಾರ್ಧನ ಅಡಿಗ, ರಾಮ ವಿಠಲ ಕಲ್ಲೂರಾಯ, ಸರ್ವಜ್ಞ ಉಡುಪ, ಶಂಕರ ಕಲ್ಯಾಣಿತ್ತಾಯ, ರಾಘವೇಂದ್ರ ಉಡುಪ, ಅದಮಾರು ಮಠದ ಮುಂಬಯಿ ಶಾಖೆಯ ದಿವಾನ ಲಕ್ಷ್ಮಿನಾರಾಯಣ ಮುಚ್ಚಿಂತ್ತಾಯ, ವಾಣಿ ಆರ್‌.ಭಟ್‌, ಮಠದ ಮುಂಬಯಿ ಶಾಖಾ ವ್ಯವಸ್ಥಾಪಕ ಪಡುಬಿದ್ರಿ ವಿ. ರಾಜೇಶ್‌ ರಾವ್‌ ಉಪಸ್ಥಿತರಿದ್ದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳಿಂದ ಆಶೀರ್ವಾದ ಪಡೆದರು.

 

 ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.