ಕೆನಡಾದಲ್ಲೂ ಐಪಿಎಲ್ ಮಾದರಿ ಟಿ20 ಲೀಗ್
Team Udayavani, Feb 17, 2018, 6:15 AM IST
ಟೊರೆಂಟೊ: ಬಹು ಆಕರ್ಷಣೀಯ ಐಪಿಎಲ್ನಂತೆ ಕೆನಡಾದಲ್ಲೂ ಟಿ20 ಲೀಗ್ ಒಂದನ್ನು ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಕೆನಡಾದ ಟೊರೆಂಟೊ ನಗರದಲ್ಲಿ ನೆಲೆಸಿರುವ ಭಾರತ ಮೂಲದ ಉದ್ಯಮಿ ರಾಯ್ ಸಿಂಗ್ ಇಂಥದ್ದೊಂದು ಮಹತ್ವದ ಕ್ರಿಕೆಟ್ ಟೂರ್ನಿ ಆರಂಭಿಸುವತ್ತ ಹೆಜ್ಜೆ ಇಟ್ಟಿದ್ದಾರೆ.
ಕ್ರಿಕೆಟ್ ಪಂದ್ಯಾವಳಿ ಆರಂಭಿಸುವುದರ ಬಗ್ಗೆ ನಿಖರ ಯೋಜನೆ ಹಾಕಿಕೊಂಡಿರುವ ರಾಯ್, ಮೂಲಭೂತ ಸೌಕರ್ಯ ಕೊರತೆ ನೀಗಿಸುವ ಸಲುವಾಗಿ ನಯಾಗಾರ ಫಾಲ್ಸ್ ಬಳಿ ಒಂದು ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಹೊಣೆ ಹೊತ್ತುಕೊಂಡಿದ್ದಾರೆ. ಜತೆಗೆ ಖ್ಯಾತ ರಾಷ್ಟ್ರೀಯ ಕ್ರಿಕೆಟ್ ಆಟಗಾರರ ಮೂಲಕ “ಕೆನಡಾ ಪ್ರೀಮಿಯರ್ ಲೀಗ್’ ಆರಂಭಿಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.
ಐಪಿಎಲ್ ಮಾದರಿಯ ಟಿ20ಟೂರ್ನಿ ಕೆನಡದಾದ್ಯಂತ ಕ್ರಿಕೆಟ್ನಲ್ಲಿ ಸಾಕಷ್ಟು ಬದಲಾವಣೆಯನ್ನು ತರಬಲ್ಲದು ಎಂದು ನಂಬಿರುವ ಕ್ರಿಕೆಟ್ ಪ್ರೇಮಿ ಉದ್ಯಮಿ ರಾಯ್, “ಇಂಡಿಯನ್ ಪ್ರೀಮಿಯರ್ ಲೀಗ್ ಅಮೋಘ ಯಶಸ್ಸು ಕಾಣುತ್ತಿದೆ. ಕೆನಡಾ ಮತ್ತು ಅಮೆರಿಕದಲ್ಲೂ ನಾವು ಇಂಥದ್ದೇ ಲೀಗ್ ಆರಂಭಿಸಲು ಸಾಧ್ಯವಿದೆ. ಆದರೆ ಸದ್ಯಕ್ಕಿರುವ ಕೊರತೆಯೆಂದರೆ ಮೂಲಭೂತ ಸೌಕರ್ಯ ಸಮಸ್ಯೆ’ ಎಂದಿದ್ದಾರೆ.
“ಈ ಕೊರತೆ ನೀಗಿಸುವ ನೆಲೆಯಲ್ಲಿ ನಾವು 153 ಎಕ್ರೆ ಜಮೀನನ್ನು ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಸಲುವಾಗಿ ಖರೀದಿಸಿದ್ದೇವೆ. ನಯಾಗರ ಜಲಪಾತಕ್ಕೆ ಎಂಟೇ ನಿಮಿಷ ದೂರದಲ್ಲಿ ದೊಡ್ಡ ಬಜೆಟ್ನ ಕ್ರೀಡಾಂಗಣವೊಂದು ನಿರ್ಮಾಣವಾಗುವುದರಲ್ಲಿದೆ’ ಎಂದು ಸಿಂಗ್ ತಿಳಿಸಿದ್ದಾರೆ.
ಉದ್ಯಮಕ್ಕೆ ವಿಪುಲ ಅವಕಾಶ
“ಪ್ರತಿ ಋತುವಿನಲ್ಲೂ 27 ಪಂದ್ಯಗಳ ಲೀಗ್ ನಡೆಯಲಿದೆ. 10 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಿ ಪಂದ್ಯ ನಡೆಸಲಾಗುತ್ತದೆ. ಒಬ್ಬ ಕ್ರಿಕೆಟ್ ಪ್ರೇಮಿಯಾಗಿ ನಾನು ಟಿ20 ಕ್ರಿಕೆಟ್ನಲ್ಲಿ ಉದ್ಯಮಕ್ಕೆ ವಿಪುಲ ಅವಕಾಶವಿರುವುದನ್ನು ಗಮನಿಸಿದ್ದೇನೆ. ಆದರೆ ಇದಕ್ಕೆ ಕೊಂಚ ವೆಚ್ಚ ತಗಲಬಹುದು. ಈ ಲೀಗ್ ಆರಂಭಿಸಿದರೆ ಕೇವಲ ಉತ್ತರ ಅಮೆರಿಕದಲ್ಲೇ ಸುಮಾರು 27 ಮಿಲಿಯನ್ ವೀಕ್ಷಕರು ಸಿಗಲಿದ್ದಾರೆ’ ಎಂದು ರಾಯ್ ವಿವರಿಸಿದ್ದಾರೆ.
ಕೆನಡಾ ಪ್ರೀಮಿಯರ್ ಲೀಗ್ ಪ್ರಚಾರಕ್ಕಾಗಿ ವೆಸ್ಟ್ ಇಂಡೀಸಿನ ಸ್ಟಾರ್ ಆಟಗಾರರಾದ ವಿವಿಯನ್ ರಿಚರ್ಡ್ಸ್, ರಿಚಿ ರಿಚರ್ಡ್ಸ್ನ್, ಡ್ವೇನ್ ಬ್ರಾವೊ ಮೊದಲಾದವರನ್ನು ಬಳಸಿಕೊಳ್ಳುವುದಾಗಿ ರಾಯ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ