ಟಿ-20:ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್ಗೆ ಚೊಚ್ಚಲ ಕರೆ
Team Udayavani, Oct 23, 2017, 5:53 PM IST
ಮುಂಬಯಿ : ಮುಂಬಯಿ ಓಪನರ್ ಶ್ರೇಯಸ್ ಅಯ್ಯರ್ ಮತ್ತು ಹೈದರಾಬಾದ್ ಪೇಸರ್ ಮೊಹಮ್ಮದ್ ಸಿರಾಜ್ ಅವರು ಪ್ರವಾಸಿ ನ್ಯೂಜೀಲ್ಯಾಂಡ್ ವಿರುದ್ಧದ ಎಲ್ಲ ಮೂರು ಟಿ-20 ಪಂದ್ಯಗಳಿಗೆ ಚೊಚ್ಚಲ ಕರೆಯನ್ನು ಪಡೆದಿದ್ದಾರೆ.
ದಿಲ್ಲಿಯಲ್ಲಿ ನಡೆಯಲಿರುವ ಕಿವೀಸ್ ಎದುರಿನ ಟಿ-20 ಪಂದ್ಯದ ಬಳಿಕ ತಾನು ಎಲ್ಲ ಆವೃತ್ತಿಯ ಕ್ರಿಕೆಟ್ಗೆ ವಿದಾಯ ಹೇಳುವುದಾಗಿ ಈಚೆಗಷ್ಟೇ ಪ್ರಕಟಿಸಿದ್ದ ಆಶಿಶ್ ನೆಹ್ರಾ ಅವರನ್ನು ಕೇವಲ ಮೊದಲ ಟಿ-20 ಪಂದ್ಯಕ್ಕೆ ಮಾತ್ರವೇ ತಂಡದ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಶ್ರೇಯಸ್ ಅಯ್ಯರ್ ಈ ವರೆಗಿನ ದೇಶೀಯ ಟಿ-20 ಪಂದ್ಯಗಳಲ್ಲಿ 26.85 ಸರಾಸರಿಯೊಂದಿಗೆ 1,289 ರನ್ಗಳನ್ನು ಈ ತನಕ ಬಾರಿಸಿದ್ದಾರೆ. ಈತ ಓಪನರ್ ಮತ್ತು ನಂಬರ್ 3 ಆಟಗಾರನಾಗಿ ಈಚೆಗೆ ಮಿಂಚಿದ್ದಾರೆ.
ಐಪಿಎಲ್ ಕೂಟದ ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗದ ಎಸೆಗಾರನಾಗಿ ಸಿರಾಜ್ 21.2 ರನ್ ಸರಾಸರಿಯಲ್ಲಿ 10 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.
ಟಿ-20 ಸರಣಿಗೆ ಆಯ್ಕೆಯಾಗಿರುವ ಭಾರತೀಯ ತಂಡ ಇಂತಿದೆ :
ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಎಂ ಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್, ಆಶಿಶ್ ನೆಹ್ರಾ (ಮೊದಲ ಟಿ-20), ಮೊಹಮ್ಮದ್ ಸಿರಾಜ್.