ಅನುಭವದ ಕೊರತೆಯಿಂದ ಸೋಲು: ಗಾವಸ್ಕರ್
Team Udayavani, Jul 26, 2017, 7:40 AM IST
ಮುಂಬಯಿ: ವನಿತಾ ವಿಶ್ವಕಪ್ ಫೈನಲ್ನಲ್ಲಿ ಭಾರತದ ಸೋಲಿಗೆ ಅನುಭವದ ಕೊರತೆಯೇ ಮುಖ್ಯ ಕಾರಣ ಎಂಬುದಾಗಿ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಹೇಳಿದ್ದಾರೆ.
“ಭಾರತ ಈ ಪಂದ್ಯಾವಳಿ ಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿತು. ಆದರೆ ದೊಡ್ಡ ಪಂದ್ಯ ಗಳಲ್ಲಿ, ಅದರಲ್ಲೂ ವಿಶ್ವಕಪ್ ಫೈನಲ್ನಲ್ಲಿ ಆಡುವಾಗ ಅನುಭವ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದರ ಕೊರತೆ ವನಿತೆಯರನ್ನು ಕಾಡಿತು…’ ಎಂಬುದಾಗಿ ಗಾವಸ್ಕರ್ ಅಭಿಪ್ರಾಯಪಟ್ಟರು.
“ಇದೊಂದು ಕ್ಲೋಸ್ ಮ್ಯಾಚ್ ಆಗಿತ್ತು. ನಮ್ಮವರು ಗರಿಷ್ಠ ಪ್ರಯತ್ನ ವನ್ನೇ ಮಾಡಿದ್ದರು. ಹೀಗಾಗಿ ಅವರಿಗೆ ಪೂರ್ಣಾಂಕ ನೀಡಬೇಕಾಗುತ್ತದೆ. ಈ ಪಂದ್ಯಾವಳಿಯಲ್ಲಿ ಮಿಥಾಲಿ ಟೀಮ್ ಆಡಿದ ರೀತಿಯಿಂದ ನನಗೆ ತುಂಬಾ ಸಂತೋಷವಾಗಿದೆ…’ ಎಂದು ಗಾವಸ್ಕರ್ ಹೇಳಿದರು.
“ಹೌದು, ಭಾರತ ಕೊನೆಯ 7 ವಿಕೆಟ್ಗಳನ್ನು ಪಟಪಟನೆ ಕಳೆದು ಕೊಂಡಿತು. 20-30 ರನ್ನುಗಳ ಒಂದು ಜತೆಯಾಟ ನಡೆದರೂ ಭಾರತ ಮೇಲುಗೈ ಸಾಧಿಸುತ್ತಿತ್ತು. ಇದಕ್ಕೆ ಮುಖ್ಯವಾಗಿ ಬೇಕಿದ್ದುದು ಅನುಭವ…’ ಎಂದು ಸುನೀಲ್ ಗಾವಸ್ಕರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
Athletics: ಕಿರಿಯರ ಏಷ್ಯನ್ ಆ್ಯತ್ಲೆಟಿಕ್ಸ್ ಜಾವೆಲಿನ್ನಲ್ಲಿ ದೀಪಾಂಶುಗೆ ಬಂಗಾರ
Gukesh: ಚಾಂಪಿಯನ್ ಗುಕೇಶ್ಗೆ ಭವ್ಯ ಸ್ವಾಗತ
MUST WATCH
ಹೊಸ ಸೇರ್ಪಡೆ
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ
Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್