ಶಿಖರ್ ಧವನ್ ಬದಲು ಮತ್ತೋರ್ವ ಆರಂಭಿಕನನ್ನು ಹೆಸರಿಸಿದ ಶ್ರೀಕಾಂತ್
Team Udayavani, Nov 7, 2019, 4:42 PM IST
ಮುಂಬೈ: ಚುಟುಕು ಮಾದರಿ ಕ್ರಿಕೆಟ್ ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಆರಂಭಿಕ ಆಟಗಾರ ಶಿಖರ್ ಧವನ್ ಬದಲು ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಮಚಾರಿ ಶ್ರೀಕಾಂತ್ ಹೇಳಿದ್ದಾರೆ.
ಚುಟುಕು ಮಾದರಿ ಕ್ರಿಕೆಟ್ ನಲ್ಲಿ ಧವನ್ ತೋರಿಸುತ್ತಿರುವ ಬ್ಯಾಟಿಂಗ್ ವಿಧಾನ ಸರಿಯಾಗಿಲಗಲ. ಹೀಗಾಗಿ ಬೇರೆ ಆಟಗಾರನನ್ನು ರೋಹಿತ್ ಜೊತೆ ಕಣಕ್ಕಿಳಿಸಬೇಕು ಎಂದು ಶ್ರಿಕಾಂತ್ ಹೇಳಿದ್ದಾರೆ.
ಖಾಸಗಿ ಪತ್ರಿಕೆಯೊಂದಕ್ಕೆ ಬರೆಯುತ್ತಾ ಅವರು, ಮುಂದಿನ ವರ್ಷ ನಡೆಯಲಿರುವ ಟಿ ಟ್ವೆಂಟಿ ವಿಶ್ವ ಕಪ್ ಗೆ ಗಮನಹರಿಸಿ ಈಗಲೇ ಒಂದು ಸರಿಯಾದ ಆರಂಭಿಕ ಜೋಡಿ ಕಟ್ಟುವ ಅಗತ್ಯವಿದೆ. ಕೆ. ಎಲ್ ರಾಹುಲ್ ಈ ಮಾದರಿಯಲ್ಲಿ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಲು ಸರಿಯಾದ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ.