ಇಂದು ಭಾರತ -ಅಯರ್‌ಲ್ಯಾಂಡ್‌ ಟಿ 20


Team Udayavani, Jun 27, 2018, 6:00 AM IST

w-25.jpg

ಡ‌ಬ್ಲಿನ್‌: ಇಂಗ್ಲೆಂಡ್‌ ಎದುರಿನ ಸುದೀರ್ಘ‌ ಸರಣಿಗೆ ಪೂರ್ವಭಾವಿಯಾಗಿ ಪ್ರವಾಸಿ ಭಾರತೀಯ ಕ್ರಿಕೆಟ್‌ ತಂಡ ಅಯರ್‌ಲ್ಯಾಂಡ್‌ ವಿರುದ್ಧ ಬುಧವಾರದಿಂದ ಎರಡು ಟಿ 20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇಂಗ್ಲೆಂಡ್‌ ಎದುರಿನ ಕಠಿನ ಸರಣಿಗೆ ಮುನ್ನ ಭಾರತ ತಂಡಕ್ಕೆ ಇದೊಂದು ತಾಲೀಮು ಎನಿಸಲಿದೆ.

ಭಾರತ ತಂಡ ಶನಿವಾರ ದಿಲ್ಲಿಯಿಂದ ಲಂಡನ್‌ನಲ್ಲಿ ಬಂದಿಳಿದ ಬಳಿಕ ಸೋಮವಾರ ಮರ್ಚಂಟ್ಸ್‌ ಟೇಲರ್‌ ಸ್ಕೂಲ್‌ ಕ್ರಿಕೆಟ್‌ ಗ್ರೌಂಡ್‌ನ‌ಲ್ಲಿ ಮೊದಲ ಅಭ್ಯಾಸ ನಡೆಸಿತು. ಆಟಗಾರರು ಮೂರು ಗುಂಪುಗಳಾಗಿ ಚದುರಿ ಕ್ರೀಡೆಯ ಎಲ್ಲ ವಿಭಾಗಗಳಲ್ಲಿ ಅಭ್ಯಾಸ ನಡೆಸಿದರು. ಉಮೇಶ್‌ ಯಾದವ್‌, ಭುವನೇಶ್ವರ ಕುಮಾರ್‌ ಮತ್ತು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ  ಅವರು ವೇಗದ ದಾಳಿಯ ನೇತೃತ್ವ ವಹಿಸಿದರೆ ಕೆಲವು ಆಟಗಾರರು ಫೀಲ್ಡಿಂಗ್‌ ಅಭ್ಯಾಸ ನಡೆಸಿದರು. ಒಂದು ನೆಟ್‌ನಲ್ಲಿ ರೋಹಿತ್‌ ಶರ್ಮ ಮತ್ತು ಶಿಖರ್‌ ಧವನ್‌ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಸಮೀಪದ ಇನ್ನೊಂದು ನೆಟ್‌ನಲ್ಲಿ ನಾಯಕ ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್‌. ರಾಹುಲ್‌ ಸ್ಪಿನ್‌ ಮತ್ತು ವೇಗದ ದಾಳಿ ವಿರುದ್ಧ ಅಭ್ಯಾಸ ನಡೆಸಿದರು.

ಬುಧವಾರದ ಪಂದ್ಯದಲ್ಲಿ ರೋಹಿತ್‌ ಮತ್ತು ಧವನ್‌ ಇನ್ನಿಂಗ್ಸ್‌ ಆರಂಭಿಸುವ ನಿರೀಕ್ಷೆಯಿದೆ. ಕೊಹ್ಲಿ ವನ್‌ಡೌನ್‌ನಲ್ಲಿ ಬ್ಯಾಟಿಂಗ್‌ ನಡೆಸುವುದು ಖಚಿತ.  ರಹಾನೆ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿರುವುದರಿಂದ  ರಾಹುಲ್‌

ಅವರು ಪಂದ್ಯದಲ್ಲಿ  ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಬಹುತೇಕ ನಿಶ್ಚಿತ. ಉಳಿದೆರಡು ಸ್ಥಾನಗಳಿಗೆ ಮನೀಷ್‌ ಪಾಂಡೆ, ಸುರೇಶ್‌ ರೈನಾ ಮತ್ತು ದಿನೇಶ್‌ ಕಾರ್ತಿಕ್‌ ನಡುವೆ ಸ್ಪರ್ಧೆಯಿದೆ. ರೈನಾ ಅವರು ಬೌಲರ್‌ ಆಗಿಯೂ ಉಪಯೋಗಕ್ಕೆ ಬರುವುದರಿಂದ ಮತ್ತು ದಿನೇಶ್‌ ಕಾರ್ತಿಕ್‌ ಅದ್ಭುತ ಫಾರ್ಮ್ನಲ್ಲಿರುವುದರಿಂದ ಪಾಂಡೆ ಬಹುಶಃ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿಕ್ಕಿಲ್ಲ.

ಬೌಲಿಂಗ್‌ನ‌ಲ್ಲಿ ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಮತ್ತು ಕುಲದೀಪ್‌ ಯಾದವ್‌ ಅವರನ್ನು ಕೊಹ್ಲಿ ನೆಚ್ಚಿಕೊಳ್ಳುವ ಸಾಧ್ಯತೆಯಿದೆ. ವೇಗದ ಬೌಲಿಂಗ್‌ ವಿಭಾಗದಲ್ಲಿ ಭುವನೇಶ್ವರ್‌ ಅಥವಾ ಜಸ್‌ಪ್ರೀತ್‌ ಬುಮ್ರಾ ಅವರಲ್ಲಿ ಒಬ್ಬರನ್ನು ಆಡಿಸದೆ ಉಮೇಶ್‌ ಯಾದವ್‌ ಅಥವಾ ಸಿದ್ಧಾರ್ಥ್ ಕೌಲ್‌ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಕೌಲ್‌ ಇನ್ನೂ ಅಂತಾರಾಷ್ಟ್ರೀಯ ಟಿ 20 ಪಂದ್ಯವನ್ನು ಆಡಿಲ್ಲ.

ಭಾರತ ಮತ್ತು ಅಯರ್‌ಲ್ಯಾಂಡ್‌ ನಡುವೆ ಈತನಕ ಹೆಚ್ಚು ಪಂದ್ಯಗಳು ನಡೆದಿಲ್ಲ. 2011 ಮತ್ತು 2014ರಲ್ಲಿ ಭಾರತ ಇಂಗ್ಲೆಂಡ್‌ ಪ್ರವಾಸಗೈದ ವೇಳೆ ಅಯರ್‌ಲ್ಯಾಂಡ್‌ಗೆ ತೆರಳಿರಲಿಲ್ಲ. 2007ರ ಪ್ರವಾಸದಲ್ಲಿ ಮಾತ್ರ ಭಾರತ ಅಯರ್‌ಲ್ಯಾಂಡ್‌ ವಿರುದ್ಧ ಏಕೈಕ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನಾಡಿತ್ತು. ಇವೆರಡು ತಂಡಗಳ ನಡುವೆ ಒಟ್ಟಾರೆ ನಾಲ್ಕು ಪಂದ್ಯಗಳು ಮಾತ್ರ ನಡೆದಿವೆ ಮತ್ತು ಈ ಪೈಕಿ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಾದರೆ ಒಂದು ಟಿ20 ಪಂದ್ಯವಾಗಿತ್ತು.

ಅಯರ್‌ಲ್ಯಾಂಡ್‌ ತಂಡದಲ್ಲಿ ಈಗಿರುವ ಆಟಗಾರರ ಪೈಕಿ ನಾಯಕ ಗ್ಯಾರಿ ವಿಲ್ಸನ್‌, ಮಾಜಿ ನಾಯಕ ವಿಲಿಯಂ ಪೋರ್ಟರ್‌ಫೀಲ್ಡ್‌ ಮತ್ತು ಆಲ್‌ರೌಂಡರ್‌ ಕೆವಿನ್‌ ಒಬ್ರಿಯಾನ್‌ ಅವರು ಮಾತ್ರ ಟಿ 20 ಪಂದ್ಯವನ್ನು ಆಡಿದ ಅನುಭವ ಹೊಂದಿದ್ದಾರೆ.

ತಂಡಗಳು
ಭಾರತ:
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ಮನೀಷ್‌ ಪಾಂಡೆ, ಸುರೇಶ್‌ ರೈನಾ, ದಿನೇಶ್‌ ಕಾರ್ತಿಕ್‌, ಎಂ.ಎಸ್‌. ಧೋನಿ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಭುವನೇಶ್ವರ ಕುಮಾರ್‌,  ಜಸ್‌ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌, ಸಿದ್ಧಾರ್ಥ್ ಕೌಲ್‌.

ಅಯರ್‌ಲ್ಯಾಂಡ್‌: ಗ್ಯಾರಿ ವಿಲ್ಸನ್‌(ಕ್ಯಾಪ್ಟನ್‌ ಮತ್ತು ವಿಕೆಟ್‌ ಕೀಪರ್‌), ಆಂಡ್ನೂ ಬಲ್‌ಬಿರ್ನಿ, ಪೀಟರ್‌ ಚೇಸ್‌, ಜಾರ್ಜ್‌ ಡಾಕ್ರೆಲ್‌, ಜೋಶ್‌ ಲಿಟ್ಲ, ಆ್ಯಂಡಿ ಮೆಕ್‌ಬ್ರೈನ್‌, ಕೆವಿನ್‌ ಒಬ್ರಿಯಾನ್‌, ವಿಲಿಯಂ ಪೋರ್ಟರ್‌ಫೀಲ್ಡ್‌, ಸ್ಟುವರ್ಟ್‌ ಪೊçಂಟರ್‌, ಬೋಯ್ಡ ರ್ಯಾನ್‌ಕಿನ್‌, ಜೇಮ್ಸ್‌ ಶಾನನ್‌, ಸಿಮಿ ಸಿಂಗ್‌, ಪಾಲ್‌ ಸ್ಟರ್ಲಿಂಗ್‌, ಸ್ಟುವರ್ಟ್‌ ಥೋಮ್ಸನ್‌.  

ಪಂದ್ಯ ಆರಂಭ: ಭಾರತೀಯ ಕಾಲ ರಾತ್ರಿ 8.30ಕ್ಕೆ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.