ಬಯೋ ಬಬಲ್ ನಿಂದ ನಮಗೆ ವಿಶ್ರಾಂತಿ ಬೇಕಾಗಿದೆ: ಸೋಲಿನ ಬಳಿಕ ಜಸ್ಪ್ರೀತ್ ಬುಮ್ರಾ
Team Udayavani, Nov 1, 2021, 4:40 PM IST
ದುಬೈ: ಕಪ್ ಗೆಲ್ಲುವ ಫೇವರೇಟ್ ಗಳಾಗಿ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಿದ್ದ ಟೀಂ ಇಂಡಿಯಾ ಸತತ ಎರಡು ಪಂದ್ಯಗಳಲ್ಲಿ ಹೀನಾಯ ಸೋಲನುಭವಿಸಿದೆ. ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ, ಎರಡನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಿರಾಟ್ ಪಡೆ ಸೋಲು ಕಂಡಿದೆ. ಹೀಗಾಗಿ ಸೆಮಿ ಫೈನಲ್ ರೇಸ್ ನಲ್ಲಿ ಭಾರತ ತಂಡ ಹಿಂದಿದೆ.
ಕಿವೀಸ್ ವಿರುದ್ಧದ ಎಂಟು ವಿಕೆಟ್ ಅಂತರದ ಸೋಲಿನ ಬಳಿಕ ಮಾತನಾಡಿದ ಬೌಲರ್ ಜಸ್ಪ್ರೀತ್ ಬುಮ್ರಾ, “ಬಯೋ ಬಬಲ್ ನ ಆಯಾಸ ಹೆಚ್ಚಾಗಿದೆ. ನಮಗೆ ವಿಶ್ರಾಂತಿಯ ಅಗತ್ಯವಿದೆ” ಎಂದಿದ್ದಾರೆ.
ಟಿ20 ವಿಶ್ವಕಪ್ಗೆ ಒಂದು ವಾರದ ಮೊದಲು ಮುಕ್ತಾಯಗೊಂಡ ಐಪಿಎಲ್ ನಂತರ ತಂಡವು ದಣಿದಿದೆಯೇ ಎಂದು ಸುದ್ದಿಗಾರರು ಕೇಳಿದಾಗ, “ಖಂಡಿತವಾಗಿಯೂ, ಕೆಲವೊಮ್ಮೆ ನಿಮಗೆ ವಿರಾಮ ಬೇಕು. ಆರು ತಿಂಗಳಿನಿಂದ ಓಡಾಟದಲ್ಲಿದ್ದೀವೆ, ನಿಮ್ಮ ಕುಟುಂಬವನ್ನು ಮಿಸ್ ಮಾಡುತ್ತೀರಿ” ಎಂದು ಬುಮ್ರಾ ಹೇಳಿದರು.
ಇದನ್ನೂ ಓದಿ:ಭಾರತ ತಂಡದ ಸೆಮಿ ಪ್ರವೇಶ ಪವಾಡವಲ್ಲದೆ ಬೇರೇನೂ ಅಲ್ಲ:ಟ್ರೋಲ್ ಮಾಡಿದ ಅಫ್ರಿದಿ
“ಹಾಗಾಗಿ ಅದೆಲ್ಲವೂ ಕೆಲವೊಮ್ಮೆ ನಿಮ್ಮ ಮನಸ್ಸಿನ ಆಡುತ್ತದೆ. ಆದರೆ ಮೈದಾನದಲ್ಲಿ ಇರುವಾಗ ಈ ಎಲ್ಲ ವಿಷಯಗಳ ಬಗ್ಗೆ ಯೋಚಿಸುವುದಿಲ್ಲ. ನಿಸ್ಸಂಶಯವಾಗಿ ಬಬಲ್ ನಲ್ಲಿ ಉಳಿಯುವುದು ಮತ್ತು ನಿಮ್ಮ ಕುಟುಂಬದಿಂದ ದೂರವಿರುವ ಸಮಯವು ಇಲ್ಲಿ ಪ್ರಭಾವ ಬೀರುತ್ತದೆ” ಎಂದು ಹೇಳಿದರು.
“ಬಿಸಿಸಿಐ ಕೂಡ ನಮಗೆ ಬಬಲ್ ನಿಂದ ಕಷ್ಟವಾಗದಿರಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದೆ. ಇದು ಕಷ್ಟದ ಸಮಯ. ಸಾಂಕ್ರಾಮಿಕ ರೋಗ ನಡೆಯುತ್ತಿದೆ, ಆದ್ದರಿಂದ ನಾವು ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಕೆಲವೊಮ್ಮೆ ಬಬಲ್ ಆಯಾಸವು ಮಾನಸಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ” ಎಂದು ಬುಮ್ರಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…