ನಿಗದಿಯಂತೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ: ಇಸಿಬಿ
Team Udayavani, May 22, 2021, 7:00 AM IST
ಹೊಸದಿಲ್ಲಿ: ಟೆಸ್ಟ್ ಸರಣಿಯ ವೇಳಾಪಟ್ಟಿಯನ್ನು ತುಸು ಬದಲಿಸುವಂತೆ ಬಿಸಿಸಿಐ ನಮ್ಮ ಬಳಿ ಯಾವುದೇ ಮನವಿ ಮಾಡಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸ್ಪಷ್ಟಪಡಿಸಿದೆ. ಅದರಂತೆ ಈ ಸರಣಿ ಪೂರ್ವ ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದು ತಿಳಿಸಿದೆ.
ಕೊರೊನಾದಿಂದಾಗಿ ಮುಂದೂಡಲ್ಪಟ್ಟ ಐಪಿಎಲ್ ಕೂಟವನ್ನು ಮರಳಿ ಸಂಘಟಿಸಲು ಅನುಕೂಲವಾಗುವಂತೆ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಒಂದು ವಾರ ಮುಂಚಿತವಾಗಿ ಆರಂಭಿಸುವಂತೆ ಇಸಿಬಿ ಜತೆ ಬಿಸಿಸಿಐ ವಿನಂತಿಸಿಕೊಂಡಿದೆ ಎಂದು ಕೆಲವು ಇಂಗ್ಲಿಷ್ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಬಿಸಿಸಿಐ ಪ್ರಸ್ತಾವ ಸಲ್ಲಿಸಿಲ್ಲ
ಈ ಕುರಿತು ಮಾಹಿತಿ ನೀಡಿದ ಇಸಿಬಿ, “ನಾವು ಬಿಸಿಸಿಐ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಇಂತಹ ಯಾವುದೇ ವಿಷಯದ ಕುರಿತು ಚರ್ಚಿಸಿಲ್ಲ. ಅಲ್ಲದೇ ಬಿಸಿಸಿಐ ನಮ್ಮ ಬಳಿ ಟೆಸ್ಟ್ ಸರಣಿಯನ್ನು ಮುಂಚಿವಾಗಿ ನಡೆಸುವ ಪ್ರಸ್ತಾವವನ್ನೂ ಮುಂದಿಟ್ಟಿಲ್ಲ. ಇದು ಕೇವಲ ಊಹಾಪೋಹ. ಪೂರ್ವನಿಗದಿತ ವೇಳಾಪಟ್ಟಿಯಂತೆ ಈ ಟೆಸ್ಟ್ ಸರಣಿ ನಡೆಯಲಿದೆ’ ಎಂದಿದೆ. ಬಿಸಿಸಿಐ ಕೂಡ ಇದನ್ನೇ ಹೇಳಿದೆ. ಅಂದರೆ ಆಗಸ್ಟ್ 4ರಿಂದಲೇ ಸರಣಿ ಆರಂಭವಾಗಲಿದೆ.
ಅಕಸ್ಮಾತ್ ಸರಣಿ ಒಂದು ವಾರ ಮೊದಲೇ ಶುರುವಾದರೆ ಆಗ ಇಂಗ್ಲೆಂಡಿನ ಅತ್ಯಂತ ಮಹತ್ವಾಕಾಂಕ್ಷೆಯ “ದಿ ಹಂಡ್ರೆಡ್’ ಸರಣಿ ಹಾಗೂ ಪಾಕಿಸ್ಥಾನ ವಿರುದ್ಧದ ಸೀಮಿತ ಓವರ್ಗಳ ಸರಣಿಯ ವೇಳಾಪಟ್ಟಿ ಮೇಲೆ ಇದು ಪರಿಣಾಮ ಬೀರಲಿದೆ. ಪಾಕ್ ಎದುರಿನ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಜು. 8ರಿಂದ 20ರ ತನಕ, “ದಿ ಹಂಡ್ರೆಡ್’ ಸರಣಿ ಜು. 23ರಿಂದ ಆ. 22ರ ತನಕ ನಡೆಯಲಿದೆ.
ಇಂಗ್ಲೆಂಡ್ ಮಾಧ್ಯಮಗಳ ವರದಿ
“ಟೆಸ್ಟ್ ಸರಣಿಯನ್ನು ಒಂದು ವಾರ ಮುಂಚಿತವಾಗಿ, ಅಂದರೆ ಜುಲೈ ಕೊನೆಯ ವಾರದಲ್ಲಿ ಆರಂಭಿಸುವಂತೆ ಬಿಸಿಸಿಐ ಇಸಿಬಿಯಲ್ಲಿ ವಿನಂತಿಸಿತ್ತು. ಇದರಿಂದ ಉಳಿದ ಐಪಿಎಲ್ ಪಂದ್ಯಗಳ ಆಯೋಜನೆಗೆ ಇಂಗ್ಲೆಂಡ್ನಲ್ಲಿ ಸೂಕ್ತ ಅವಕಾಶ ಸಿಗುತ್ತದೆ ಎಂಬುದು ಇದರ ಉದ್ದೇಶ’ ಎಂಬುದಾಗಿ ಇಂಗ್ಲೆಂಡ್ ಮಾಧ್ಯಮಗಳು ವರದಿ ಮಾಡಿದ್ದವು. ಇಂಗ್ಲೆಂಡಿನ ಮಾಜಿ ನಾಯಕ ಮೈಕ್ ಆಥರ್ಟನ್ ಕೂಡ ತಮ್ಮ ಅಂಕಣವೊಂದರಲ್ಲಿ ಈ ಅಂಶವನ್ನು ಉಲ್ಲೇಖೀಸಿದ್ದರು.
ಐಪಿಎಲ್ ಮುಗಿಸದೇ ಹೋದರೆ ಬಿಸಿಸಿಐ ಸುಮಾರು 2,500 ಕೋಟಿ ರೂ. ನಷ್ಟಕ್ಕೊಳಗಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ