ಶ್ರೀಲಂಕಾಕ್ಕೆ ಭರ್ಜರಿ ಗೆಲುವು 


Team Udayavani, Mar 7, 2018, 7:30 AM IST

s-18.jpg

ಕೊಲಂಬೊ: ಕುಸಲ್‌ ಪೆರೆರ ಅವರ ಬಿರುಸಿನ ಆಟದಿಂದಾಗಿ ಆತಿಥೇಯ ಶ್ರೀಲಂಕಾ ತಂಡವು ಭಾರತ ವಿರುದ್ಧ ಮಂಗಳವಾರ ನಡೆದ ನಿದಹಾಸ್‌ ತ್ರಿಕೋನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಶಾರ್ದೂಲ್‌ ಠಾಕೂರ್‌ ಅವರ ಒಂದು ಓವರಿನಲ್ಲಿ 5 ಬೌಂಡರಿ ಸಹಿತ 27 ರನ್‌ ಸಿಡಿಸಿದ್ದ ಕುಸೆಲ್‌ ಪೆರೆರ ಅವರು ಕೇವಲ 37 ಎಸೆತಗಳಿಂದ 66 ರನ್‌ ಗಳಿಸಿದ್ದರು. ಇದರಿಂದಾಗಿ ಶ್ರೀಲಂಕಾ ತಂಡವು 18.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ 175 ರನ್‌ ಗಳಿಸಿ ಜಯಭೇರಿ ಸಾಧಿಸಿತು. ಈ ಮೊದಲು ಶಿಖರ್‌ ಧವನ್‌ ಅವರ ಬಿರುಸಿನ ಆಟದಿಂದಾಗಿ ಭಾರತ ತಂಡವು 5 ವಿಕೆಟಿಗೆ 174 ರನ್‌ ಪೇರಿಸಿತ್ತು. ಲಂಕಾದ 70ನೇ ಸ್ವಾತಂತ್ರೊತ್ಸವದ ಸವಿನೆನಪಿಗಾಗಿ ಈ ತ್ರಿಕೋನ ಸರಣಿಯನ್ನು ಆಯೋಜಿಸಲಾಗಿದೆ. ಸರಣಿಯ ಮುಂದಿನ ಪಂದ್ಯ ಮಾ. 8ರಂದು ಭಾರತ ಬಾಂಗ್ಲಾದೇಶ ನಡುವೆ ನಡೆಯಲಿದೆ. 

ಆರಂಭಿಕ ಆಘಾತ
ಆರಂಭಿಕ ಆಘಾತದ ಬಳಿಕ ಧವನ್‌ ಭಾರತ ತಂಡವನ್ನು ಆಧರಿಸಿದರು. ಅವರ ಬಿರುಸಿನ ಆಟದಿಂದಾಗಿ ತಂಡ ಚೇತರಿಸು ವಂತಾಯಿತು. ಮೊದಲ ಓವರಿನ ನಾಲ್ಕನೇ ಎಸೆತದಲ್ಲಿ ನಾಯಕ ರೋಹಿತ್‌ ಔಟಾದರೆ ಮುಂದಿನ ಓವರಿನಲ್ಲಿ ರೈನಾ ಅವರು ಪ್ರದೀಪ್‌ಗೆ ಕ್ಲೀನ್‌ಬೌಲ್ಡ್‌ ಆದರು. ಆಬಳಿಕ ಧವನ್‌ ಅವರು ಮೂರನೇ ವಿಕೆಟಿಗೆ ಮನೀಷ್‌ ಪಾಂಡೆ ಜತೆಗೂಡಿ 95 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಸುಸ್ಥಿತಿಗೆ ತಲುಪಿಸಲು ಪ್ರಯತ್ನಿಸಿದರು. ಉತ್ತಮವಾಗಿ ಆಡುತ್ತಿದ್ದ ಮನೀಷ್‌ ಪಾಂಡೆ 35 ಎಸೆತಗಳಿಂದ 37 ರನ್‌ ಹೊಡೆದರು. ಭಡ್ತಿ ಪಡೆದು ಬಂದ ರಿಷಬ್‌ ಪಂತ್‌ ಎಸೆತಕ್ಕೊಂದರಂತೆ 23 ರನ್‌ ಹೊಡೆದರು. 

ಪ್ರದೀಪ್‌ ಓವರಿನಲ್ಲಿ ಬೆನ್ನು ಬೆನ್ನಿಗೆ ಬೌಂಡರಿ ಬಾರಿಸಿದ ಧವನ್‌ ಕೇವಲ 49 ಎಸೆತಗಳಲ್ಲಿ 90 ರನ್‌ ಗಳಿಸಿ ಔಟಾದರು. ಆರು ಬೌಂಡರಿ ಮತ್ತು ಆರು ಸಿಕ್ಸರ್‌ ಬಾರಿಸಿ ಪ್ರೇಕ್ಷಕರನ್ನು ರಂಜಿಸಿದರು. ಇದು ಟ್ವೆಂಟಿ20ಯಲ್ಲಿ ಧವನ್‌ ಅವರ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ 80 ರನ್‌ ಗಳಿಸಿದ್ದು ಅವರ ಗರಿಷ್ಠ ಮೊತ್ತವಾಗಿತ್ತು.

ಭಾರತದ ದ್ವಿತೀಯ ದರ್ಜೆಯ ತಂಡವನ್ನು ರೋಹಿತ್‌ ಶರ್ಮ ಮುನ್ನಡೆಸಿದ್ದರು. ಪಂದ್ಯ ಆರಂಭವಾಗುವ ಮೊದಲು ಆಲ್‌ರೌಂಡರ್‌ ವಿಜಯ್‌ ಶಂಕರ್‌ ಅವರಿಗೆ ಕೋಚ್‌ ರವಿಶಾಸ್ತ್ರೀ ಅವರು ಇಂಡಿಯಾ ಕ್ಯಾಪ್‌ ನೀಡಿ ತಂಡಕ್ಕೆ ಸ್ವಾಗತಿಸಿದರು. ಇದು ವಿಜಯ್‌ ಶಂಕರ್‌ ಅವರ ಚೊಚ್ಚಲ ಟ್ವೆಂಟಿ20 ಪಂದ್ಯವಾಗಿದೆ.

ಸ್ಕೋರ್‌ಪಟ್ಟಿ
ಭಾರತ

ರೋಹಿತ್‌ ಶರ್ಮ    ಸಿ ಮೆಂಡಿಸ್‌ ಬಿ ಚಮೀರ    0
ಶಿಖರ್‌ ಧವನ್‌    ಸಿ ಪೆರೆರ ಬಿ ಗುಣತಿಲಕ    90
ಸುರೇಶ್‌ ರೈನಾ    ಬಿ ಪ್ರದೀಪ್‌    1
ಮನೀಷ್‌ ಪಾಂಡೆ    ಸಿ ಗುಣತಿಲಕ ಬಿ ಮೆಂಡಿಸ್‌    37
ರಿಷಬ್‌ ಪಂತ್‌    ಸಿ ಫೆರ್ನಾಂಡೊ ಬಿ ಚಮೀರ    23
ದಿನೇಶ್‌ ಕಾರ್ತಿಕ್‌    ಔಟಾಗದೆ    13

ಇತರ:        10
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ)    174
ವಿಕೆಟ್‌ ಪತನ: 1-1, 2-9, 3-104, 4-153, 5-174

ಬೌಲಿಂಗ್‌: 
ದುಷ್ಮಂತ ಚಮೀರ        4-0-33-2
ನುವಾನ್‌ ಪ್ರದೀಪ್‌        3-0-38-1
ಅಖೀಲ ಧನಂಜಯ        4-0-37-0
ತಿಸರ ಪೆರೆರ        3-0-25-0
ಜೀವನ್‌ ಮೆಂಡಿಸ್‌        3-0-21-1
ದನುಷ್ಕ ಗುಣತಿಲಕ        3-0-16-1

ಶ್ರೀಲಂಕಾ
ದನುಷ್ಕ ಗುಣತಿಲಕ    ಸಿ ಪಂತ್‌ ಬಿ ಉನಾದ್ಕತ್‌    19
ಕುಸಲ್‌ ಮೆಂಡಿಸ್‌    ಸಿ ಧವನ್‌ ಬಿ ಸುಂದರ್‌    11
ಕುಸಲ್‌ ಪೆರೆರ    ಸ್ಟಂಪ್ಡ್ ಕಾರ್ತಿಕ್‌ ಬಿ ಸುಂದರ್‌    66
ದಿನೇಶ್‌ ಚಂಡಿಮಾಲ್‌    ಬಿ ಚಾಹಲ್‌    14
ಉಪುಲ್‌ ತರಂಗ    ಬಿ ಚಾಹಲ್‌    17
ದಸುನ್‌ ಶಣಕ    ಔಟಾಗದೆ    15
ತಿಸರ ಪೆರೆರ    ಔಟಾಗದೆ    22

ಇತರ        11
ಒಟ್ಟು ( 18.3 ಓವರ್‌ಗಳಲ್ಲಿ 5 ವಿಕೆಟಿಗೆ)    175
ವಿಕೆಟ್‌ ಪತನ: 1-12, 2-70, 3-98, 4-127, 5-136

ಬೌಲಿಂಗ್‌:
ಜೈದೇವ್‌ ಉನಾದ್ಕತ್‌        3-0-35-1
ವಾಷಿಂಗ್ಟನ್‌ ಸುಂದರ್‌        4-0-28-2
ಶಾದೂìಲ್‌ ಠಾಕೂರ್‌        3.3-0-42-0
ಯಜುವೇಂದ್ರ ಚಾಹಲ್‌        4-0-37-2
ವಿಜಯ್‌ ಶಂಕರ್‌        2-0-15-0    ಸುರೇಶ್‌ ರೈನಾ        2-0-14-0

ಟಾಪ್ ನ್ಯೂಸ್

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.