ಟೋಕಿಯೋ ಒಲಿಂಪಿಕ್ಸ್ ಯಶಸ್ಸಿನ ಬಳಿಕ ಒಟ್ಟಿಗೆ ಐಸ್ ಕ್ರೀಮ್ ತಿನ್ನೋಣ: ಸಿಂಧುಗೆ ಪ್ರಧಾನಿ ಮೋದಿ
ವರ್ಚುವಲ್ ಕಾರ್ಯಕ್ರಮದಲ್ಲಿ ಸಿಂಧು ಅವರ ಪೋಷಕರು ಕೂಡಾ ಹಾಜರಾಗಿದ್ದರು ಎಂದು ವರದಿ ತಿಳಿಸಿದೆ .
Team Udayavani, Jul 14, 2021, 12:30 PM IST
ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಗೆ ದಿನಗಣನೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿರುವ ಅಥ್ಲೇಟ್ ಗಳ ಜತೆ ವರ್ಚುವಲ್ ವಿಡಿಯೋ ಮೂಲಕ ಕುಶಲೋಪರಿ ನಡೆಸಿದ್ದರು.
ಇದನ್ನೂ ಓದಿ:ಭಾರತ: ಕಳೆದ 24ಗಂಟೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ, ಸಾವಿನ ಪ್ರಮಾಣ ಇಳಿಕೆ
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕೆಲವು ಅಥ್ಲೇಟ್ ಗಳ ಬಳಿ ಕ್ರೀಡಾಭ್ಯಾಸದ ಬಗ್ಗೆ ವಿಚಾರಿಸಿ ಅವರ ಮನದಾಳದ ಮಾತುಗಳನ್ನು ಆಲಿಸಿ ಧೈರ್ಯ ತುಂಬಿದ್ದರು. ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು ಜತೆ ಮಾತನಾಡಿದಾಗ, 2016ರ ರಿಯೋ ಒಲಿಂಪಿಕ್ಸ್ ವೇಳೆ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಅವರು ಸಿಂಧು ಅವರಿಂದ ಮೊಬೈಲ್ ಫೋನ್ ದೂರವಿಟ್ಟಿದ್ದು, ಐಸ್ ಕ್ರೀಮ್ ತಿನ್ನದಂತೆ ತಡೆದಿರುವುದನ್ನು ನೆನಪಿಸಿಕೊಂಡರು. ರಿಯೋ ಒಲಿಂಪಿಕ್ಸ್ ನಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು.
ಈಗ ಮತ್ತೆ ಐಸ್ ಕ್ರೀಮ್ ತಿನ್ನಲು ಅವಕಾಶ ನೀಡಿದ್ದಾರೆಯೇ ಎಂದು ಪ್ರಧಾನಿ ಮೋದಿ ಸಿಂಧು ಬಳಿ ಹಾಸ್ಯ ಚಟಾಕಿ ಹಾರಿಸಿದ್ದರು. ಒಲಿಂಪಿಕ್ಸ್ ಪಂದ್ಯದ ಅಭ್ಯಾಸದ ಹಿನ್ನೆಲೆಯಲ್ಲಿ ಈಗ ಹೆಚ್ಚು ಐಸ್ ಕ್ರೀಮ್ ತಿನ್ನುತ್ತಿಲ್ಲ ಎಂದು ಸಿಂಧು ಉತ್ತರಿಸಿದ್ದರು.
ಒಲಿಂಪಿಕ್ಸ್ ಸ್ಪರ್ಧಿಗಳಿಗೆ ಪ್ರಧಾನಿ ಮೋದಿ ಅವರು ಶುಭ ಹಾರೈಸಿದ್ದು, ಟೋಕಿಯೋ 2020ರ ಯಶಸ್ಸು ಮತ್ತೆ ಪುನರಾವರ್ತನೆಯಾಗಲಿ ಎಂದರು. ಅಷ್ಟೇ ಅಲ್ಲ ನಿಮ್ಮ ಕ್ರೀಡಾ ಯಶಸ್ಸಿನ ನಂತರ ನಾನು ನಿಮ್ಮನ್ನೆಲ್ಲಾ ಭೇಟಿಯಾಗುತ್ತೇನೆ. ಅಲ್ಲದೇ ನಿಮ್ಮ ಜತೆ ಐಸ್ ಕ್ರೀಮ್ ಕೂಡಾ ತಿನ್ನುತ್ತೇನೆ ಎಂದಾಗ ಪಿವಿ ಸಿಂಧು ಮತ್ತು ಆಕೆಯ ಪೋಷಕರು ನಗು ಬೀರಿದ್ದರು. ವರ್ಚುವಲ್ ಕಾರ್ಯಕ್ರಮದಲ್ಲಿ ಸಿಂಧು ಅವರ ಪೋಷಕರು ಕೂಡಾ ಹಾಜರಾಗಿದ್ದರು ಎಂದು ವರದಿ ತಿಳಿಸಿದೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ