ಒದ್ದೆ ಅಂಗಳ; 8 ಓವರ್‌ ಪಂದ್ಯ; ರೋಹಿತ್‌ ಸಾಹಸ; ಸರಣಿ ಸಮಬಲ


Team Udayavani, Sep 23, 2022, 11:07 PM IST

indಒದ್ದೆ ಅಂಗಳ; 8 ಓವರ್‌ ಪಂದ್ಯ; ರೋಹಿತ್‌ ಸಾಹಸ; ಸರಣಿ ಸಮಬಲ

ನಾಗ್ಪುರ: ಎಂಟು ಓವರ್‌ಗಳಿಗೆ ಸೀಮಿತಗೊಂಡ ದ್ವಿತೀಯ ಟಿ20 ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದ ಭಾರತ ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 5 ವಿಕೆಟಿಗೆ 90 ರನ್‌ ಮಾಡಿದರೆ, ಭಾರತ 7.2 ಓವರ್‌ಗಳಲ್ಲಿ 4 ವಿಕೆಟಿಗೆ 92 ರನ್‌ ಬಾರಿಸಿತು. ಮೊದಲ ಪಂದ್ಯವನ್ನು ಆಸೀಸ್‌ 4 ವಿಕೆಟ್‌ಗಳಿಂದ ಗೆದ್ದಿತ್ತು. ಅಂತಿಮ ಏಕದಿನ ಪಂದ್ಯ ರವಿವಾರ ಹೈದರಾಬಾದ್‌ನಲ್ಲಿ ನಡೆಯಲಿದೆ.

ಚೇಸಿಂಗ್‌ ವೇಳೆ ನಾಯಕ ರೋಹಿತ್‌ ಶರ್ಮ ಸಿಡಿದು ನಿಂತರು. ಹೇಝಲ್‌ವುಡ್‌ ಅವರ ಮೊದಲ ಓವರ್‌ನಲ್ಲೇ 3 ಸಿಕ್ಸರ್‌ ಎತ್ತಿದರು. ಕಪ್ತಾನನ ಕೊಡುಗೆ ಅಜೇಯ 46 ರನ್‌ (20 ಎಸೆತ, 4 ಬೌಂಡರಿ, 4 ಸಿಕ್ಸರ್‌). ದಿನೇಶ್‌ ಕಾರ್ತಿಕ್‌ ಅಂತಿಮ ಓವರ್‌ನ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್‌ ಹಾಗೂ ಬೌಂಡರಿ ಬಾರಿಸಿ ಗೆಲುವು ಸಾರಿದರು.
ಒದ್ದೆ ಅಂಗಳದಿಂದಾಗಿ ಪಂದ್ಯ ಎರಡೂವರೆ ಗಂಟೆ ವಿಳಂಬಗೊಂಡಿತು. 9.15ಕ್ಕೆ ಟಾಸ್‌ ಹಾರಿಸಿ, 9.30ಕ್ಕೆ ಪಂದ್ಯವನ್ನು ಪ್ರಾರಂಭಿಸಲಾಯಿತು.

ಭಾರತದ ಬೌಲಿಂಗ್‌ ಆರಂಭಿ ಸಿದವರು ಹಾರ್ದಿಕ್‌ ಪಾಂಡ್ಯ. ಇದರಲ್ಲಿ ಎರಡು ಬೌಂಡರಿ ಸೇರಿದಂತೆ 10 ರನ್‌ ಬಂತು. ಅಕ್ಷರ್‌ ಪಟೇಲ್‌ ಅವರಿಗೂ ಬೌಂಡರಿ ಸ್ವಾಗತ ಸಿಕ್ಕಿತು. ಆದರೆ 3ನೇ ಎಸೆತದಲ್ಲಿ ಕ್ಯಾಮರಾನ್‌ ಗ್ರೀನ್‌ ರನೌಟಾಗಿ ನಿರ್ಗಮಿಸಿದರು. ಕಳೆದ ಪಂದ್ಯದ ಹೀರೋ ಗ್ರೀನ್‌ ಇಲ್ಲಿ ಐದೇ ರನ್ನಿಗೆ ವಾಪಸಾದರು. ಓವರ್‌ನ ಅಂತಿಮ ಎಸೆತದಲ್ಲಿ ಗ್ಲೆನ್‌ ಮ್ಯಾಕ್ಸ್‌ ವೆಲ್‌ ಬೌಲ್ಡ್‌ ಆದರು. ಅವರದು ಗೋಲ್ಡನ್‌ ಡಕ್‌ ಆಗಿತ್ತು.

ಚಹಲ್‌ ಎಸೆದ 3ನೇ ಓವರ್‌ ದುಬಾರಿಯಾಯಿತು. ಆಸೀಸ್‌ 12 ರನ್‌ ಬಾರಿಸಿತು. ಮುಂದಿನ ಓವರ್‌ನ ಮೊದಲ ಎಸೆತದಲ್ಲೇ ಅಕ್ಷರ್‌ ಪಟೇಲ್‌ ಮತ್ತೊಂದು ವಿಕೆಟ್‌ ಬೇಟೆಯಾಡಿದರು. ಟಿಮ್‌ ಡೇವಿಡ್‌ ಬೌಲ್ಡ್‌ ಆದರು. ಈ ಓವರ್‌ನಲ್ಲಿ ಅವರು ನೀಡಿದ್ದು ನಾಲ್ಕೇ ರನ್‌.

ಬುಮ್ರಾ ದಾಳಿಗೆ ಇಳಿದದ್ದು 5ನೇ ಓವರ್‌ನಲ್ಲಿ. ಇಲ್ಲಿ ಅವರಿಗೆ ಆಸೀಸ್‌ ನಾಯಕನ ವಿಕೆಟ್‌ ಸಿಕ್ಕಿತು. ಆರನ್‌ ಫಿಂಚ್‌ 31 ರನ್‌ ಮಾಡಿ ಬೌಲ್ಡ್‌ ಆದರು. 5 ಓವರ್‌ ಮುಕ್ತಾಯಕ್ಕೆ ಆಸೀಸ್‌ 4 ವಿಕೆಟಿಗೆ 46 ರನ್‌ ಮಾಡಿತ್ತು.

ಮೊದಲ ಪಂದ್ಯದಲ್ಲಿ ತಂಡವನ್ನು ದಡ ಮುಟ್ಟಿಸಿದ ಮ್ಯಾಥ್ಯೂ ವೇಡ್‌ ಅಜೇಯ 43 ರನ್‌ (20 ಎಸೆತ, 4 ಬೌಂಡರಿ, 3 ಸಿಕ್ಸರ್‌) ಬಾರಿಸಿ ಆಸೀಸ್‌ ಸರದಿಯ ಟಾಪ್‌ ಸ್ಕೋರರ್‌ ಎನಿಸಿದರು. ಅವರು ಹರ್ಷಲ್‌ ಪಟೇಲ್‌ ಅವರ ಕೊನೆಯ ಓವರ್‌ನಲ್ಲಿ 3 ಸಿಕ್ಸರ್‌ ಸಿಡಿಸಿದರು. ವೇಡ್‌, ಫಿಂಚ್‌ ಹೊರತುಪಡಿಸಿ ಉಳಿದವರ್ಯಾರೂ ಎರಡಂಕೆಯ ಗಡಿ ದಾಟಲಿಲ್ಲ.

ಬುಮ್ರಾ, ಪಂತ್‌ ಆಗಮನ
ಭಾರತ ಈ ಪಂದ್ಯಕ್ಕಾಗಿ ಎರಡು ಬದಲಾವಣೆ ಮಾಡಿಕೊಂಡಿತು. ಭುವನೇಶ್ವರ್‌ ಕುಮಾರ್‌ ಮತ್ತು ಉಮೇಶ್‌ ಯಾದವ್‌ ಬದಲು ಜಸ್‌ಪ್ರೀತ್‌ ಬುಮ್ರಾ ಹಾಗೂ ರಿಷಭ್‌ ಪಂತ್‌ ಅವರನ್ನು ಸೇರಿಸಿಕೊಳ್ಳಲಾಯಿತು.
ಆಸ್ಟ್ರೇಲಿಯ ತಂಡದಲ್ಲೂ ಎರಡು ಪರಿವರ್ತನೆ ಕಂಡುಬಂತು. ಗಾಯಾಳು ನಥನ್‌ ಎಲ್ಲಿಸ್‌ ಹಾಗೂ ಜೋಶ್‌ ಇಂಗ್ಲಿಸ್‌ ಸ್ಥಾನಕ್ಕೆ ಸೀನ್‌ ಅಬೋಟ್‌ ಮತ್ತು ಡೇನಿಯಲ್‌ ಸ್ಯಾಮ್ಸ್‌ ಬಂದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-5 ವಿಕೆಟಿಗೆ 90 (ವೇಡ್‌ ಔಟಾಗದೆ 43, ಫಿಂಚ್‌ 31, ಅಕ್ಷರ್‌ ಪಟೇಲ್‌ 13ಕ್ಕೆ 2, ಬುಮ್ರಾ 23ಕ್ಕೆ 1). ಭಾರತ-7.2 ಓವರ್‌ಗಳಲ್ಲಿ 4 ವಿಕೆಟಿಗೆ 92 (ರೋಹಿತ್‌ ಔಟಾಗದೆ 46 , ಕೊಹ್ಲಿ 11, ಕಾರ್ತಿಕ್‌ ಔಟಾಗದೆ 10, ರಾಹುಲ್‌ 10, ಪಾಂಡ್ಯ 9, ಝಂಪ 10ಕ್ಕೆ 3).

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.