AUS V/s PAK: ವಾರ್ನರ್‌ಗೆ ಗೆಲುವಿನ ವಿದಾಯ- ಪಾಕಿಸ್ಥಾನಕ್ಕೆ 3-0 ವೈಟ್‌ವಾಶ್‌


Team Udayavani, Jan 6, 2024, 11:14 PM IST

warne

ಸಿಡ್ನಿ: ಆಸ್ಟ್ರೇಲಿಯದ ಶ್ರೇಷ್ಠ ಕ್ರಿಕೆಟಿಗರ ಯಾದಿಯಲ್ಲಿ ಕಾಣಿಸಿ ಕೊಳ್ಳುವ ಎಡಗೈ ಆರಂಭಕಾರ ಡೇವಿಡ್‌ ವಾರ್ನರ್‌ ಅವರಿಗೆ ಗೆಲುವಿನ ವಿದಾಯ ಲಭಿಸಿದೆ. ಪಾಕಿ ಸ್ಥಾನ ವಿರುದ್ಧದ ತವರಿನಂಗಳದ ಸಿಡ್ನಿ ಟೆಸ್ಟ್‌ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಆಸೀಸ್‌ ತನ್ನ ಕ್ರಿಕೆಟ್‌ ಹೀರೋಗೆ ಸ್ಮರಣೀಯ ಉಡುಗೊರೆಯನ್ನು ನೀಡಿತು.

ಈ ಪಂದ್ಯದಲ್ಲಿ ಆಸ್ಟ್ರೇಲಿಯದ ಜಯಕ್ಕೆ 130 ರನ್ನುಗಳ ಸುಲಭ ಗುರಿ ಲಭಿಸಿತ್ತು. 2 ವಿಕೆಟ್‌ ನಷ್ಟದಲ್ಲಿ ಕಮಿನ್ಸ್‌ ಪಡೆ ಗುರಿ ಮುಟ್ಟಿತು. ಇದರಲ್ಲಿ ವಾರ್ನರ್‌ ಕೊಡುಗೆ 57 ರನ್‌. ಜಯಕ್ಕೆ ಇನ್ನೇನು 11 ರನ್‌ ಬೇಕಿದೆ ಎನ್ನುವಾಗ ವಾರ್ನರ್‌ ವಿಕೆಟ್‌ ಉರುಳಿತು. ಇಲ್ಲವಾದರೆ ವಿದಾಯ ಪಂದ್ಯದಲ್ಲೂ ಗೆಲುವಿನ ರನ್‌ ಬಾರಿಸುವ ಅಪೂರ್ವ ಅವಕಾಶ ವೊಂದು ವಾರ್ನರ್‌ಗೆ ಲಭಿಸುವ ಸಾಧ್ಯತೆ ಇತ್ತು. ವಾರ್ನರ್‌ ತಮ್ಮ ಪದಾರ್ಪಣ ಟೆಸ್ಟ್‌ನಲ್ಲೂ ಗೆಲುವಿನ ರನ್‌ ಹೊಡೆದಿದ್ದರು.

ಚೇಸಿಂಗ್‌ ವೇಳೆ ಆಸೀಸ್‌ ಉಸ್ಮಾನ್‌ ಖ್ವಾಜಾ ಅವರನ್ನು ಶೂನ್ಯಕ್ಕೆ ಕಳೆದು ಕೊಂಡಿತು. ವಾರ್ನರ್‌-ಲಬುಶೇನ್‌ ಸೇರಿಕೊಂಡು 119 ರನ್‌ ಜತೆಯಾಟ ನಿಭಾಯಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ವಾರ್ನರ್‌ ಅವರ 57 ರನ್‌ 75 ಎಸೆತಗಳಿಂದ ಬಂತು. ಇದರಲ್ಲಿ 7 ಬೌಂಡರಿ ಸೇರಿ ದ್ದವು. ಲಬುಶೇನ್‌ ಔಟಾಗದೆ 62 ರನ್‌ ಹೊಡೆದರು (73 ಎಸೆತ, 9 ಬೌಂಡರಿ). ಉರುಳಿದ ಎರಡೂ ವಿಕೆಟ್‌ ಸಾಜಿದ್‌ ಖಾನ್‌ ಪಾಲಾಯಿತು. ಖ್ವಾಜಾ, ವಾರ್ನರ್‌ ಇಬ್ಬರೂ ಲೆಗ್‌ ಬಿಫೋರ್‌ ರೂಪದಲ್ಲಿ ಔಟಾದರು. 7 ವಿಕೆಟಿಗೆ 68 ರನ್‌ ಗಳಿಸಿ ಪರ ದಾಡುತ್ತಿದ್ದ ಪಾಕಿ ಸ್ಥಾನ, ಶನಿವಾರದ ಆಟ ಮುಂದು ವರಿಸಿ 115ಕ್ಕೆ ಆಲೌಟ್‌ ಆಯಿತು.

ಆಸ್ಟ್ರೇಲಿಯ ಪರ್ತ್‌ ಟೆಸ್ಟ್‌ ಪಂದ್ಯವನ್ನು 360 ರನ್ನುಗಳಿಂದ, ಮೆಲ್ಬರ್ನ್ ಮುಖಾಮುಖೀಯನ್ನು 79 ರನ್ನುಗಳಿಂದ ಜಯಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-313 ಮತ್ತು 115 (ಆಯೂಬ್‌ 33, ರಿಜ್ವಾನ್‌ 28, ಬಾಬರ್‌ 23, ಹೇಝ ಲ್‌ವುಡ್‌ 16ಕ್ಕೆ 4, ಲಿಯಾನ್‌ 36ಕ್ಕೆ 3). ಆಸ್ಟ್ರೇಲಿಯ-299 ಮತ್ತು 2 ವಿಕೆಟಿಗೆ 130 (ಲಬುಶೇನ್‌ ಔಟಾಗದೆ 62, ವಾರ್ನರ್‌ 57, ಸಾಜಿದ್‌ ಖಾನ್‌ 49ಕ್ಕೆ 2).

ಪಂದ್ಯಶ್ರೇಷ್ಠ: ಆಮೀರ್‌ ಜಮಾಲ್‌. ಸರಣಿಶ್ರೇಷ್ಠ: ಪ್ಯಾಟ್‌ ಕಮಿನ್ಸ್‌.

 

ಟಾಪ್ ನ್ಯೂಸ್

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.