ಕಲ್ಯಾಣ್-ಡೊಂಬಿವಲಿ: ಶೇ. 20 ಫಲಾನುಭವಿಗಳಿಗೆ ಮಾತ್ರ ಲಸಿಕೆ
Team Udayavani, Apr 22, 2021, 11:28 AM IST
ಥಾಣೆ: ಲಸಿಕೆ ಅಭಿಯಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದರೂ ಕಲ್ಯಾಣ್-ಡೊಂಬಿವಲಿ, ಭಿವಂಡಿ ಮತ್ತು ಉಲ್ಲಾಸ್ ನಗರದಲ್ಲಿ ಅಭಿ ಯಾನ ವೇಗ ಪಡೆದುಕೊಂಡಿಲ್ಲ. ಜಿಲ್ಲೆಯ ಶೇ. 28ರಷ್ಟು ಅರ್ಹ ನಾಗರಿಕರಿಗೆ ಲಸಿಕೆ ನೀಡಲಾಗಿದ್ದರೆ, ಈ ಮೂರು ನಗರಗಳಲ್ಲೂ ಶೇ. 20ಕ್ಕಿಂತ ಕಡಿಮೆ ನಾಗರಿಕರಿಗೆ ಲಸಿಕೆ ನೀಡಲಾಗಿದೆ. ಇನ್ನೊಂದೆಡೆ ಲಸಿಕೆ ಶೇಕಡಾವಾರು ಪ್ರಮಾಣದಲ್ಲಿ ಥಾಣೆ, ನವಿಮುಂಬಯಿ ಮತ್ತು ಮೀರಾ-ಭಾಯಂದರ್ ಉಪನಗರ ಗಳು ಮುಂದಿವೆ. ಥಾಣೆ ಜಿಲ್ಲೆಯಲ್ಲಿ ಪ್ರತೀದಿನ ಸರಾಸರಿ ಐದು ಸಾವಿರ ರೋಗಿಗಳು ಕಂಡುಬರು ತ್ತಿದ್ದು, 35ರಿಂದ 40 ಮಂದಿ ಸಾವನ್ನಪ್ಪುತ್ತಿದ್ದಾರೆ.
ಸೋಮವಾರದವರೆಗೆ ಜಿಲ್ಲೆಯಲ್ಲಿ 8,96,860 ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 6,63,742 ಮಂದಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಗರಿಕರು ಸೇರಿದ್ದಾರೆ. ಅದರಲ್ಲಿ 6,16,895 ಮಂದಿಗೆ ಮೊದಲ ಡೋಸ್ ನೀಡಲಾಗಿದೆ. ಎರಡನೇ ಡೋಸ್ ಅನ್ನು 46,847 ಮಂದಿಗೆ ನೀಡಲಾಗಿದೆ. ಉಳಿದ 2,33,118 ಮಂದಿಯಲ್ಲಿ ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸ್ವತ್ಛತಾ ಸಿಬಂದಿ ಸೇರಿದ್ದಾರೆ.
ನವಿಮುಂಬಯಿಯ ಜನಸಂಖ್ಯೆ 15,2,120ರಷ್ಟಿದ್ದು, ಈ ಪ್ರದೇಶದ 4,50,636 ನಾಗರಿಕರು 45 ವರ್ಷ ವಯಸ್ಸಿನವರಾಗಿ¨ªಾರೆ. ಈ ಸ್ಥಳದಲ್ಲಿ ಶೇ. 42ರಷ್ಟು ಲಸಿಕೆ ಹಾಕಲಾಗಿದೆ. ಮೀರಾ- ಭಾಯಂದರ್ನಲ್ಲೂ 10,47,346 ಜನಸಂಖ್ಯೆ ಇದ್ದು, 3, 14,238 ಮಂದಿ 45 ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ. ಇಲ್ಲಿ ಶೇ. 40ರಷ್ಟು ನಾಗರಿಕರಿಗೆ ಲಸಿಕೆ ನೀಡಲಾಗಿದೆ. ಥಾಣೆ ಜನಸಂಖ್ಯೆ 22,06,060ರಷ್ಟಿದ್ದು, ಇಲ್ಲಿ ಶೇ. 34ರಷ್ಟು ನಾಗರಿಕರಿಗೆ ಲಸಿಕೆ ನೀಡಲಾಗಿದೆ.
ಕಲ್ಯಾಣ್- ಡೊಂಬಿವಲಿಯ ಜನಸಂಖ್ಯೆ 19,16,863ರಷ್ಟಿದ್ದು, 5,75,059 ಮಂದಿ 45 ವರ್ಷಕ್ಕಿಂತ ಮೇಲ್ಪಟ್ಟವರಾಗಿ¨ªಾರೆ. ಇಲ್ಲಿ ಶೇ. 20ರಷ್ಟು ಲಸಿಕೆ ಹಾಕಲಾಗಿದೆ. ಥಾಣೆ ಗ್ರಾಮೀಣ ಪ್ರದೇಶದಲ್ಲಿ 20,58,755ರಷ್ಟು ಜನಸಂಖ್ಯೆಯಿದ್ದು, 6,17, 627 ಮಂದಿ 45 ವರ್ಷಕ್ಕಿಂತ ಮೇಲ್ಪಟ್ಟವರಿ¨ªಾರೆ. ಇಲ್ಲಿ ಶೇ. 22 ರಷ್ಟು ಲಸಿಕೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್