ಶಂಸಿ, ರಬಾಡ ದಾಳಿಗೆ ಉರುಳಿದ ಲಂಕಾ
Team Udayavani, Jul 30, 2018, 2:57 PM IST
ಡಂಬುಲ: ವೇಗಿ ಕಾಗಿಸೊ ರಬಾಡ ಹಾಗೂ ಸ್ಪಿನ್ನರ್ ತಬ್ರೇಜ್ ಶಂಸಿ ದಾಳಿಗೆ ತತ್ತರಿಸಿದ ಶ್ರೀಲಂಕಾ, ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್ ಸೋಲನುಭವಿಸಿದೆ. ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕಳೆದುಕೊಂಡಿದ್ದ ಹರಿಣಗಳ ಪಡೆಯೀಗ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಸೇಡು ತೀರಿಸಲು ಹೊರಟಂತಿದೆ.
ರವಿವಾರ ಡಂಬುಲದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗಿಗೆ ಇಳಿದ ಶ್ರೀಲಂಕಾ 34.3 ಓವರ್ಗಳಲ್ಲಿ 193 ರನ್ನುಗಳ ಸಣ್ಣ ಮೊತ್ತಕ್ಕೆ ಕುಸಿಯಿತು. ಜವಾಬಿತ್ತ ದಕ್ಷಿಣ ಆಫ್ರಿಕಾ 31 ಓವರ್ಗಳಲ್ಲಿ 5 ವಿಕೆಟಿಗೆ 196 ರನ್ ಬಾರಿಸಿ ಗೆಲುವು ಸಾಧಿಸಿತು.
ರಬಾಡ ಮತ್ತು ಶಂಸಿ ತಲಾ 4 ವಿಕೆಟ್ ಹಾರಿಸಿ ಶ್ರೀಲಂಕಾದ ಬ್ಯಾಟಿಂಗ್ ಸರದಿಯನ್ನು ಸೀಳಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಕುಸಲ್ ಪೆರೆರ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು 81 ರನ್ (72 ಎಸೆತ, 11 ಬೌಂಡರಿ, 1 ಸಿಕ್ಸರ್) ಮಾಡದೇ ಹೋಗಿದ್ದಲ್ಲಿ ಲಂಕಾ ಸ್ಥಿತಿ ಇನ್ನಷ್ಟು ಶೋಚನೀಯವಾಗುತ್ತಿತ್ತು.
ಲಂಕೆಯ 5 ವಿಕೆಟ್ 36 ರನ್ ಆಗುವಷ್ಟರಲ್ಲಿ ಹಾರಿಹೋಗಿತ್ತು. ಕುಸಲ್ ಪೆರೆರ-ತಿಸರ ಪೆರೆರ 6ನೇ ವಿಕೆಟಿಗೆ 92 ರನ್ ಜತೆಯಾಟ ನಡೆಸಿ ಕುಸಿತಕ್ಕೆ ತಡೆಯಾದರು. ತಿಸರ ಪೆರೆರ 30 ಎಸೆತಗಳಿಂದ 49 ರನ್ ಹೊಡೆದರು (8 ಬೌಂಡರಿ).
ದಕ್ಷಿಣ ಆಫ್ರಿಕಾ ಪರ ಜೆಪಿ ಡ್ಯುಮಿನಿ ಅಜೇಯ 53 ರನ್ ಹೊಡೆದರು. ಕ್ವಿಂಟನ್ ಡಿ ಕಾಕ್, ನಾಯಕ ಫಾಡು ಪ್ಲೆಸಿಸ್ ತಲಾ 47 ರನ್ ಮಾಡಿದರು.
ದ್ವಿತೀಯ ಪಂದ್ಯ ಬುಧವಾರ ಡಂಬುಲದಲ್ಲೇ ನಡೆಯಲಿದ್ದು, ಇದು ಡೇ-ನೈಟ್ ಮುಖಾಮುಖೀಯಾಗಿದೆ.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ-34.3 ಓವರ್ಗಳಲ್ಲಿ 193 (ಕುಸಲ್ ಪೆರೆರ 81, ತಿಸರ ಪೆರೆರ 49, ಶಂಸಿ 33ಕ್ಕೆ 4, ರಬಾಡ 41ಕ್ಕೆ 4). ದಕ್ಷಿಣ ಆಫ್ರಿಕಾ-31 ಓವರ್ಗಳಲ್ಲಿ 5 ವಿಕೆಟಿಗೆ 196 (ಡುಮಿನಿ ಔಟಾಗದೆ 53, ಡಿ ಕಾಕ್ 47, ಡು ಪ್ಲೆಸಿಸ್ 47, ಧನಂಜಯ 50ಕ್ಕೆ 3). ಪಂದ್ಯಶ್ರೇಷ್ಠ: ತಬ್ರೇಜ್ ಶಂಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?