ಭಾರತ-ಪಾಕಿಸ್ಥಾನ ಫೈನಲ್ ಹಣಾಹಣಿ
Team Udayavani, Oct 29, 2018, 10:21 AM IST
ಮಸ್ಕತ್: ಹಾಲಿ ಚಾಂಪಿಯನ್ ಭಾರತದ ಪುರುಷರ ಹಾಕಿ ತಂಡ “ಏಶ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ನಲ್ಲಿ 3-2 ಗೋಲುಗಳಿಂದ ಜಪಾನ್ ವಿರುದ್ಧ ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದೆ. ರವಿವಾರ ತಡ ರಾತ್ರಿ ನಡೆಯುವ ಫೈನಲ್ನಲ್ಲಿ ಭಾರತ-ಪಾಕಿಸ್ಥಾನ ಮುಖಾಮುಖೀಯಾಗಲಿವೆ.
ಭಾರತ-ಪಾಕಿಸ್ಥಾನ ಫೈನಲ್ನಲ್ಲಿ ಎದುರಾಗುತ್ತಿರುವುದು ಇದು 4ನೇ ಸಲ ಹಾಗೂ ಸತತ 2ನೇ ಸಲ. ಜಪಾನ್-ಮಲೇಶ್ಯ ತೃತೀಯ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ಥಾನ ಶೂಟೌಟ್ನಲ್ಲಿ ಮಲೇಶ್ಯವನ್ನು 3-1 ಗೋಲುಗಳಿಂದ ಸೋಲಿತ್ತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 4-4 ಸಮಬಲ ಸಾಧಿಸಿದ್ದವು.
ಜಪಾನ್ ವಿರುದ್ಧ ಸತತ ಜಯ
ರೌಂಡ್ ರಾಬಿನ್ ಲೀಗ್ನಲ್ಲಿ ಭಾರತದ ವಿರುದ್ಧ 9-0 ಗೋಲುಗಳಿಂದ ಸೋತಿದ್ದ ಜಪಾನ್ ಸೆಮಿ ಪೈನಲ್ನಲ್ಲಿ ತೀವ್ರ ಪೈಪೋಟಿಯನ್ನೇ ನೀಡಿತು. ಆದರೆ ಪಂದ್ಯದಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಭಾರತ ಮತ್ತೂಮ್ಮೆ ಜಪಾನ್ಗೆ ಆಘಾತವಿಕ್ಕಿತು.
ಪಂದ್ಯದ ಆರಂಭದಲ್ಲಿ ಎರಡೂ ತಂಡಗಳು ರಕ್ಷಣಾತ್ಮಕ ಆಟವನ್ನಾಡಿದವು. 19ನೇ ನಿಮಿಷದಲ್ಲಿ ಗುರ್ಜಂತ್ ಸಿಂಗ್ ಗೋಲು ಹೊಡೆಯುವ ಮೂಲಕ ಭಾರತಕ್ಕೆ ಮುನ್ನಡೆ ತಂದಿತ್ತರು. ಇದಾದ ಮೂರೇ ನಿಮಿಷದಲ್ಲಿ ಜಪಾನಿನ ಹಿರೋಟಕ ವಕಾರು ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಹೊಡೆದು ಪಂದ್ಯವನ್ನು ಸಮಬಲಕ್ಕೆ ತಂದರು. ಇಲ್ಲಿಂದ ಮುಂದೆ ಎರಡೂ ತಂಡಗಳು ಗೋಲಿಗಾಗಿ ಸಾಕಷ್ಟು ಪ್ರಯತ್ನ ನಡೆಸಿದರೂ ಯಶಸ್ಸು ಕಾಣಲಿಲ್ಲ.
44ನೇ ನಿಮಿಷದಲ್ಲಿ ದೊರಕಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಾಚಿಕೊಂಡ ಚಿಂಗ್ಲೆನ್ಸಾನ ಭಾರತಕ್ಕೆ 2ನೇ ಗೋಲಿನ ಕಾಣಿಕೆ ನೀಡಿದರು. ಅನಂತರ 55ನೇ ನಿಮಿಷದಲ್ಲಿ ದಿಲ್ ಪ್ರೀತ್ ಸಿಂಗ್ ಗೋಲು ಬಾರಿಸಿ 3-1 ಮುನ್ನಡೆ ಸಾಧಿಸಲು ನೆರವಾದರು. ಆದರೆ ಭಾರತದ ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಜಪಾನ್ನ ಹಿರೋಟಕ ಜೆಂದಾನ ಪೆನಾಲ್ಟಿ ಕಾರ್ನರ್ ಮೂಲಕ 2ನೇ ಗೋಲು ಬಾರಿಸಿ ಅಂತರವನ್ನು ತಗ್ಗಿಸಿದರು. ಅನಂತರ ರಕ್ಷಣಾತ್ಮಕವಾಗಿ ಆಟವಾಡಿದ ಭಾರತ ಎದುರಾಳಿಗೆ ಗೋಲು ಬಾರಿಸಿದಂತೆ ತಡೆಯವಲ್ಲಿ ಯಶಸ್ವಿಯಾಯಿತು. ಭಾರತಕ್ಕೂ ಮುನ್ನಡೆ ವಿಸ್ತರಿಸಲು ಸಾಧ್ಯವಾಗಲಿಲ್ಲ.
ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್ಸ್
ವರ್ಷ ಸ್ಥಳ ಫೈನಲ್ ಫಲಿತಾಂಶ
2011 ಒರ್ಡೋಸ್ ಭಾರತ-ಪಾಕಿಸ್ಥಾನ ಭಾರತಕ್ಕೆ 4-2 ಜಯ
2012 ಕತಾರ್ ಭಾರತ-ಪಾಕಿಸ್ಥಾನ ಪಾಕಿಸ್ಥಾನಕ್ಕೆ 5-4 ಜಯ
2013 ಕಕಮಿಗಹಾರ ಪಾಕಿಸ್ಥಾನ-ಜಪಾನ್ ಪಾಕಿಸ್ಥಾನಕ್ಕೆ 3-1 ಜಯ
2016 ಕೌಂಟಾನ್ ಭಾರತ-ಪಾಕಿಸ್ಥಾನ ಭಾರತಕ್ಕೆ 3-2 ಜಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ