ವೆಸ್ಟ್‌ ಇಂಡೀಸ್‌ ವಿರುದ್ಧ ಆಸ್ಟ್ರೇಲಿಯ ವಿಜಯ

ವಾರ್ನರ್‌, ಮಿಚೆಲ್‌ ಮಾರ್ಷ್‌ ಬ್ಯಾಟಿಂಗ್‌ ಆರ್ಭಟಕ್ಕೆ ಸುಸ್ತಾದ ಕೆರಿಬಿಯನ್ನರು

Team Udayavani, Nov 6, 2021, 10:08 PM IST

ವೆಸ್ಟ್‌ ಇಂಡೀಸ್‌ ವಿರುದ್ಧ ಆಸ್ಟ್ರೇಲಿಯ ವಿಜಯ

ಅಬುಧಾಬಿ: ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಮತ್ತೊಂದು ಹೀನಾಯ ಸೋಲಿನೊಂದಿಗೆ ಟಿ20 ವಿಶ್ವಕಪ್‌ ಪಂದ್ಯಾವಳಿ ಅಭಿಯಾನವನ್ನು ಪೂರ್ತಿಗಳಿಸಿತು. ಶನಿವಾರದ ತನ್ನ ಅಂತಿಮ ಸೂಪರ್‌-12 ಪಂದ್ಯದಲ್ಲಿ ಅದು ಆಸ್ಟ್ರೇಲಿಯ ಕೈಯಲ್ಲಿ 8 ವಿಕೆಟ್‌ಗಳಿಂದ ಪರಾಭವಗೊಂಡಿತು. ಇದರಿಂದ ಕಾಂಗರೂ ಪಡೆ ತನ್ನ ಅಂಕವನ್ನು 8ಕ್ಕೆ, ರನ್‌ರೇಟನ್ನು +1.216ಕ್ಕೆ ಏರಿಸಿಕೊಂಡಿತು.

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್‌ ಇಂಡೀಸ್‌ 20 ಓವರ್‌ಗಳಲ್ಲಿ 7 ವಿಕೆಟಿಗೆ 157 ರನ್‌ ಗಳಿಸಿದರೆ, ಡೇವಿಡ್‌ ವಾರ್ನರ್‌-ಮಿಚೆಲ್‌ ಮಾರ್ಷ್‌ ಜೋಡಿಯ ಶತಕದ ಜತೆಯಾಟದಿಂದ ಆಸ್ಟ್ರೇಲಿಯ ಬಹಳ ಸುಲಭದಲ್ಲಿ ಗುರಿ ಬೆನ್ನಟ್ಟಿತು. 16.2 ಓವರ್‌ಗಳಲ್ಲಿ 2 ವಿಕೆಟಿಗೆ 161 ರನ್‌ ರಾಶಿ ಹಾಕಿತು.

ವಾರ್ನರ್‌ 20ನೇ ಅರ್ಧಶತಕ: ಎಡಗೈ ಓಪನರ್‌ ಡೇವಿಡ್‌ ವಾರ್ನರ್‌ ಅವರ 20ನೇ ಅರ್ಧಶತಕ ಆಸೀಸ್‌ ಸರದಿಯ ಆಕರ್ಷಣೆ ಆಗಿತ್ತು. ತೀವ್ರ ಬ್ಯಾಟಿಂಗ್‌ ಬರಗಾಲದಲ್ಲಿದ್ದ ವಾರ್ನರ್‌ ಅಜೇಯ 89 ರನ್‌ ಬಾರಿಸಿ ಮೆರೆದರು. 56 ಎಸೆತಗಳ ಈ ರಂಜನೀಯ ಇನಿಂಗ್ಸ್‌ನಲ್ಲಿ 9 ಫೋರ್‌, 4 ಸಿಕ್ಸರ್‌ ಒಳಗೊಂಡಿತ್ತು.

ಸ್ಕೋರ್‌ ಸಮನಾದಾಗ ಮಿಚೆಲ್‌ ಮಾರ್ಷ್‌ ಅವರನ್ನು ಕ್ರಿಸ್‌ ಗೇಲ್‌ ಬಲೆಗೆ ಬೀಳಿಸಿದರು. ಇದು ಗೇಲ್‌ ಅವರ ಕೊನೆಯ ವಿಕೆಟ್‌ ಆಗಿ ದಾಖಲಾಯಿತು. ಮಾರ್ಷ್‌ ಗಳಿಕೆ 32 ಎಸೆತಗಳಿಂದ 53 ರನ್‌. 5 ಬೌಂಡರಿ, 2 ಸಿಕ್ಸರ್‌ ಇದರಲ್ಲಿ ಒಳಗೊಂಡಿತ್ತು. ವಾರ್ನರ್‌-ಮಾರ್ಷ್‌ ದ್ವಿತೀಯ ವಿಕೆಟಿಗೆ 75 ಎಸೆತಗಳಿಂದ 124 ರನ್‌ ಪೇರಿಸಿದರು.

ಇದನ್ನೂ ಓದಿ:ಬಾಂಬ್ ಸ್ಫೋಟ ನಡೆಯಲಿದೆ…ಟಿವಿ ಚಾನೆಲ್ ಗೆ ಇ-ಮೇಲ್ ಕಳುಹಿಸಿದ್ದ ವ್ಯಕ್ತಿಯ ಬಂಧನ

ಆಧರಿಸಿ ನಿಂತ ಪೊಲಾರ್ಡ್‌: ನಾಯಕ ಕೈರನ್‌ ಪೊಲಾರ್ಡ್‌ ಕೊನೆಯ ಹಂತದಲ್ಲಿ ಬಿರುಸಿನ ಆಟವಾಡಿದ್ದರಿಂದ ವೆಸ್ಟ್‌ ಇಂಡೀಸ್‌ ನೂರೈವತ್ತರ ಗಡಿ ದಾಟಿತು. ಪೊಲಾರ್ಡ್‌ 31 ಎಸೆತಗಳಿಂದ 44 ರನ್‌ ಬಾರಿಸಿದರು (4 ಬೌಂಡರಿ, 1 ಸಿಕ್ಸರ್‌).

ಆರಂಭಕಾರ ಎವಿನ್‌ ಲೆವಿಸ್‌ (29) ಮತ್ತು ಕ್ರಿಸ್‌ ಗೇಲ್‌ (15) ಬಿರುಸಿನ ಆರಂಭ ಒದಗಿಸಿದರೂ 35 ರನ್‌ ಅಂತರದಲ್ಲಿ ಪೂರನ್‌ (4) ಸೇರಿದಂತೆ 3 ವಿಕೆಟ್‌ ಉರುಳಿದ್ದರಿಂದ ವಿಂಡೀಸ್‌ ಒತ್ತಡಕ್ಕೆ ಸಿಲುಕಿತು. ಅಂತಿಮ ಟಿ20 ಇನಿಂಗ್ಸ್‌ನಲ್ಲಿ ಗೇಲ್‌ ಹೊಡೆದದ್ದು 15 ರನ್‌. 9 ಎಸೆತ ಎದುರಿಸಿದ ಅವರು 2 ಸಿಕ್ಸರ್‌ ಎತ್ತಿ ರಂಜಿಸಿದರು. ಹೆಟ್‌ಮೈರ್‌ 27, ರಸೆಲ್‌ 7 ಎಸೆತಗಳಿಂದ ಅಜೇಯ 18 ರನ್‌ ಮಾಡಿದರು. ವಿದಾಯದ ಇನಿಂಗ್ಸ್‌ನಲ್ಲಿ ಡ್ವೇನ್‌ ಬ್ರಾವೊ 10 ರನ್‌ ಹೊಡೆದರು. ಆದರೆ ವಿಕೆಟ್‌ ಉರುಳಿಸುವಲ್ಲಿ ವಿಫ‌ಲರಾದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌ 20 ಓವರ್‌, 157/7 (ಪೊಲಾರ್ಡ್‌ 44, ಲೆವಿಸ್‌ 29, ಹೆಟ್‌ಮೈರ್‌ 27, ಹೇಝಲ್‌ವುಡ್‌ 39ಕ್ಕೆ 4). ಆಸ್ಟ್ರೇಲಿಯ 20 ಓವರ್‌, 16.2 ಓವರ್‌ಗಳಲ್ಲಿ 161/2 (ವಾರ್ನರ್‌ 89, ಮಾರ್ಷ್‌ 53, ಗೇಲ್‌ 7ಕ್ಕೆ 1).

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.