ಧೋನಿ ಹತ್ತಿರದಿಂದ ಕಂಡ ಸ್ಮರಣೀಯ ಇನ್ನಿಂಗ್ಸ್‌


Team Udayavani, Aug 15, 2020, 9:44 PM IST

ಧೋನಿ ಹತ್ತಿರದಿಂದ ಕಂಡ ಸ್ಮರಣೀಯ ಇನ್ನಿಂಗ್ಸ್‌

ಧೋನಿಯ ಬ್ಯಾಟಿಂಗ್‌ ದಾಖಲೆ ಒಂದೆಡೆ ಇರಲಿ, ಅವರು ನಾನ್‌ ಸ್ಟ್ರೈಕಿಂಗ್‌ ತುದಿಯಲ್ಲಿ ನಿಂತು ವೀಕ್ಷಿಸಿದ ಜತೆಗಾರರ ಕೆಲವು ಅಪೂರ್ವ ಕ್ರಿಕೆಟ್‌ ಕ್ಷಣಗಳಿಗೆ ಸಾಕ್ಷಿಯಾದ ನಿದರ್ಶನಗಳನ್ನು ಮರೆಯುವಂತಿಲ್ಲ. ಬಹುಶಃ ಇಂಥ ಸೌಭಾಗ್ಯ ಎಲ್ಲ ಕ್ರಿಕೆಟಿಗರಿಗೂ ಬರುವುದಿಲ್ಲ.

 ಯುವರಾಜ್‌ 6 ಸಿಕ್ಸರ್
2007ರ ಟಿ20 ವಿಶ್ವಕಪ್‌ ಕೂಟದ ಡರ್ಬನ್‌ ಪಂದ್ಯದಲ್ಲಿ ಯುವರಾಜ್‌ ಸಿಂಗ್‌ ಇಂಗ್ಲೆಂಡಿನ ಸ್ಟುವರ್ಟ್‌ ಬ್ರಾಡ್‌ ಓವರಿನಲ್ಲಿ ಸತತ 6 ಸಿಕ್ಸರ್‌ ಬಾರಿಸಿದ ದೃಶ್ಯಾವಳಿ ಇನ್ನೂ ನಮ್ಮ ಕಣ್ಮುಂದಿದೆ. ಇದಕ್ಕೆ ಅತೀ ಹತ್ತಿರದಿಂದ ಸಾಕ್ಷಿಯಾದವರೆಂದರೆ ಧೋನಿ. ಆಗ ಅವರು ಕ್ರೀಸಿನ ಇನ್ನೊಂದು ತುದಿಯಲ್ಲಿದ್ದರು.

 ತೆಂಡುಲ್ಕರ್‌ ದ್ವಿಶತಕ, 50ನೇ ಟೆಸ್ಟ್‌ ಶತಕ
ಏಕದಿನ ಇತಿಹಾಸದ ಪ್ರಥಮ ದ್ವಿಶತಕ ಬಾರಿಸಿದ ಹೆಗ್ಗಳಿಗೆ ಸಚಿನ್‌ ತೆಂಡುಲ್ಕರ್‌ ಅವರದು. ಅದು 2010ರ ದಕ್ಷಿಣ ಆಫ್ರಿಕಾ ಎದುರಿನ ಗ್ವಾಲಿಯರ್‌ ಪಂದ್ಯ. ಸಚಿನ್‌ 200 ರನ್‌ ಬಾರಿಸಿ ಅಜೇಯರಾಗಿದ್ದರು. ಆಗ ಕ್ರಿಕೆಟ್‌ ದೇವರನ್ನು ಮೊದಲಿಗೆ ಹೋಗಿ ಆಭಿನಂದಿಸಿದವರೇ ಧೋನಿ. ಅವರು ಮತ್ತೂಂದು ತುದಿಯಲ್ಲಿ ಬ್ಯಾಟ್‌ ಹಿಡಿದು ನಿಂತಿದ್ದರು. ಮುಂದೆ ತೆಂಡುಲ್ಕರ್‌ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 50ನೇ ಶತಕ ಬಾರಿಸುತ್ತಾರೆ. ಅದು 2010ರ ಸೆಂಚುರಿಯನ್‌ ಟೆಸ್ಟ್‌ ಪಂದ್ಯ. ಆಗಲೂ ಧೋನಿ ನಾನ್‌ ಸ್ಟ್ರೈಕಿಂಗ್‌ ಎಂಡ್‌ನ‌ಲ್ಲಿದ್ದರು.

ರೋಹಿತ್‌ ಶರ್ಮ ಡಬಲ್‌ ಸೆಂಚುರಿ
ರೋಹಿತ್‌ ಶರ್ಮ ಅವರ ಚೊಚ್ಚಲ ದ್ವಿಶತಕದ ರೋಚಕ ಕ್ಷಣಗಳನ್ನೂ ನಾನ್‌ ಸ್ಟ್ರೈಕಿಂಗ್‌ ತುದಿಯಲ್ಲಿ ನಿಂತು ಸಂಭ್ರಮಿಸಿದ ಅದೃಷ್ಟಶಾಲಿ ಧೋನಿ! ಅದು 2013ರಲ್ಲಿ ಆಸ್ಟ್ರೇಲಿಯ ವಿರುದ್ಧ ಬೆಂಗಳೂರಿನಲ್ಲಿ ನಡೆದ ಮುಖಾಮುಖೀ. ರೋಹಿತ್‌ ಅಂದು 209 ರನ್‌ ಬಾರಿಸಿದ್ದರು.

ಸುರೇಶ್‌ ರೈನಾ ಟಿ20 ಶತಕ
ಸುರೇಶ್‌ ಟಿ20 ಇತಿಹಾಸದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ಹೊಂದಿದ್ದಾರೆ. 2010ರ ಟಿ20 ವಿಶ್ವಕಪ್‌ ಕೂಟದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗ್ರಾಸ್‌ ಐಲೆಟ್‌ ಅಂಗಳದಲ್ಲಿ ಅವರು 101 ರನ್‌ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಆಗಲೂ ಧೋನಿ ಅಂಗಳದಲ್ಲೇ ಇದ್ದು ಈ ಸಂಭ್ರಮದ ಕ್ಷಣವನ್ನು ಕಣ್ತುಂಬಿಸಿಕೊಂಡಿದ್ದರು!

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.