ಇಂದು ಬಿಸಿಸಿಐ “ಬದಲಾವಣೆ’ ಸಭೆ
Team Udayavani, Dec 1, 2019, 5:08 AM IST
ಮುಂಬಯಿ: ಸೌರವ್ ಗಂಗೂಲಿ ಅಧ್ಯಕ್ಷರಾದ ಅನಂತರ ಮೊದಲ ಬಿಸಿಸಿಐ ಸರ್ವಸದಸ್ಯರ ಸಭೆ ರವಿವಾರ ಮುಂಬಯಿಯಲ್ಲಿ ನಡೆಯಲಿದೆ.
ಈ ಸಭೆಯಲ್ಲಿ ಹಲವು ಮಹತ್ವದ ಸಂಗತಿಗಳ ಚರ್ಚೆಯಾಗಲಿದೆ. ಮುಖ್ಯವಾಗಿ ಬಿಸಿಸಿಐ ಅಳವಡಿಸಿಕೊಂಡಿರುವ ನೂತನ ಸಂವಿಧಾನದಲ್ಲಿ ಪ್ರಮುಖ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಕಡ್ಡಾಯ ವಿಶ್ರಾಂತಿ, ಸ್ವಹಿತಾಸಕ್ತಿ, ಐಸಿಸಿ ಪ್ರತಿನಿಧಿ ಆಯ್ಕೆ ನಿಯಮಗಳ ಮಾರ್ಪಾಡು, ಉನ್ನತ ಸಲಹಾ ಸಮಿತಿ ಆಯ್ಕೆ ಗಳೆಲ್ಲ ಈ ಸಭೆಯ ಮುಖ್ಯ ಕಾರ್ಯಕಲಾಪಗಳಲ್ಲಿ ಸೇರಿವೆ.
ಈ ಸಭೆಯಲ್ಲಿ 4ರಲ್ಲಿ 3ರಷ್ಟು ಬಹುಮತ ಬಂದರೆ ಹೊಸ ಬದಲಾವಣೆಗಳು ಸ್ವೀಕೃತಗೊಳ್ಳಲಿವೆ. ಅನಂತರ ಇದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕು.
ಸ್ವಾರಸ್ಯವೆಂದರೆ, ಸರ್ವೋಚ್ಚ ನ್ಯಾಯಾಲಯದ ಅಂತಿಮ ಒಪ್ಪಿಗೆ ಬೇಕು ಎಂಬ ನಿಯಮವನ್ನೂ ಬದಲಿಸಲು ಬಿಸಿಸಿಐ ತೀರ್ಮಾನಿಸಿದೆ. ಪ್ರತಿಯೊಂದಕ್ಕೂ ನ್ಯಾಯಾಲಯದ ಮೊರೆ ಹೋಗುವುದು ಸಾಧುವಲ್ಲ ಎನ್ನುವುದು ಹೊಸ ಆಡಳಿತ ಮಂಡಳಿಯ ವಾದ.
ಗಂಗೂಲಿ, ಜಯ್ ಶಾಗೆ ಲಾಭ
ನಿಯಮಗಳ ಬದಲಾವಣೆಯಿಂದ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ, ಜಯ್ ಶಾ ಕಾರ್ಯದರ್ಶಿಯಾಗಿ ಮುಂದುವರಿಯಲು ಅನುಕೂಲವಾಗಲಿದೆ. ಇಲ್ಲವಾದರೆ ಮುಂದಿನ 7-8 ತಿಂಗಳಲ್ಲಿ ಕಡ್ಡಾಯ ವಿಶ್ರಾಂತಿ ನಿಯಮದಡಿ ಅವರು ಅಧಿಕಾರ ತ್ಯಜಿಸುವುದು ಖಚಿತ. ಇವರು ಬಿಸಿಸಿಐ ಅಧಿಕಾರ ಸ್ವೀಕರಿಸುವಾಗ, ತಮ್ಮ ರಾಜ್ಯ ಸಂಸ್ಥೆಗಳಲ್ಲಿ 5 ವರ್ಷ, 3 ತಿಂಗಳು ಅಧಿಕಾರ ನಡೆಸಿದ್ದರು. ಆದ್ದರಿಂದ ಬಾಕಿ 9 ತಿಂಗಳು ಮಾತ್ರ ಅವರಿಗೆ ಬಿಸಿಸಿಐನಲ್ಲಿ ಅವಕಾಶ. ಅದರಲ್ಲಿ ಈಗಾಗಲೇ 2 ತಿಂಗಳು ಮುಗಿದು ಹೋಗಿದೆ.
ಕಡ್ಡಾಯ ವಿಶ್ರಾಂತಿ ನಿಯಮ ಬದಲು
ಇತ್ತೀಚೆಗಷ್ಟೇ ಅಳವಡಿಸಿಕೊಂಡಿರುವ ಬಿಸಿಸಿಐ ನೂತನ ಸಂವಿಧಾನದಲ್ಲಿ 3 ವರ್ಷಗಳ 2 ಅವಧಿ ಅಧಿಕಾರ ನಡೆಸಿದ್ದರೆ (ರಾಜ್ಯಸಂಸ್ಥೆ, ಬಿಸಿಸಿಐ ಸೇರಿ ಆಗಬಹುದು, ಯಾವುದೋ ಒಂದು ಸಂಸ್ಥೆಯಲ್ಲಾದರೂ ಆಗಬಹುದು), ಇನ್ನು 3 ವರ್ಷ ಪದಾಧಿಕಾರಿಯೊಬ್ಬರು ಕಡ್ಡಾಯ ವಿಶ್ರಾಂತಿ ಪಡೆಯುವುದು ಅನಿವಾರ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ