ಕ್ಷೇತ್ರ ರಕ್ಷಣೆಗೆ ಅಡ್ಡಿ: ದಕ್ಷಿಣ ಆಫ್ರಿಕಾ ಬ್ಯಾಟ್ಸ್ಮನ್ ಜೀವೇಶನ್
Team Udayavani, Jan 18, 2018, 11:26 AM IST
ಮೌಂಟ್ ಮೌಂಗನುಯಿ: ಕ್ರಿಕೆಟ್ನಲ್ಲಿ ಆಗಾಗ ಕಳಪೆ ಅಭಿರುಚಿಯ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಈಗ ಅಂತಹ ಸುದ್ದಿ ಬಂದಿರುವುದು 19 ವಯೋಮಿತಿಯೊಳಗಿನ ವಿಶ್ವಕಪ್ ಕ್ರಿಕೆಟ್ನಲ್ಲಿ. ವೆಸ್ಟ್ ಇಂಡೀಸ್-ದ.ಆಫ್ರಿಕಾ ನಡುವಿನ ಪಂದ್ಯ ಬುಧವಾರ ಮುಗಿಯಿತು. ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ, ವಿಂಡೀಸನ್ನು 76 ರನ್ಗಳಿಂದ ಸೋಲಿಸಿತು. ಇದಕ್ಕಿಂತ ಹೆಚ್ಚು ಸುದ್ದಿಯಾಗಿದ್ದು ವಿಂಡೀಸ್ ಕ್ರಿಕೆಟಿಗರ ಕಳಪೆ ಅಭಿರುಚಿ.
ಅದು ಪಂದ್ಯದ 16.4ನೇ ಓವರ್. ಆಗ ಆಫ್ರಿಕಾದ ಜೀವೇಶನ್ ಪಿಳ್ಳೆ„ 47 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಎಸೆತವೊಂದಕ್ಕೆ
ಅವರು ಉತ್ತರಿಸಿದಾಗ ಅದು ಬ್ಯಾಟ್ನ ಒಳಭಾಗಕ್ಕೆ ಬಡಿದು ಸ್ವಲ್ಪ ಹೊರಕ್ಕೆ ಚಿಮ್ಮಿತು. ನಿಧಾನಕ್ಕೆ ವಿಕೆಟ್ ಗೆ ಬಡಿಯುವಂತೆ ಧಾವಿಸಿದರೂ ಚೆಂಡಿನ ಚಲನೆ ನಿಂತು ಹೋಗಿತ್ತು. ಆಗ ಕ್ರೀಸ್ನೊಳಕ್ಕೆ ಇದ್ದ ಜೀವೇಶನ್ ಚೆಂಡನ್ನು ತಮ್ಮ ಕೈನಿಂದ ವಿಂಡೀಸ್
ವಿಕೆಟ್ ಕೀಪರ್ ಎಮಾನ್ಯುಯೆಲ್ ಸ್ಟಿವರ್ಟ್ಗೆ ಎಸೆದರು. ನಿಯಮಗಳ ಪ್ರಕಾರ ಕ್ಷೇತ್ರರಕ್ಷಣೆಗೆ ಅಡ್ಡಿ ಮಾಡುವುದು ತಪ್ಪು, ಆಗ ಬ್ಯಾಟ್ಸ್ಮನ್ನನ್ನು ಔಟೆಂದು ಘೋಷಿಸಬಹುದು. ವಿಂಡೀಸ್ನ ನಾಯಕ ಸ್ಟಿವರ್ಟ್ ಮನವಿ ಮಾಡಿದಾಗ ಅದನ್ನು ಪುರಸ್ಕರಿಸಿದ ಅಂಪೈರ್ ಔಟೆಂದು ತೀರ್ಪಿತ್ತರು! ಇಲ್ಲಿ ನಿಜಕ್ಕೂ ಜೀವೇಶನ್ ಕ್ಷೇತ್ರರಕ್ಷಣೆಗೆ ಅಡ್ಡಿ ಪಡಿಸಿರಲಿಲ್ಲ. ಅವರು ಕೇವಲ ವಿಕೆಟ್ ಕೀಪರ್ಗೆ
ಸಹಾಯ ಮಾಡಿದ್ದರಷ್ಟೇ. ಈ ಹಂತದಲ್ಲಿ ಕ್ರೀಡಾಸ್ಫೂರ್ತಿಯನ್ನು ತೋರಿ ವಿಂಡೀಸಿಗರು ಜೀವೇಶನ್ರನ್ನು ವಾಪಸ್ ಕರೆಸಿಕೊಳ್ಳಬಹುದಿತ್ತು. ಆದರೆ ಅವರು ಅಂತಹ ಯತ್ನ ಮಾಡಲಿಲ್ಲ. ಇದು ಎಲ್ಲ ಕಡೆ ಟೀಕೆಗೆ ಕಾರಣವಾಗಿದೆ. ಪತ್ರಿಕಾಗೋಷ್ಠಿಯಲ್ಲಿ ತಮ್ಮ ತಪ್ಪನ್ನು ವಿಂಡೀಸ್ ನಾಯಕ ಒಪ್ಪಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ ರಕ್ಷಣೆ
Chhattisgarh; ನಿಲ್ಲದ ನಕ್ಸಲ್ ಬೇಟೆ: ಓರ್ವನ ಹತ್ಯೆ